ಲಕ್ಷ್ಮೀ ಪೂಜೆಗೆ ಶುಕ್ರವಾರ ಬೆಸ್ಟ್ ವಾರ: ಯಾವೆಲ್ಲಾ ನಿಯಮ ಪಾಲಿಸಬೇಕು ಗೊತ್ತಾ!?

ಶುಕ್ರವಾರದ ದಿನದಂದು ಲಕ್ಷ್ಮಿ ಪೂಜೆ ಮಾಡುವುದಕ್ಕೆ ಮತ್ತು ಉಪವಾಸ ವ್ರತವನ್ನು ಆಚರಿಸುವುದಕ್ಕೆ ಹೆಚ್ಚಿನ ಪ್ರಧಾನ್ಯತೆಯಿದೆ. ಧರ್ಮಗ್ರಂಥಗಳ ಪ್ರಕಾರ, ಲಕ್ಷ್ಮಿ ದೇವಿಯ ಪೂಜೆ ಮತ್ತು ಆಕೆಯ ಹೆಸರಿನಲ್ಲಿ ಮಾಡುವ ಉಪವಾಸದ ವ್ರತವು ನಮ್ಮನ್ನು ಹಣದ ಸಮಸ್ಯೆಗಳಿಂದ ಪಾರು ಮಾಡುತ್ತದೆ. ಧನಾಗಮನವಾಗುವಂತೆ ಮಾಡುತ್ತದೆ. ನಮ್ಮ ಜೀವನದಲ್ಲಿ ಸಂತೋಷ, ಸಮೃದ್ಧಿ ಮತ್ತು ಅದೃಷ್ಟವನ್ನು ತರುತ್ತದೆ. ಸ್ತ್ರೀ ಮತ್ತು ಪುರುಷರಿಬ್ಬರೂ ಶುಕ್ರವಾರ ವ್ರತವನ್ನು ಮಾಡಬಹುದು. ಇದು ನಮಗೆ ಭೌತಿಕ ಸಂತೋಷವನ್ನು ಕರುಣಿಸುತ್ತದೆ.
ಹಿಂದೂ ಸಂಪ್ರದಾಯವು ಶುಕ್ರವಾರಕ್ಕೆ ಸಂಬಂಧಿಸಿದ ಪೂಜೆ ಮತ್ತು ಆಚರಣೆಗಳಿಗೆ ಸಂಬಂಧಿಸಿದಂತೆ ಕೆಲವು ವಿಶೇಷ ನಿಯಮಗಳನ್ನು ಹೊಂದಿದೆ. ಈ ನಿಯಮಗಳನ್ನು ಪಾಲಿಸಿದರೆ ಲಕ್ಷ್ಮಿ ದೇವಿಯು ಭಕ್ತರನ್ನು ಸದಾ ಮೆಚ್ಚಿಸುತ್ತಾಳೆ ಮತ್ತು ಮನೆಯಲ್ಲಿ ಯಾವುದೇ ಕೊರತೆ ಕಾಣಬರುವುದಿಲ್ಲ ಎಂಬ ನಂಬಿಕೆಯಿದೆ. ಆ ವಿಶೇಷ ನಿಯಮಗಳೇನು ಎಂಬುದನ್ನು ಇಂದು ತಿಳಿದುಕೊಳ್ಳೋಣ...
ಲಕ್ಷ್ಮಿ ದೇವಿಯು ಶುದ್ಧವಾದ ಸ್ಥಳದಲ್ಲಿ ಮಾತ್ರ ನೆಲೆಸುತ್ತಾಳೆ ಎಂದು ನಂಬಲಾಗಿದೆ. ಆದ್ದರಿಂದ ಶುಕ್ರವಾರದಂದು ಮನೆಯ ಮುಂದೆ ಗುಡಿಸಿ ಸಾರಿಸಿ ರಂಗೋಲಿ ಹಾಕಿ, ಮನೆಯೊಳಗಡೆಯೂ ಸ್ವಚ್ಛಗೊಳಿಸಿ, ಪೂಜಾ ಸ್ಥಳವನ್ನು ಗಂಗಾಜಲದಿಂದ ಶುದ್ಧೀಕರಿಸಿ ಮತ್ತು ಲಕ್ಷ್ಮಿ ದೇವಿಗೆ ಪೂಜೆ ಮಾಡಿ.
ಲಕ್ಷ್ಮಿ ದೇವಿಯು ಸಮುದ್ರದಿಂದ ಜನಿಸಿದಳು ಎಂದು ಹಿಂದೂಗಳು ನಂಬುತ್ತಾರೆ. ಆದ್ದರಿಂದ ಅವಳು ಬಿಳಿ ಬಣ್ಣವನ್ನು ಇಷ್ಟಪಡುತ್ತಾಳೆ. ಹಾಗಾಗಿ ಶುಕ್ರವಾರದಂದು ಬಿಳಿ ಬಟ್ಟೆಯನ್ನು ಧರಿಸುವುದು ಮಾತ್ರವಲ್ಲದೆ ಹಾಲಿನಿಂದ ಮಾಡಿದ ಆಹಾರವು ದೇವಿಯ ಕೃಪೆಗೆ ಉತ್ತಮವಾಗಿದೆ.
ಕೇಸರಿ ಹೂವು, ಅಕ್ಕಿಯೊಂದಿಗೆ ಪಾಯಸವನ್ನು ಲಕ್ಷ್ಮಿ ದೇವಿಗೆ ಅರ್ಪಿಸಬಹುದು. ಇವುಗಳನ್ನು ದೇವಿಗೆ ಅರ್ಪಿಸಲು ಸಾಧ್ಯವಾಗದಿದ್ದರೆ ಬೆಣ್ಣೆ, ಹಾಲು ಮತ್ತು ಶ್ರೀ ಫಲವನ್ನು ಅರ್ಪಿಸಬಹುದು.
ತುಳಸಿ ಗಿಡವನ್ನು ಪೂಜಿಸುವ ಮನೆಯಲ್ಲಿ ಲಕ್ಷ್ಮಿ ದೇವಿ ನೆಲೆಸಿದ್ದಾಳೆ ಎಂದು ನಂಬಲಾಗುತ್ತದೆ. ನಿಯಮಗಳ ಪ್ರಕಾರ ಶುಕ್ರವಾರದಂದು ತುಳಸಿ ಗಿಡ ಮತ್ತು ಸಾಲಿಗ್ರಾಮಗಳನ್ನು ಪೂಜಿಸಬೇಕು. ಹೀಗೆ ಮಾಡುವುದರಿಂದ ಲಕ್ಷ್ಮಿ ದೇವಿಗೆ ತುಂಬಾ ಸಂತೋಷವಾಗುತ್ತದೆ ಮತ್ತು ಬಯಸಿದ ವರವನ್ನು ನೀಡುತ್ತಾಳೆ. ತುಳಸಿ ಗಿಡದ ಬಳಿ ಬೆಳಗ್ಗೆ ಮತ್ತು ಸಂಜೆ ತುಪ್ಪದ ದೀಪವನ್ನು ಹಚ್ಚಬೇಕು.
ಶುಕ್ರವಾರದಂದು ಮಹಿಳೆಯರು ತಮ್ಮ ಪಾದಗಳಿಗೆ ಕುಂಕುಮ ಮತ್ತು ಅರಿಶಿನವನ್ನು ಹಚ್ಚಿಕೊಳ್ಳುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಹೀಗೆ ಮಾಡುವುದರಿಂದ ಲಕ್ಷ್ಮಿ ದೇವಿಯ ಕೃಪೆಗೆ ಪಾತ್ರರಾಗುತ್ತಾರೆ. ಸಂಪತ್ತು-ಸಮೃದ್ಧಿಯೊಂದಿಗೆ ನಿರಂತರ ಅದೃಷ್ಟವನ್ನು ಪಡೆಯುತ್ತಾನೆ
ಯಾವುದೇ ಮಹಿಳೆಯೊಂದಿಗೆ ಅಸಭ್ಯವಾಗಿ ಮಾತನಾಡಬೇಡಿ. ಅದೇ ಸಮಯದಲ್ಲಿ ಮಕ್ಕಳು ಮತ್ತು ವೃದ್ಧರ ಹೃದಯವನ್ನು ನೋಯಿಸಬೇಡಿ. ಹೀಗೆ ಮಾಡುವವರ ಬಗ್ಗೆ ಲಕ್ಷ್ಮಿ ದೇವಿಯು ಅಸಮಾಧಾನಗೊಳ್ಳುತ್ತಾಳೆ. ಅಂತಹ ಜನರು ಯಾವಾಗಲೂ ಬಳಲುತ್ತಾರೆ ಎಂದು ನಂಬಲಾಗಿದೆ. ಈ ದಿನದಂದು ಭಗವಾನ್ ಲಕ್ಷ್ಮೀನಾರಾಯಣ ರೂಪವನ್ನು ಪೂಜಿಸುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ.
ನಿಮ್ಮ ಪ್ರತಿಕ್ರಿಯೆ ಏನು?






