ಶಿವನನ್ನು ಒಲಿಸಿಕೊಳ್ಳಲು ಪೂಜೆಯಲ್ಲಿ ಯಾವ ಧಾನ್ಯಗಳನ್ನು ಅರ್ಪಿಸಿದರೆ ಒಳ್ಳೆಯದು ಗೊತ್ತಾ?

ಮಾರ್ಚ್ 11, 2025 - 07:04
ಮಾರ್ಚ್ 10, 2025 - 20:06
 0  10
ಶಿವನನ್ನು ಒಲಿಸಿಕೊಳ್ಳಲು ಪೂಜೆಯಲ್ಲಿ ಯಾವ ಧಾನ್ಯಗಳನ್ನು ಅರ್ಪಿಸಿದರೆ ಒಳ್ಳೆಯದು ಗೊತ್ತಾ?

ಯಾರು ಶಿವನ ಆಶೀರ್ವಾದ ಅಥವಾ ಕೃಪೆಗೆ ಒಳಗಾಗುತ್ತಾರೋ ಅಂತಹವರು ಮುಕ್ತಿ ಹಾಗೂ ಮೋಕ್ಷದ ಕುರಿತಾಗಿ ಹೆಚ್ಚು ಚಿಂತಿಸುವ ಅಗತ್ಯ ಇರುವುದಿಲ್ಲ ಎಂದು ಹಿಂದೂ ಧರ್ಮವು ವಿವರಿಸುತ್ತದೆ. ಪ್ರಾಚೀನ ಋಷಿಮುನಿಗಳ ಪ್ರಕಾರ ಭಕ್ತರು ಪರಿಶುದ್ಧ ಭಾವನೆಯಿಂದ ಶಿವನ ನಾಮವನ್ನು ಜಪಿಸಿದರೆ ಸಾಕು ಶಿವನಿಗೆ ಬಹುಬೇಗ ಹತ್ತಿರವಾಗುತ್ತೇವೆ. ಶಿವನು ತನ್ನ ಭಕ್ತರನ್ನು ಸದಾ ಕಾಪಾಡುವನು. ಅವರ ಪಾಪ ಕರ್ಮಗಳನ್ನು ತೊಳೆದು, ಪುಣ್ಯ ಫಲಗಳನ್ನು ನೀಡುವನು. ಶಿವನನ್ನು ಭೋಲೇ ನಾಥ್ ಎಂದು ಕರೆಯುತ್ತಾರೆ. 

ಯಾರು ಶ್ರದ್ಧಾ- ಭಕ್ತಿಯಿಂದ ಪೂಜೆಯನ್ನು ಸಲ್ಲಿಸುವರೋ ಅವರಿಗೆ ಶಿವನ ಆಶೀರ್ವಾದ ದೊರೆಯುವುದು. ಶಿವ ಪುರಾಣ ಹಾಗೂ ಇತರ ಹಿಂದೂ ದಂತಕಥೆಗಳ ಪ್ರಕಾರ ಶಿವನಿಗೆ ಕೆಲವು ಧಾನ್ಯಗಳು ಅತ್ಯಂತ ಪ್ರಿಯವಾದ ವಸ್ತುಗಳು. ಶಿವ ಪೂಜೆ ಅಥವಾ ವ್ರತವನ್ನು ಕೈಗೊಳ್ಳುವಾಗ ಶಿವನಿಗೆ ಇಷ್ಟವಾಗುವ ಧಾನ್ಯಗಳು ಹಾಗೂ ಪೂಜಾ ಪದ್ಧತಿಯನ್ನು ಅನುಸರಿಸಬೇಕು. ಆಗ ಶಿವನು ಸಂತುಷ್ಟನಾಗುವನು. ಜೊತೆಗೆ ಭಕ್ತರ ಜೀವನದಲ್ಲಿ ಸುಖ-ಸಂತೋಷ ನೆಲೆಸುವಂತೆ ಹರಸುವನು. ಅವರ ಜೀವನದಲ್ಲಿ ಸದಾ ನೆಮ್ಮದಿ ಹಾಗೂ ಸಂತುಷ್ಟ ಭಾವನೆ ಇರುವಂತೆ ಮಾಡುವನು. ಸರ್ವ ಶಕ್ತನಾದ ಶಿವನ ಆಶೀರ್ವಾದ ಪಡೆಯಲು ಯಾವ ಕ್ರಮವನ್ನು ಕೈಗೊಳ್ಳಬೇಕು? ಎನ್ನುವುದನ್ನು ತಿಳಿಯಲು ಮುಂದಿನ ವಿವರಣೆಯನ್ನು ಪರಿಶೀಲಿಸಿ.

ಹಿಂದೂ ಪಂಚಾಂಗದ ಪ್ರಕಾರ ಕೆಲವು ಮಾಸಗಳು ದೇವತೆಗಳ ಪೂಜೆಗೆ ಹಾಗೂ ಹರಕೆಯನ್ನು ಒಪ್ಪಿಸಲು ಪವಿತ್ರವಾದ ಸಮಯವನ್ನು ಒಳಗೊಂಡಿರುತ್ತವೆ. ಕೆಲವು ಮಾಸಗಳಲ್ಲಿ ಪೂಜೆ ಹಾಗೂ ಶುಭ ಕಾರ್ಯಗಳನ್ನು ನಿಷೇಧಿಸಲಾಗುವುದು. ಹನ್ನೆರಡು ಮಾಸಗಳಲ್ಲಿ ಶ್ರಾವಣ ಮಾಸವನ್ನು ಶಿವನಿಗೆ ಅರ್ಪಿತವಾದ ಮಾಸ ಎಂದು ಪರಿಗಣಿಸಲಾಗುವುದು. ಶ್ರಾವಣ ಮಾಸದಲ್ಲಿ ಶಿವನಿಗಾಗಿ ವಿಶೇಷ ಪೂಜೆ ಹಾಗೂ ವ್ರತವನ್ನು ಕೈಗೊಂಡರೆ ಪುಣ್ಯದೊರೆಯುವುದು ಎಂದು ಧಾರ್ಮಿಕ ಚಿಂತನೆಗಳು ತಿಳಿಸುತ್ತವೆ.

ಸೋಮವಾರವು ಶಿವನಿಗೆ ಅರ್ಪಿತವಾದ ದಿನ. ಯಾವುದೇ ಸೋಮವಾರ ಹಾಗೂ ಶ್ರಾವಣ ಸೋಮವಾರದಂದು ಶಿವನಿಗೆ ರುದ್ರಾಭಿಷೇಕ ಪೂಜೆಯನ್ನು ಕೈಗೊಳ್ಳುವುದು ಹಾಗೂ ಆ ದಿನ ಪೂರ್ತಿ ಉಪವಾಸ ವ್ರತವನ್ನು ಆಚರಿಸಿದರೆ ಜೀವನದಲ್ಲಿ ಇರುವ ಪಾಪಕರ್ಮಗಳು ತೊಳೆದು ಹೋಗುತ್ತವೆ. ಪುಣ್ಯ ಪ್ರಾಪ್ತಿಯಾಗುವುದರ ಜೊತೆಗೆ ಜೀವನವು ಸಂತೋಷದಿಂದ ಕೂಡಿರುತ್ತದೆ ಎನ್ನುವ ನಂಬಿಕೆಯಿದೆ.

ಸೋಮವಾರದಂದು ಮತ್ತು ಶಿವರಾತ್ರಿಯ ವಿಶೇಷ ಸಮಯದಲ್ಲಿ ಶಿವನ ಮೂರ್ತಿಗೆ ಅಥವಾ ಶಿವಲಿಂಗಕ್ಕೆ ತಣ್ಣನೆಯ ಹಾಲಿನ ಅಭಿಷೇಕ, ಬಿಲ್ವ ಪತ್ರೆಯ ಅಲಂಕಾರ, ಭಾಂಗ್ ಧಾತುರ ಮತ್ತು ಪಂಚಾಮೃತವನ್ನು ನೈವೇದ್ಯಕ್ಕೆ ಇರಿಸಬೇಕು. ಒಂದಿಷ್ಟು ಸಮಯಗಳ ಕಾಲ ಶಿವನ ಧ್ಯಾನವನ್ನು ಮಾಡಬೇಕು. ಆಗ ಶಿವನ ಕೃಪೆಗೆ ಒಳಗಾಗಬಹುದು ಎಂದು ಶಿವ ಪುರಾಣ ಮತ್ತು ವೇದಗಳಲ್ಲಿ ಉಲ್ಲೇಖಿಸಲಾಗಿದೆ.

ಸರಳತೆಯನ್ನು ಬಯಸುವ ಶಿವನನ್ನು ನಿಷ್ಕಲ್ಮಶ ಮನಸ್ಸಿನಿಂದ ಪೂಜೆ ಮಾಡಿದರೆ ಬಹುಬೇಗ ಪ್ರಸನ್ನನಾಗುವನು. ಶಿವನ ಪೂಜೆಯನ್ನು ಹಾಗೂ ಧ್ಯಾನವನ್ನು ಮಾಡುವಾಗ ಶಿವನಿಗೆ ಕೆಲವು ವಿಶೇಷವಾದ ಧಾನ್ಯಗಳನ್ನು ಅರ್ಪಿಸಬೇಕು. ಪುರಾತನ ಕಾಲದಲ್ಲಿ ಋಷಿಮುನಿಗಳು ಸಹ ಶಿವನಿಗೆ ಇಷ್ಟವಾಗುವ ಧಾನ್ಯಗಳ ನೈವೇದ್ಯವನ್ನು ಹಾಗೂ ಅಭಿಷೇಕವನ್ನು ಕೈಗೊಳ್ಳುವುದರ ಮೂಲಕ ಸಾಕ್ಷಾತ್ಕಾರವನ್ನು ಪಡೆದುಕೊಳ್ಳುತ್ತಿದ್ದರು. ಧಾನ್ಯಗಳು ಸಾಮಾನ್ಯವಾಗಿ ದೈವ ಶಕ್ತಿಯನ್ನು ಹಾಗೂ ಸಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತವೆ ಎಂದು ವೇದ ಮತ್ತು ಪುರಾಣ ಕಥೆಗಳಲ್ಲಿ ವಿವರಿಸಲಾಗಿದೆ. ಶಿವನನ್ನು 
ಒಲಿಸಲು ಅಥವಾ ಶಿವನ ಆಶೀರ್ವಾದ ಪಡೆಯಲು ಯಾವ ಬಗೆಯ ಧಾನ್ಯಗಳನ್ನು ಅರ್ಪಿಸಬಹುದು ಎನ್ನುವುದನ್ನು ತಿಳಿಯೋಣ..

ಜೀವನದಲ್ಲಿ ಸಾಕಷ್ಟು ಕಷ್ಟ ಹಾಗೂ ನೋವುಗಳನ್ನೇ ಅನುಭವಿಸುತ್ತಿದ್ದೀರಿ ಎಂದಾದರೆ ಸೋಮವರದಂದು, ಶಿವಾರಾತ್ರಿಯಂದು ಅಥವಾ ಶ್ರಾವಣ ಸೋಮವಾರಗಳಂದು ವಿಶೇಷವಾದ ಪೂಜೆಯ ಜೊತೆಗೆ ಶಿವಲಿಂಗಕ್ಕೆ ಬಾರ್ಲಿಯನ್ನು ಅರ್ಪಿಸಬೇಕು. ಆಗ ಶಿವನ ಆಶೀರ್ವಾದ ದೊರೆಯುವುದು. ಜೊತೆಗೆ ಜೀವನದಲ್ಲಿ ಸಕಾರಾತ್ಮಕ ಶಕ್ತಿಗಳಿಂದ ಕಷ್ಟಗಳು ದೂರವಾಗುತ್ತವೆ. ಜೀವನದಲ್ಲಿ ಹೆಚ್ಚಿನ ಸಂತೋಷವನ್ನು ಅನುಭವಿಸುವರು. ಎಲ್ಲಾ ಕೆಟ್ಟ ಸಂಗತಿಗಳು ಸಹ ಜೀವನದಿಂದ ಹೊರಹೋಗುತ್ತವೆ.

