ಲಂಡನ್ ನಲ್ಲಿ ಲಕ್ಷ-ಲಕ್ಷ ಸಂಬಳ ಸಿಗುತ್ತೆ ಎಂದು ನಂಬಿಸಿ ಯುವಕನಿಗೆ ವಂಚಿಸಿ ಕೊಲೆ!

ಜೂನ್ 30, 2025 - 22:08
 0  12
ಲಂಡನ್ ನಲ್ಲಿ ಲಕ್ಷ-ಲಕ್ಷ ಸಂಬಳ ಸಿಗುತ್ತೆ ಎಂದು ನಂಬಿಸಿ ಯುವಕನಿಗೆ ವಂಚಿಸಿ ಕೊಲೆ!

ಚಿಕ್ಕಬಳ್ಳಾಪುರ:- ಲಂಡನ್​​ನಲ್ಲಿ ಕೆಲಸ ಕೊಡಿಸುವುದಾಗಿ ಕರೆದುಕೊಂಡು ಹೋಗಿ ವಂಚಿಸಿ ಬಳಿಕ ಯುವಕನನ್ನು ಕೊಲೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ಜರುಗಿದೆ. ಪ್ರಕರಣವನ್ನು ಬೇಧಿಸಿರುವ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಜಿ ರಾಮಪುರ ಗ್ರಾಮದ ರಾಮಾಂಜಿ (30) ಕೊಲೆಯಾದ ವ್ಯಕ್ತಿ. ಇತ್ತೀಚೆಗೆ ಚಿಂತಾಮಣಿ ತಾಲೂಕಿನ ಕೆಂಪದೇನಹಳ್ಳಿ ತೋಟದ ಬಾವಿಯಲ್ಲಿ ಶವ ಒಂದು ಪತ್ತೆ ಆಗಿತ್ತು. ಈ ಪ್ರಕರಣವನ್ನು ಬೇಧಿಸಿರುವ ಪೊಲೀಸರು ಸುಧಾಕರ್, ಮನೋಜ್ ಮತ್ತು ಮಂಜುನಾಥ್​ರನ್ನು ಪೊಲೀಸರು ಬಂಧಿಸಿದ್ದಾರೆ. 

ಇನ್ನೂ ಎಂಎಸ್ಸಿ ಪದವೀಧರನಾಗಿದ್ದ ರಾಮಾಂಜಿ, ಬೆಂಗಳೂರಿನ ಯಲಹಂಕದಲ್ಲಿ ಕೊಚಿಂಗ್ ಸೆಂಟರ್​ನಲ್ಲಿ ಉಪನ್ಯಾಸಕನಾಗಿ ಕೆಲಸ ಮಾಡಿಕೊಂಡಿದ್ದ. ಆದರೆ ಈತನ ದುರಾದೃಷ್ಟಕ್ಕೆ ಇದೇ ರಾಮಾಂಜಿ ಸ್ವಗ್ರಾಮ ಜಿ ರಾಮಪುರದ ಪಕ್ಕದಲ್ಲೇ ಇರುವ ದೊಡ್ಡ ಗುಟ್ಟಹಳ್ಳಿಯ ಸುಧಾಕರ್ ಎಂಬಾತನ ಪರಿಚಯವಾಗಿದೆ. ಬೆಂಗಳೂರಲ್ಲಿ ಖಾಸಗಿ ಫೈನಾನ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಸುಧಾಕರ್​, ನೀನು ಡಿಗ್ರಿ ಮಾಡಿದ್ದೀಯಾ, ಇಲ್ಲಿ ಕೆಲಸ ಮಾಡಿದರೆ ಸಾವಿರಾರು ರೂ ಅಷ್ಟೇ ಸಂಬಂಳ. ಅದೇ ಲಂಡನ್​ನಲ್ಲಿ ಕೆಲಸ ಮಾಡಿದರೆ ಲಕ್ಷಾಂತರ ರೂ ಸಂಬಳ ಕೊಡುತ್ತಾರೆ ಎಂದು ನಂಬಿಸಿದ್ದಾನೆ.

ನನಗೆ ಅವರು ಗೊತ್ತು, ಇವರು ಗೊತ್ತು ನಿನಗೆ ಲಂಡನ್​ನಲ್ಲಿ ಕೆಲಸ ಕೊಡಿಸಿತ್ತೇನೆ. ಆದರೆ ಅದಕ್ಕೆ ಮೊದಲೇ ಅವರಿಗೆ ದುಡ್ಡು ಕೊಡಬೇಕು ಅಂತ ನಯವಾದ ಮಾತುಗಳಿಂದ ಸುಮಾರು 11 ಲಕ್ಷ ರೂ ಹಣ ಪಡೆದುಕೊಂಡು ಮೋಜು, ಮಸ್ತಿ ಮಾಡಿ ವಂಚನೆ ಮಾಡಿದ್ದಾನೆ. ರಾಮಾಂಜಿ ಯಾವಾಗ ಕೆಲಸ ಕೊಡಿಸುತ್ತೀಯಾ ಅಂತ ಕೇಳಿದ್ದಕ್ಕೆ ಇಂದು, ನಾಳೆ ಆಗುತ್ತೆ. ವೀಸಾ ಸಮಸ್ಯೆ ಅಂತ ಕಥೆ ಹೊಡ್ಕೊಂಡು ಕೆಲವು ಸರಿ ಏರ್​ಪೋರ್ಟ್​​ಗೆ ಕರೆದುಕೊಂಡು ಹೋಗಿ ಅಲ್ಲಿಂದ ಏನೋ ಕಾರಣ ಹೇಳಿ ವಾಪಾಸ್ ಕರೆದುಕೊಂಡು ಬಂದು ದಿನ ಕಳೆದಿದ್ದಾನೆ.

ಇತ್ತ ರೋಸಿ ಹೋದ ರಾಮಾಂಜಿ, ಕೆಲಸ ಕೊಡಿಸು, ಇಲ್ಲ ದುಡ್ಡು ವಾಪಾಸ್ ಕೊಡು ಅಂತ ಗಟ್ಟಿಯಾಗಿ ಕೇಳಿದ್ದೇ ತಡ, ಕೊನೆಗೆ ಉಪನ್ಯಾಸ ರಾಮಾಂಜಿಯನ್ನು ಲಂಡನ್​ಗೆ ಕರೆದುಕೊಂಡು ಹೋಗುವುದರ ಬದಲು ನೇರವಾಗಿ ಯಮಲೋಕ್ಕೆ ಕಳುಹಿಸಿದ್ದಾನೆ.

ಕೊಟ್ಟ ದುಡ್ಡನ್ನ ರಾಮಾಂಜಿ ಯಾವಾಗ ಕೇಳಿದ್ನೋ, ಆಗ ಸುಧಾಕರ್ ರಾಮಾಂಜಿಯನ್ನೇ ಕೊಲೆ ಮಾಡುವ ಪ್ಲ್ಯಾನ್​ ಮಾಡಿದ್ದಾನೆ. ತನ್ನ ಸಹೋದರ ಮನೋಜ್ ಹಾಗೂ ತನ್ನ ಸಹೋದ್ಯೋಗಿ ಮಂಜುನಾಥ್ ಜೊತೆ ಸೇರಿ ರಾಮಾಂಜಿ ಹತ್ಯೆಗೆ ಸಂಚು ರೂಪಿಸಿದ್ದಾರೆ. 

ಬಾಡಿಗೆಗೆ ಅಂತ ಥಾರ್ ಕಾರು ಪಡೆದು ಸೀದಾ ರಾಮಾಂಜಿ ಮನೆಗೆ ಹೋಗಿ ಬಾ ಕೆಲಸ ಕನ್ಪರ್ಮ್ ಆಯ್ತು ನಿನ್ನ ಲಂಡನ್​ಗೆ ಕಳುಹಿಸಿ ಕೊಡುತ್ತೇವೆ ಅಂತ ಜೂನ್ 16 ರಂದು ಕಾರಲ್ಲಿ ಕೂರಿಸಿಕೊಂಡು ಹೋಗಿದ್ದಾರೆ

ಮಧ್ಯ ದಾರಿಯಲ್ಲಿ ಚಿಂತಾಮಣಿ ತಾಲೂಕಿನ ಕೆಂಪದೇನಹಳ್ಳಿ ಬಳಿ ಥಾರ್ ಕಾರಿನಲ್ಲಿ ಮುಂಬದಿ ಕೂತಿದ್ದವನ ಕುತ್ತಿಗೆಯನ್ನ ಹಗ್ಗದಿಂದ ಬಿಗಿದು ಕೊಲೆ ಮಾಡಿದ್ದಾರೆ. ಬಳಿಕ ಮೊದಲೇ ನೋಡಿದ್ದ ಕೆಂಪದೇನಹಳ್ಳಿ ಬಳಿಯ ಬಾವಿಯಲ್ಲಿ ರಾಮಾಂಜಿ ಮೃತದೇಹಕ್ಕೆ ದೊಡ್ಡ ದೊಡ್ಡ ಸೈಜುಗಲ್ಲುಗಳನ್ನ ಕಟ್ಟಿ ಶವ ಮೇಲೆ ಬರಬಾರದು ಅಂತ ಬಾವಿಗೆ ಬಿಸಾಡಿದ್ದಾರೆ. ಇದೀಗ ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow