ಸಿದ್ದರಾಮಯ್ಯನವರಿಂದ ಅಧಿಕಾರ ಕಿತ್ತುಕೊಳ್ಳೋದು ಕಷ್ಟ: ಕೋಡಿಮಠ ಸ್ವಾಮೀಜಿ ಸ್ಫೋಟಕ ಭವಿಷ್ಯ!

ಗದಗ: ಕೋಡಿಮಠದ ಡಾ.ಶಿವಯೋಗಿ ಶಿವಾನಂದ ಸ್ವಾಮೀಜಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಕೀಯ ಭವಿಷ್ಯ, ಸಿಎಂ ಬದಲಾವಣೆ ಹಾಗೂ ವರ್ಷದ ಆಗುಹೋಗುಗಳ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಗದಗನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾವು ಹೇಳಿದ್ದು ಕೇವಲ ವ್ಯಕ್ತಿಯ ಚಿಂತನೆ ಅಲ್ಲ,
ಸಮಗ್ರ ಭವಿಷ್ಯದ ಚಿಂತನೆ. ವಿಜಯನಗರ ಸಾಮ್ರಾಜ್ಯವನ್ನು ಕಟ್ಟಿದವರು ಹಕ್ಕಬುಕ್ಕರು. ಇವತ್ತಿಗೂ ವಿಜಯನಗರ ಸಾಮ್ರಾಜ್ಯದ ಹೆಸರು ಚಿರಸ್ಥಾಯಿಯಾಗಿದೆ. ಆ ಸಾಮ್ರಾಜ್ಯ ಕೊಡುಗೆ, ನೆನಪು, ಮೈಸೂರು ದಸರಾ ವಿಜಯನಗರ ಸಾಮ್ರಾಜ್ಯದ ಅರಸರುಗಳ ಕೊಡುಗೆ ಅಪಾರ. ಹಕ್ಕ-ಬುಕ್ಕರು ಹಾಲುಮತ ಸಮಾಜದವರು. ಆ ಸಮಾಜಕ್ಕೆ ಅಧಿಕಾರ ಬಂದರೆ ಸುಲಭವಾಗಿ ಕಿತ್ತುಕೊಳ್ಳಲು ಆಗುವುದಿಲ್ಲ ಎಂದರು.
ಸಮಾಜದ ಮೇಲೆ, ರಾಜ್ಯದ ಮೇಲೆ ಒಳ್ಳೆ ಕೆಲಸ ಮಾಡುವ ಜನರಿಗೆ ಕೆಡುಕು ಆಗುವುದು ಕಷ್ಟ. ಆ ದೃಷ್ಟಿಯಿಂದ ಹಾಲುಮತ ಸಮಾಜದ ಸಿದ್ದರಾಮಯ್ಯನವರು ರಾಜ್ಯದ ಅಧಿಕಾರದಲ್ಲಿ ಇದ್ದಾರೆ. ಅವರಿಂದ ಅಧಿಕಾರ ಕಿತ್ತುಕೊಳ್ಳೋದು ಕಷ್ಟ. ವಿಜಯನಗರ ಸಾಮ್ರಾಜ್ಯದ ಉದಾಹರಣೆ ಇಟ್ಟು ಸಾಮಾನ್ಯ ಭವಿಷ್ಯ ಜ್ಞಾನವನ್ನ ಹೇಳಿದ್ದೇನೆ. ಬೇರೆಯವರು ಅದನ್ನೆಲ್ಲಾ ಮಾಡಿಲ್ಲ ಅಂತಾ ಅಲ್ಲ. ಬೇರೆ ಸಮಾಜದವರೂ ಮಾಡಿದ್ದಾರೆ. ಆ ಸಮಾಜದ ಬಗ್ಗೆ ನಮಗೆ ಬೇರೆ ಅಭಿಪ್ರಾಯ ಇಲ್ಲ ಎಂದು ಹೇಳಿದರು.
ನಿಮ್ಮ ಪ್ರತಿಕ್ರಿಯೆ ಏನು?






