ರಾಜಾತಿಥ್ಯ ಹಿನ್ನಲೆ, ಹಿಂಡಲಗ ಜೈಲಿಗೆ ಡಿ-ಗ್ಯಾಂಗ್ ಶಿಫ್ಟ್..?

ರಾಜಾತಿಥ್ಯ ಹಿನ್ನಲೆ, ಹಿಂಡಲಗ ಜೈಲಿಗೆ ಡಿ-ಗ್ಯಾಂಗ್ ಶಿಫ್ಟ್..?
ನಟ ದರ್ಶನ್ ಅವರು ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ರಾಜಾತಿಥ್ಯ ಪಡೆಯುತ್ತಿದ್ದಾರೆ ಅನ್ನೋದು ಬಹಿರಂಗವಾಗಿತ್ತು. ಜೈಲಿನ ಆವರಣದಲ್ಲಿ ಕಾಫಿ ಕುಡಿಯುತ್ತಾ, ಸಿಗರೇಟ್ ಸೇದುತ್ತಾ ಉಳಿದ ರೌಡಿ ಶೀಟರ್ಗಳ ಜೊತೆ ಕುಳಿತು ದರ್ಶನ್ ಹರಟೆ ಹೊಡೆಯುತ್ತಿರುವ ಫೋಟೋ ವೈರಲ್ ಆಗಿತ್ತು. ಇದರ ಜೊತೆಗೆ ವಿಡಿಯೋ ಕಾಲ್ನಲ್ಲಿಯೂ ಅವರು ಮಾತನಾಡಿದ್ದರು. ಈಗ ದರ್ಶನ್ ಅವರನ್ನು ನಿಯಂತ್ರಣಕ್ಕೆ ತರಲು ಜೈಲಧಿಕಾರಿಗಳು ಮಹತ್ವದ ಕ್ರಮಕ್ಕೆ ಮುಂದಾಗಿದ್ದಾರೆ.
ನಟ ದರ್ಶನ್ ಅಂಡ್ ಗ್ಯಾಂಗ್ನಾ ಹಿಂಡಲಗ ಜೈಲಿಗೆ ಶಿಫ್ಟ್ ಮಾಡಲು ಅಧಿಕಾರಿಗಳ ತಯಾರಿ ನಡೆಸಿದ್ದಾರೆ. ಜೈಲಿನ ಫೋಟೋ ವಿಡಿಯೊ ವೈರಲ್ ಬೆನ್ನಲ್ಲೆ ಈ ಮುಜುಗರದಿಂದ ತಪ್ಪಿಸಿಕೊಳ್ಳಲು ಜೈಲಾಧಿಕಾರಿಗಳಿಂದ ದರ್ಶನ್ ಅಂಡ್ ಟೀಮ್ ಬೇರೆ ಜೈಲಿಗೆ ಶಿಫ್ಟ್ ಮಾಡಲು ತಯಾರಿಯನ್ನ ನಡೆಸಿದ್ದಾರೆ. ಹಿಂಡಲಗ ಜೈಲಿನಲ್ಲಿ 15 ಕೋಣೆಗೆಳು ಖಾಲಿಯಿದ್ದು ಇಂದೇ ದರ್ಶನ್ ಅಂಡ್ ಟೀಮ್ನ ಶಿಫ್ಟ್ ಮಾಡೋ ಸಾಧ್ಯತೆ ಇದೆ.
ವೆಬ್ ಡೆಸ್ಕ್
ಫೋಕಸ್ ಕರ್ನಾಟಕ
ನಿಮ್ಮ ಪ್ರತಿಕ್ರಿಯೆ ಏನು?