ದಾಂಪತ್ಯ ಜೀವನದಲ್ಲಿ ವಿರಸ ಹಾಗೂ ಬೇಸರವನ್ನು ಹೊಂದಿದವರು ಶಿವನಿಗೆ ಅಥವಾ ಶಿವಲಿಂಗಕ್ಕೆ ರಾಗಿಯನ್ನು ಅರ್ಪಿಸಬೇಕು. ವಿಶೇಷ ಪೂಜೆ ಹಾಗೂ ಪ್ರಾರ್ಥನೆಯನ್ನು ಕೈಗೊಳ್ಳುವುದರಿಂದ ವೈವಾಹಿಕ ಜೀವನದಲ್ಲಿ ಸಾಮರಸ್ಯವು ಖಚಿತವಾಗಿರುತ್ತದೆ. ಉತ್ತಮ ಸಂಗಾತಿಯನ್ನು ಜೀವನದಲ್ಲಿ ಪಡೆಯಬೇಕು ಎನ್ನುವ ಮನಸ್ಸನ್ನು ಹೊಂದಿರುವ ಅವಿವಾಹಿತರು ಸಹ ಶಿವಲಿಂಗಕ್ಕೆ ರಾಗಿಯನ್ನು ಅರ್ಪಿಸಬಹುದು. ಮನಸ್ಸಿನ ಆಸೆಗಳು ಬಹುಬೇಗ ನೆರವೇರುವುದು. ಈ ಉತ್ತಮ ಧಾರ್ಮಿಕ ವಿಧಿಯನ್ನು ಅನುಸರಿಸುವುದರ ಮೂಲಕ ಮೋಕ್ಷ ಹಾಗೂ ಪುಣ್ಯ ಪ್ರಾಪ್ತಿಯಾಗುವುದು.

ಅಕ್ಕಿ ಧಾರ್ಮಿಕವಾಗಿ ಅತ್ಯಂತ ಪವಿತ್ರತೆಯನ್ನು ಪಡೆದುಕೊಂಡಿರುವ ಧಾನ್ಯ. ಅಕ್ಕಿ ಅಥವಾ ಅಕ್ಷತೆ ಇಲ್ಲದೆ ಹಿಂದೂ ಪೂಜಾ ವಿಧಿ ಹಾಗೂ ಶುಭ ಕಾರ್ಯಗಳು ಅಪೂರ್ಣವಾಗುತ್ತವೆ. ಅಕ್ಕಿಯು ಮನುಷ್ಯ ಮತ್ತು ದೈವ ಶಕ್ತಿಯ ನಡುವೆ ಉತ್ತಮ ಬಾಂಧವ್ಯ ಹಾಗೂ ಸಂಪರ್ಕವನ್ನು ಕಲ್ಪಿಸಿಕೊಡುತ್ತದೆ ಎಂದು ಹೇಳಲಾಗುವುದು. ಶಿವ ಪುರಾಣದ ಪ್ರಕಾರ ಶಿವಲಿಂಗಕ್ಕೆ ಅಥವಾ ಶಿವನಿಗೆ ಅಕ್ಕಿಯನ್ನು ಅರ್ಪಿಸುವುದರಿಂದ ವ್ಯಕ್ತಿಯ ಜೀವನದಲ್ಲಿ ಆರ್ಥಿಕ ಸ್ಥಿತಿಯು ಸುಧಾರಿಸುತ್ತದೆ. ಜೊತೆಗೆ ಆದಾಯದ ಮೂಲವು ಹೆಚ್ಚುತ್ತದೆ. ಜೀವನದಲ್ಲಿ ಹಣದ ಕೊರತೆ ಉಂಟಾಗದು ಎಂದು ಸಹ ಹೇಳಲಾಗುವುದು.

ಬಂಜೆತನ ಸಮಸ್ಯೆ ಇರುವ ದಂಪತಿಗಳು ಶಿವಲಿಂಗದ ಪೂಜೆಯನ್ನು ಕೈಗೊಳ್ಳಬೇಕು ಎಂದು ಪುರಾಣಗಳು ಸಲಹೆ ನೀಡುತ್ತವೆ. ಪ್ರಾಚೀನ ಕಾಲದ ಋಷಿಮುನಿಗಳು ಹೇಳುವ ಪ್ರಕಾರ ಮಕ್ಕಳಿಲ್ಲದ ದಂಪತಿಗಳು ಪ್ರತಿ ಸೋಮವಾರ, ಶಿವರಾತ್ರಿಯ ಸಮಯದಲ್ಲಿ ಅಥವಾ ಶ್ರಾವಣ ಮಾಸದ ಪ್ರತಿ ಸೋಮವಾರ ಶಿವನಿಗೆ ಗೋಧಿಯನ್ನು ಅರ್ಪಿಸಬೇಕು. ಜೊತೆಗೆ ಭಕ್ತಿಯಿಂದ ಕೈಗೊಳ್ಳುವ ಪೂಜೆಯಿಂದ ಮಕ್ಕಳ ಭಾಗ್ಯವನ್ನು ಪಡೆದುಕೊಳ್ಳಬಹುದು

ಕುಟುಂಬದ ಸದಸ್ಯರು ದೀರ್ಘಕಾಲದ ಅನಾರೋಗ್ಯ ಹಾಗೂ ಸಾಕಷ್ಟು ಕಷ್ಟ ನಷ್ಟಗಳನ್ನು ಅನುಭವಿಸುತ್ತಿದ್ದರೆ ಶಿವನಿಗೆ ಅಥವಾ ಶಿವಲಿಂಗಕ್ಕೆ ಎಳ್ಳನ್ನು ಅರ್ಪಿಸಿ ಪೂಜೆ ಕೈಗೊಳ್ಳಬೇಕು. ಹೀಗೆ ಮಾಡುವುದರಿಂದ ಅನಾರೋಗ್ಯ ಸಮಸ್ಯೆಗಳಿಂದ ಬಹು ಬೇಗ ಮುಕ್ತಿ ಪಡೆಯಬಹುದು. ಕಷ್ಟಗಳು ಸಹ ಸುಲಭವಾಗಿ ನಿವಾರಣೆಯಾಗುತ್ತವೆ ಎಂದು ಹೇಳಲಾಗುವುದು. ಭವಿಷ್ಯದಲ್ಲಿ ಉತ್ತಮ ಆರೋಗ್ಯವನ್ನು ಪಡೆದುಕೊಳ್ಳುವರು.

ಪುರಾಣ ಕಥೆಗಳು ವಿವರಿಸುವ ಪ್ರಕಾರ ಶಿವಲಿಂಗಕ್ಕೆ ಅಥವಾ ಶಿವನಿಗೆ ಹೆಸರು ಕಾಳನ್ನು ಅರ್ಪಿಸಿದರೆ ಜೀವನದಲ್ಲಿ ಮಾಡಿದ ಪಾಪ ಕರ್ಮಗಳು ತೊಳೆಯುತ್ತವೆ. ಇದರೊಟ್ಟಿಗೆ ಜೀವನದಲ್ಲಿ ಸಕಾರಾತ್ಮಕತೆಯನ್ನು ಪಡೆದುಕೊಳ್ಳುವರು. ಜೀವನದಲ್ಲಿ ಸನ್ಮಾರ್ಗದಲ್ಲಿಯೇ ನಡೆಯುವರು. ಪ್ರತಿ ಸೋಮವಾರ ವಿಶೇಷವಾದ ಶಿವ ಧ್ಯಾನ, ಪೂಜೆ ಹಾಗೂ ಹೆಸರು ಕಾಳನ್ನು ಅರ್ಪಿಸುವುದರಿಂದ ಭವಿಷ್ಯದ ಪ್ರತಿಯೊಂದು ಮಾರ್ಗದಲ್ಲೂ ಅಡಚಣೆಗಳು ಹಾಗೂ ಕಷ್ಟಗಳು ನಿರ್ಮೂಲನೆಯಾಗುತ್ತವೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow