ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿ ಮುಂದುವರೆಯುವುದು ಸೂರ್ಯ ಚಂದ್ರ ಇರುವುಷ್ಟೇ ಸತ್ಯ: ರೇಣುಕಾಚಾರ್ಯ

ಮಾರ್ಚ್ 8, 2025 - 16:01
 0  12
ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿ ಮುಂದುವರೆಯುವುದು ಸೂರ್ಯ ಚಂದ್ರ ಇರುವುಷ್ಟೇ ಸತ್ಯ: ರೇಣುಕಾಚಾರ್ಯ

ಚಿಕ್ಕಮಗಳೂರು: ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಮುಂದುವರೆಯುವುದು ಸೂರ್ಯ ಚಂದ್ರ ಇರುವುಷ್ಟೇ ಸತ್ಯ ಎಂದು ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯ ಹೇಳಿದ್ದಾರೆ. ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಮುಂದುವರೆಯುವುದು ಸೂರ್ಯ ಚಂದ್ರ ಇರುವುಷ್ಟೇ ಸತ್ಯ.

ಅವರ ನೇತೃತ್ವದಲ್ಲಿ ಮುಂದಿನ ಚುನಾವಣೆ ಎದುರಿಸುತ್ತೇವೆ. ರಾಜ್ಯಾಧ್ಯಕ್ಷರ ಬದಲಾವಣೆ ಮಾಡ್ತೀವಿ ಎನ್ನುತ್ತಿರುವವರ ಹಣೆಯಲ್ಲೂ ಅದು ಬರೆದಿಲ್ಲ. ತಾಕತ್ತಿದ್ದರೆ ರಾಜ್ಯಾಧ್ಯಕ್ಷ ಬದಲಾವಣೆ ಮಾಡಲಿ ಎಂದು ಸವಾಲು ಹಾಕಿದ್ದಾರೆ.

ನಮ್ಮ ಹೈಕಮಾಂಡ್ ವಿಜಯೇಂದ್ರ ಅವರ ಪರವಾಗಿದೆ. ಎಲ್ಲಾ ಸಮುದಾಯದವರು ಅವರ ಜೊತೆಗಿದ್ದಾರೆ. ಯತ್ನಾಳ್‌ ಪರ ಯಾರಿದ್ದಾರೆ? ಸೊರಬದಲ್ಲಿ ಐದಾರು ಜನ ಇದ್ದಾರೆ. ವಿಜಯೇಂದ್ರ ಅವರು ಸಮರ್ಥ ರಾಜ್ಯಧ್ಯಕ್ಷ ಎಂದು ಅವರು ಹೇಳಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow