ಸ್ವಾಮಿಗಳು ಯಾರೂ ಪ್ರಚೋದನೆಯ ಹೇಳಿಕೆ ನೀಡಬಾರದು: ಜಿ. ಪರಮೇಶ್ವರ್

ನವೆಂಬರ್ 11, 2024 - 21:03
 0  9
ಸ್ವಾಮಿಗಳು ಯಾರೂ ಪ್ರಚೋದನೆಯ ಹೇಳಿಕೆ ನೀಡಬಾರದು: ಜಿ. ಪರಮೇಶ್ವರ್

 

ಬೆಂಗಳೂರು: ಸ್ವಾಮಿಗಳು ಯಾರೂ ಪ್ರಚೋದನೆಯ ಹೇಳಿಕೆ ನೀಡಬಾರದು ಎಂದು ಗೃಹ ಸಚಿವ ಜಿ. ಪರಮೇಶ್ವರ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಧರ್ಮಗುರುಗಳು ಧರ್ಮದಿಂದ ನಡೆದುಕೊಳ್ಳಬೇಕು. ಧರ್ಮ ಪ್ರಚಾರಕರಾಗಿ ಪ್ರಚೋದನೆ ನೀಡಬಾರದು. ನಾವುಗಳು ಪೂಜ್ಯನೀಯ ದೃಷ್ಟಿಯಿಂದ ನೋಡ್ತೇವೆ. ಸ್ವಾಮೀಜಿಗಳ ಕಾಲಿಗೆ ಬೀಳ್ತೇವೆ. ಅವರು ತಲ್ವಾರ್ ಕೊಡಿ ಅಂದರೆ ಸರಿಯಲ್ಲ. ಸ್ವಾಮಿಗಳು ಯಾರೂ ಪ್ರಚೋದನೆಯ ಹೇಳಿಕೆ ನೀಡಬಾರದು ಎಂದು ತಿಳಿಸಿದರು.

ಇನ್ನೂ ಇಂದು ಬಹಿರಂಗ ಪ್ರಚಾರ ಅಂತ್ಯ ವಿಚಾರವಾಗಿ ಪ್ರತಿಕ್ರಿಯಿಸಿ, ಈಗಾಗಲೇ ಸಾಕಷ್ಟು ಪ್ರಚಾರ ಮಾಡಿದ್ದಾರೆ. ಸಿಎಂ ಸಚಿವರು ಪ್ರಚಾರ ಮಾಡಿದ್ದಾರೆ. ಸರ್ಕಾರದ ಆಡಳಿತವನ್ನು ಜನರಿಗೆ ಮುಟ್ಟಿಸಿದ್ದೇವೆ‌. ಇದರ ನಡುವೆ ಅನವಶ್ಯಕ ಮಾತುಗಳು ನಡೆದಿವೆ. ಮತದಾರ ಎಲ್ಲವನ್ನು ಗಮನಿಸಿದ್ದಾನೆ. ನಾಡಿದ್ದು ಮತ ಚಲಾಯಿಸುವ ದಿವಸ. ಇಂದು ಅಧಿಕೃತವಾಗಿ ಬಹಿರಂಗ ಪ್ರಚಾರ ನಿಲ್ಲುತ್ತೆ. ಒಬ್ಬರಿಗೊಬ್ಬರು ಬೈಯುವುದು ನಿಲ್ಲುತ್ತದೆ ಎಂದರು.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow