ವಿಜಯಪುರದಲ್ಲಿ ಭಯಾನಕ ಘಟನೆ: ಕಾಲುವೆಗೆ ಮಕ್ಕಳನ್ನು ಎಸೆದು ಆತ್ಮಹತ್ಯೆಗೆ ಯತ್ನಿಸಿದ ತಾಯಿ ಬಚಾವ್! ನಾಲ್ವರು ಜಲಸಮಾಧಿ!

ಜನವರಿ 13, 2025 - 16:07
 0  27
ವಿಜಯಪುರದಲ್ಲಿ ಭಯಾನಕ ಘಟನೆ: ಕಾಲುವೆಗೆ ಮಕ್ಕಳನ್ನು ಎಸೆದು ಆತ್ಮಹತ್ಯೆಗೆ ಯತ್ನಿಸಿದ ತಾಯಿ ಬಚಾವ್! ನಾಲ್ವರು ಜಲಸಮಾಧಿ!

ವಿಜಯಪುರ:- ವಿಜಯಪುರದಲ್ಲಿ ಭಯಾನಕ ಘಟನೆಯೊಂದು ವರದಿ ಆಗಿದ್ದು, ಮಾನವೀಯ ಮನುಷ್ಯರು ಮರುಕಪಡುವಂತಹ ಸುದ್ದಿ ಇದೀಗ ನಡೆದು ಬಿಟ್ಟಿದೆ. 

ಜಿಲ್ಲೆಯ ನಿಡಗುಂದಿ ತಾಲೂಕಿನ ಬೇನಾಳ ಗ್ರಾಮದ ಬಳಿಯ ಆಲಮಟ್ಟಿ ಎಡದಂಡೆ ಮುಖ್ಯ ಕಾಲುವೆಯಲ್ಲಿ ನಾಲ್ವರು ಮಕ್ಕಳನ್ನು ಕಾಲುವೆಗೆ ಎಸೆದು ತಾಯಿ ಕೂಡ ಆತ್ಮಹತ್ಯೆಗೆ ಯತ್ನಿಸಿರುವಂತಹ ಘಟನೆ  ಜರುಗಿದೆ. 

5 ವರ್ಷದ ತನು ನಿಂಗರಾಜ‌ ಭಜಂತ್ರಿ, 3 ವರ್ಷದ ರಕ್ಷಾ ಭಜಂತ್ರಿ, 2 ವರ್ಷ 13 ತಿಂಗಳ ಹಸೇನ್ ನಿಂಗರಾಜ ಭಜಂತ್ರಿ ಮೃತ ಮಕ್ಕಳು ಎಂದು ಗುರುತಿಸಲಾಗಿದೆ. ಮೃತರು ಕೊಲ್ಹಾರ ತಾಲೂಕಿನ ತೆಲಗಿ ಗ್ರಾಮದ ನಿವಾಸಿಗಳು ಎಂದು ತಿಳಿದುಬಂದಿದೆ. ಕೌಟುಂಬಿಕ ಕಲಹವೇ ಘಟನೆಗೆ ಕಾರಣ ಎನ್ನಲಾಗಿದೆ.

ಕಾಲುವೆಗೆ ಜಿಗಿದಿದ್ದ ತಾಯಿ ಭಾಗ್ಯಳನ್ನು ಸ್ಥಳೀಯರು ರಕ್ಷಿಸಿದ್ದಾರೆ. ಕಾಲುವೆಯಿಂದ ತನು, ರಕ್ಷಾ ಮೃತದೇಹವನ್ನು ಮೀನುಗಾರರು ಹೊರತೆಗೆದಿದ್ದು, ಮತ್ತಿಬ್ಬರ ಮೃತದೇಹ ಪತ್ತೆಗಾಗಿ ಶೋಧ ಕಾರ್ಯ ಮುಂದುವರೆದಿದೆ. ನಿಡಗುಂದಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow