Darshan: ದರ್ಶನ್ ಮೈಸೂರಿಗೆ ಹೋಗಲು ಅನಮತಿ ಕೇಳಲು ಕಾರಣ ಏನು ಗೊತ್ತಾ?

ಡಿಸೆಂಬರ್ 19, 2024 - 21:17
ಡಿಸೆಂಬರ್ 19, 2024 - 16:33
 0  21
Darshan: ದರ್ಶನ್ ಮೈಸೂರಿಗೆ ಹೋಗಲು ಅನಮತಿ ಕೇಳಲು ಕಾರಣ ಏನು ಗೊತ್ತಾ?

ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಪ್ರಕಣಕ್ಕೆ ಸಂಬಂಧಿಸಿದಂತೆ ಜಾಮೀನು ಸಿಕ್ಕರು ಟೆನ್ಶನ್‌ ಮಾತ್ರ ತಪ್ಪಿಲ್ಲ. ಸುಪ್ರೀಂ ಕೋರ್ಟ್ ಮೊರೆ ಹೋಗಲು ಪೊಲೀಸರ ಸಿದ್ಧತೆ ಭರ್ಜರಿಯಾಗಿಯೇ ನಡೆಯುತ್ತಿದೆ ಎನ್ನಲಾಗಿದೆ. ದರ್ಶನ್ ಆ್ಯಂಡ್‌ ಗ್ಯಾಂಗ್‌ಗೆ ಹೈಕೋರ್ಟ್‌ನಲ್ಲಿ ಜಾಮೀನು ಮಂಜೂರು ಆದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಬೆಂಗಳೂರು ಪೊಲೀಸರ ಸಿದ್ದತೆ ಮಾಡುತ್ತಿದ್ದಾರೆ ಎನ್ನಲಾಗಿದೆ.

ಇದರ ಬೆನ್ನಲ್ಲೇ ನಟ ದರ್ಶನ್​ ಚಿಕಿತ್ಸೆಗಾಗಿ ಮೈಸೂರಿಗೆ ತೆರಳಲು ಅವಕಾಶ ನೀಡಬೇಕು ಎಂದು ಸೆಷನ್ಸ್​ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ಮಾಹಿತಿ ದೊರೆತಿದೆ. ರೆಗ್ಯೂಲರ್​ ಬೇಲ್​ ಪಡೆದು ಹೊರಬಂದಿರುವ ನಟ ದರ್ಶನ್​ ನೆನ್ನೆಯಷ್ಟೆ ಬಿಜಿಎಸ್​ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದಾರೆ. ಇದರ ನಡುವೆಯೆ ದರ್ಶನ್​ ಸೆಷನ್ಸ್​ ಕೋರ್ಟ್​ಗೆ ಮೈಸೂರಿಗೆ ತೆರಳಲು ಅವಕಾಶ ನೀಡಬೇಕು ಎಂದು ಅರ್ಜಿ ಸಲ್ಲಿಸಿದ್ದು.

4 ವಾರಗಳ ಕಾಲ ಮೈಸೂರಿನಲ್ಲಿ ಚಿಕಿತ್ಸೆ ಪಡೆಯಲು ಅನುಮತಿ ಕೋರಿದ್ದಾರೆ. ಇದರ ಮಧ್ಯದಲ್ಲಿ ನ್ಯಾಯಾಲಯ ಅಕ್ಷೇಪಣೆಗಳಿದ್ದರೆ ಸಲ್ಲಿಸುವಂತೆ SPP ಗೆ ಸೂಚನೆ ನೀಡಿದೆ ಎಂದು ತಿಳಿದು ಬಂದಿದೆ. ದರ್ಶನ್​ಗೆ ರೆಗ್ಯೂಲರ್​ ಜಾಮೀನು ನೀಡಿ ಆದೇಶ ಹೊರಡಿಸಿರುವ ಹೈಕೋರ್ಟ್​ ಸೆಷನ್ಸ್​ ನ್ಯಾಯಾಲಯದ ವ್ಯಾಪ್ತಿಯನ್ನು ಬಿಟ್ಟ ಹೋಗುವಂತಿಲ್ಲ ಎಂದು ಷರತ್ತು ವಿಧಿಸಿದೆ. ಇದೇ ಕಾರಣಕ್ಕೆ ದರ್ಶನ್​ ಮೈಸೂರಿಗೆ ತೆರಳಿ ಚಿಕಿತ್ಸೆ ಪಡೆಯಲು ನ್ಯಾಯಾಲಯದ ಬಳಿ ಅರ್ಜಿ ಸಲ್ಲಿಸಿದ್ದಾರೆ.

ಸದ್ಯ ಇದಕ್ಕೆ ಅನುಮತಿ ಕೊಡದಂತೆ ಅಕ್ಷೇಪಣೆ ಸಲ್ಲಿಕೆ ಕೂಡ ಆಗಿದೆ. ಸರ್ಕಾರದ ಪರವಾಗಿ ಎಸ್ಪಿಪಿ‌ ಸಚಿನ್ ಚಂದ್ರಹಾಸರಿಂದ ವಾದ ಮಾಡಿದ್ದಾರೆ ಎನ್ನಲಾಗಿದೆ. ಅನುಮತಿ ನೀಡದಂತೆ ವಾದ ಮಂಡನೆ ಕೂಡ ಆಗುತ್ತಿದೆ. ಸೋಮವಾರಕ್ಕೆ ಅದೇಶ ಕಾಯ್ದಿರಿಸಿದೆ ನ್ಯಾಯಾಲಯ.

 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow