ಸರ್ಕಾರದ ಗ್ಯಾರಂಟಿಗಾಗಿ ಜನರಿಗೆ ಬೆಲೆ ಏರಿಕೆ ಹೊರೆ: ಸಿಟಿ ರವಿ ಲೇವಡಿ!

ಎಪ್ರಿಲ್ 6, 2025 - 21:10
 0  8
ಸರ್ಕಾರದ ಗ್ಯಾರಂಟಿಗಾಗಿ ಜನರಿಗೆ ಬೆಲೆ ಏರಿಕೆ ಹೊರೆ: ಸಿಟಿ ರವಿ ಲೇವಡಿ!

ಬೆಂಗಳೂರು:- ಸರ್ಕಾರದ ಗ್ಯಾರಂಟಿಗಾಗಿ ಜನರಿಗೆ ಬೆಲೆ ಏರಿಕೆ ಹೊರಿಸಲಾಗಿದೆ ಎಂದು ಸಿಟಿ ರವಿ ಲೇವಡಿ ಮಾಡಿದ್ದಾರೆ 

ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಗ್ಯಾರಂಟಿಗಳಿಗೆ ಹಣ ಹೊಂದಿಸಲು ದಿನಕ್ಕೊಂದು ವಸ್ತುಗಳ ಬೆಲೆ ಏರಿಕೆ ಮಾಡುತ್ತಿದೆ. ಇನ್ನೂ ಪೋಸ್ಟ್‌ ಮಾರ್ಟಂಗೂ ದರ ವಿಧಿಸಿಬಿಟ್ರೆ ಜನ ಸಾಯೋದಕ್ಕೂ ಹಿಂಜರಿಯುತ್ತಾರೆ ಎಂದರು. 

ಕಸದ ಟೆಂಡರ್‌ಗಳಲ್ಲಿ ಅಕ್ರಮ ಆರೋಪಕ್ಕೆ ಪ್ರತಿಕ್ರಿಯಿಸಿದರು. ಸ್ಮಾರ್ಟ್‌ ಮೀಟರ್‌ಗಳನ್ನೇ ಬಿಟ್ಟಿಲ್ಲ, ಇನ್ನೂ ಕಸವನ್ನ ಬಿಡ್ತಾರಾ ಇವ್ರು? ಬರ್ತ್, ಡೆತ್ ಸರ್ಟಿಫಿಕೇಟ್, ನೋಂದಣಿ ಶುಲ್ಕ ಎಲ್ಲವನ್ನೂ ಏರಿಸಿದ್ದಾರೆ. ಇನ್ನೂ ಪೋಸ್ಟ್‌ ಮಾರ್ಟಂಗೂ ಧರ ವಿಧಿಸಬೇಕು ಅಷ್ಟೇ, ಇದಾದರೆ ಜನ ಸಾಯೋದಕ್ಕೂ ಹಿಂಜರೀತಾರೆ ಅಂತ ವ್ಯಂಗ್ಯವಾಡಿದರು. 

ಮಡಿಕೇರಿ ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆ ಕೇಸ್‌ ಬಗ್ಗೆ ಮಾತನಾಡಿ, ಸಾಯಿಸಿ ರಾಜಕಾರಣ ಮಾಡೋದು ಕಾಂಗ್ರೆಸ್. ಗುತ್ತಿಗೆದಾರ ಸಂತೋಷ್ ಪಾಟೀಲ್ ವಿಚಾರದಲ್ಲಿ, ರೋಹಿತ್ ವೇಮುಲ ವಿಚಾರದಲ್ಲಿ ಮಾಡಿದ ನಿಮ್ಮ ರಾಜಕಾರಣ, ಅಪಪ್ರಚಾರ ಯಾವ ಸೀಮೆಯದು? ಈಗಲೂ ವಿನಯ್ ಸಾವಿನಲ್ಲೂ ಅಪಪ್ರಚಾರ ಮಾಡ್ತಿದ್ದೀರಿ. ಸುಳ್ಳು ಆರೋಪ ಮಾಡಿ ಕಾಂಗ್ರೆಸ್ ರಾಜಕಾರಣ ಮಾಡ್ತಿದೆ. ವಿನಯ್ ಸೋಮಯ್ಯ ಡೆತ್ ನೋಟ್ ಬರೆದಿದ್ದು ಸುಳ್ಳಾ? ಅಂತ ಪ್ರಶ್ನೆ ಮಾಡಿದರು.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow