ಮುಡಾ ಪ್ರಾಸಿಕ್ಯೂಷನ್: ನ್ಯಾಯಾಲಯದಲ್ಲಿ ಏನಾಗುತ್ತೆ ನೋಡೋಣ ಎಂದ ಸಿದ್ದರಾಮಯ್ಯ

ಆಗಸ್ಟ್ 29, 2024 - 16:09
 0  12
ಮುಡಾ ಪ್ರಾಸಿಕ್ಯೂಷನ್: ನ್ಯಾಯಾಲಯದಲ್ಲಿ ಏನಾಗುತ್ತೆ ನೋಡೋಣ ಎಂದ ಸಿದ್ದರಾಮಯ್ಯ
FOCUS KARNATAKA Siddharamaya

ಮುಡಾ ಪ್ರಾಸಿಕ್ಯೂಷನ್: ನ್ಯಾಯಾಲಯದಲ್ಲಿ ಏನಾಗುತ್ತೆ ನೋಡೋಣ ಎಂದ ಸಿದ್ದರಾಮಯ್ಯ

ಸಿಂ ವಿರುದ್ಧ ಪ್ರಾಸಿಕ್ಯೂಷನ್ ಕುರಿತು ಇಂದು ವಿಚಾರಣೆ ಆರಂಭವಾಗಿದ್ದು, ಎಲ್ಲರೂ ರಾಜ್ಯದ ಸಿಎಂ ಭವಿಷ್ಯ ಏನಾಗಲಿದೆ ಎಂದು ಕುತೂಹಲದಿಂದ ಎದುರು ನೋಡುತ್ತಿದ್ದಾರೆ. ಇದೇ ವೇಳೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿಎಂ ಸಿದ್ದರಾಮಯ್ಯ ನ್ಯಾಯಾಲಯದಲ್ಲಿ ವಿಚಾರಣೆ ನಡೀತಾ ಇದೆ ಏನಾಗುತ್ತೆ ನೋಡೋಣ ಎಂದಷ್ಟೇ ಹೇಳಿ ಮಾತು ಮುಗಿಸಿದ್ದಾರೆ. ಪ್ರತಿಪಕ್ಷಗಳ ಬಗ್ಗೆಯೂ ಏನೂ ಪ್ರತಿಕ್ರಿಯೆ ನೀಡಲು ಹೋಗದೆ ಮೌನವಾಗಿದ್ದಾರೆ.

ಮುಡಾ ಹಗರಣಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧದ ರಾಜ್ಯಪಾಲರ ಪ್ರಾಸಿಕ್ಯೂಷನ್ ಅನುಮತಿ ಕುರಿತಾಗಿ ಹೈಕೋರ್ಟ್ ಆದೇಶ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.

ಈ ಕುರಿತಾಗಿ ಬೆಂಗಳೂರಿನಲ್ಲಿ ಗುರುವಾರ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿ, ನೋಡೋಣ, ನ್ಯಾಯಾಲಯದಲ್ಲಿ ವಿಚಾರಣೆ ನಡೀತಾ ಇದೆ. ಏನಾಗುತ್ತೆ ನೋಡೋಣ ಎಂದರು.

ಹೈಕೋರ್ಟ್ ಏಕ ಸದಸ್ಯ ಪೀಠದಲ್ಲಿ ಸಿಎಂ ಪ್ರಾಸಿಕ್ಯೂಷನ್ ವಿರುದ್ಧವಾಗಿ ಸಲ್ಲಿಸಿರುವ ಅರ್ಜಿ ವಿಚಾರಣೆ ಆರಂಭಗೊಂಡಿದೆ‌. ಸಿಎಂ ಸಿದ್ದರಾಮಯ್ಯ ಪರವಾಗಿ ಅಭಿಶೇಖ್ ಮನು ಸಿಂಗ್ವಿ ವಾದ ಮಂಡಿಸುತ್ತಿದ್ದಾರೆ.

ಇದೇ ಸಂದರ್ಭದಲ್ಲಿ 16ನೇ ಹಣಕಾಸು ಆಯೋಗದ ಸಭೆಯ ವಿಚಾರವಾಗಿಯೂ ಸಿಎಂ ಮಾತನಾಡಿದ್ದಾರೆ‌. ಪ್ರಧಾನ ಮಂತ್ರಿ ಮೋದಿ ಅವರು ಕೂಡಾ ಗುಜರಾತ್ ರಾಜ್ಯದ ಸಿಎಂ ಆಗಿದ್ದವರು. ಅವರಿಗೆ ರಾಜ್ಯಗಳಿಗೆ ಎಷ್ಟು ಪಾಲು ಕೊಡಬೇಕು ಎಂಬುದು ಗೊತ್ತಿರುತ್ತೆ.
ನಾವು ನಮ್ಮ ಬೇಡಿಕೆ ಹೇಳಿದ್ದೇವೆ. ನೋಡೋಣ, ಅವರು ಎಷ್ಟು ಕೊಡುತ್ತಾರೆ ಎಂದರು.

ಸಿಎಂ ಪರವಾಗಿ ಹಿರಿಯ ವಕೀಲ ಅಭಿಷೇಕ್‌ ಮನು ಸಿಂಘ್ವಿ ವಾದಿಸಿದ್ದರು. ಪ್ರಾಸಿಕ್ಯೂಷನ್‌ ಆದೇಶ ರದ್ದುಪಡಿಸಬೇಕು ಎನ್ನುವುದು ಸಿಎಂ ಪರ ವಕೀಲರ ವಾದವಾಗಿದೆ. ಈ ವಾದ ಆಲಿಸಿದ ನ್ಯಾಯಾಲಯ ವಿಚಾರಣೆಯನ್ನು ಆಗಸ್ಟ್‌ 29ಕ್ಕೆ ಮುಂದೂಡುವುದರ ಜತೆಗೆ, ‘‘ಈ ವಿಚಾರದಲ್ಲಿ ಬಲವಂತದ ಕ್ರಮ ಜರುಗಿಸಬಾರದು,’’ ಎಂದು ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ಗೆ ಸೂಚಿಸಿತ್ತು. ಅದರಂತೆ ಗುರುವಾರ ಈ ಕುರಿತ ವಿಚಾರಣೆ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿರುವ ಪೀಠದ ಮುಂದೆ ನಡೆಯಲಿದೆ.

 ಪ್ರಕರಣ ಸಂಬಂಧ ವಾದ-ಪ್ರತಿವಾದಗಳನ್ನು ನ್ಯಾಯಪೀಠ ಆಲಿಸಲಿದ್ದು, ಬಳಿಕ ತನ್ನ ತೀರ್ಪು ಪ್ರಕಟಿಸುವ ನಿರೀಕ್ಷೆಯಿದೆ. ಇದೊಂದು ಗಂಭೀರ ವಿಚಾರವಾಗಿದ್ದು, ರಾಜಭವನದ ಆದೇಶಕ್ಕೆ ತಡೆ ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯಾಗಿದೆ. ಸಂವಿಧಾನಾತ್ಮಕ ವಿಚಾರಗಳೂ ಅಡಕವಾಗಿರುವ ಹಿನ್ನೆಲೆಯಲ್ಲಿ ತೀರ್ಪಿನ ಬಗ್ಗೆ ಕುತೂಹಲ ಮೂಡಿದೆ.

ವೆಬ್ ಡೆಸ್ಕ್
ಫೋಕಸ್ ಕರ್ನಾಟಕ

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow