BJP ನಿರ್ಲಕ್ಷ್ಯದಿಂದ ಜನ ಸತ್ತಿರೋದು ಹೊರತು ಕೊರೊನಾದಿಂದ ಜನ ಸತ್ತಿಲ್ಲ ಅನಿಸುತ್ತಿದೆ: ಪ್ರಿಯಾಂಕ್‌ ಖರ್ಗೆ

ನವೆಂಬರ್ 11, 2024 - 22:06
 0  13
BJP ನಿರ್ಲಕ್ಷ್ಯದಿಂದ ಜನ ಸತ್ತಿರೋದು ಹೊರತು ಕೊರೊನಾದಿಂದ ಜನ ಸತ್ತಿಲ್ಲ ಅನಿಸುತ್ತಿದೆ: ಪ್ರಿಯಾಂಕ್‌ ಖರ್ಗೆ

 ಬೆಂಗಳೂರು: ಬಿಜೆಪಿ ನಿರ್ಲಕ್ಷ್ಯದಿಂದ ಜನ ಸತ್ತಿರೋದು ಹೊರತು ಕೊರೊನಾದಿಂದ ಜನ ಸತ್ತಿಲ್ಲ ಅನಿಸುತ್ತಿದೆ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಚೀನಾದಿಂದ ಖರೀದಿ ಮಾಡುವ ಅಗತ್ಯ ಏನಿತ್ತು? ಬಿಜೆಪಿ ಅವರ ನಿರ್ಲಕ್ಷ್ಯದಿಂದ ಜನ ಸತ್ತಿರೋದು ಹೊರತು ಕೊರೊನಾದಿಂದ ಜನ ಸತ್ತಿಲ್ಲ ಅನಿಸುತ್ತಿದೆ.

ಇದು ಬಿಜೆಪಿಯವರ ಹತ್ಯಾಕಾಂಡ. ಇವರು ಕೊರೊನಾದಿಂದ 37 ಸಾವಿರ ಜನ ಸತ್ತಿದಾರೆ ಎನ್ನುತ್ತಾರೆ. ಆದರೆ ಕೇಂದ್ರ ಸರ್ಕಾರದ ವರದಿಯಲ್ಲಿ ರಾಜ್ಯದಲ್ಲಿ ಕೊರೊನಾದಿಂದ 4.25 ಲಕ್ಷ ಜನ ಸತ್ತಿದ್ದಾರೆ ಎಂದು ಉಲ್ಲೇಖಿಸಲಾಗಿದೆ ಎಂದು ವಾಗ್ದಾಳಿ ನಡೆಸಿದರು.

ಅಂದಿನ ಬಿಜೆಪಿ ಸರ್ಕಾರ ಕೊರೊನಾ ನಿರ್ವಹಣೆ ಮಾಡೋದನ್ನ ಬಿಟ್ಟು, ಜನರ ಜೀವನ ಉಳಿಸಿದೋದನ್ನ ಬಿಟ್ಟು ಹಣ ಮಾಡಿದೆ. ತಂತ್ರಜ್ಞಾನ ಯುಗದಲ್ಲಿ ಯಾಕೆ ಪ್ರಧಾನಿ ಮೋದಿಯವರು ಅವೈಜ್ಞಾನಿಕ ಭಾವನೆಯನ್ನ ಹಬ್ಬಿಸುತ್ತಿದ್ದರು ಎಂದು ಈಗ ಗೊತ್ತಾಗಿದೆ.

ತಾಲಿ ಬಜಾವ್ ದೀಪ್ ಚಲಾವ್ ಇವೆಲ್ಲಾ ಭ್ರಷ್ಟಾಚಾರ, ಹತ್ಯಾಕಾಂಡ ಮುಚ್ಚಿಹಾಕೋದಕ್ಕೆ ಮಾಡುತ್ತಿದ್ದರು. ಎಂದು ಕಾಣದಂತಹ ಪರಿಸ್ಥಿತಿ ಇತ್ತು. ಸರ್ಕಾರವನ್ನು ಜನ ನಂಬಿದ್ದರು. ಔಷಧ, ವ್ಯಾಕ್ಸಿನ್, ಬೆಡ್ ಹಂಚಿಕೆ, ಮಾಸ್ಕ್ ವಿತರಣೆ, ಪಿಪಿಇ ಕಿಟ್ ವಿತರಣೆ ಸರ್ಕಾರ ಮಾಡಿದೆ. ಬಿಜೆಪಿಯವರು ಹೆಣದ ಮೇಲೆ ಹಣ ಮಾಡಿದ್ದರು ಎಂದು ರಿಪೋರ್ಟ್ನಲ್ಲಿ ಗೊತ್ತಾಗಿದೆ ಎಂದು ಹರಿಹಾಯ್ದರು.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow