ಹಣದ ರಾಶಿಯೇ ಹರಿದು ಬರತ್ತೆ: ಶುಕ್ರವಾರ ಜಸ್ಟ್ ಈ ಕೆಲಸ ಮಾಡಿ!

ಮಾರ್ಚ್ 14, 2025 - 07:00
 0  10
ಹಣದ ರಾಶಿಯೇ ಹರಿದು ಬರತ್ತೆ: ಶುಕ್ರವಾರ ಜಸ್ಟ್ ಈ ಕೆಲಸ ಮಾಡಿ!

ಸಂತೋಷದ ಜೀವನಕ್ಕೆ ಆರ್ಥಿಕ ಸ್ಥಿತಿಯ ಬಲವಾಗಿರುವುದು ಬಹಳ  ಅವಶ್ಯಕವಾಗಿದೆ.ಅದಕ್ಕಾಗಿಯೇ ಎಲ್ಲರೂ ಸಂಪತ್ತಿನ ದೇವತೆಯಾದ ಲಕ್ಷ್ಮೀ  ದೇವಿಯನ್ನು ಮೆಚ್ಚಿಸುವ ಪ್ರಯತ್ನ  ನಡೆಸುತ್ತಲೇ ಇರುತ್ತಾರೆ.ಲಕ್ಷ್ಮೀಯ ಕೃಪಾ ದೃಷ್ಟಿಗೆ ಪಾತ್ರರಾಗಲು ಶುಕ್ರವಾರ ಅತ್ಯದ್ಭುತ ದಿನ ಎಂದು ಹೇಳಲಾಗುತ್ತದೆ.ಈ ದಿನವು ಲಕ್ಷ್ಮಿ ದೇವಿಗೆ ಸಮರ್ಪಿತವಾಗಿದೆ.ಆರ್ಥಿಕ ಬಿಕ್ಕಟ್ಟಿನಿಂದ ಪರಿಹಾರ ಪಡೆಯಲು,ಶುಕ್ರವಾರ ಲಕ್ಷ್ಮೀದೇವಿಯನ್ನು ಪೂಜಿಸಿ ಕೆಲವು ಪರಿಹಾರಗಳನ್ನು ಕಂಡುಕೊಳ್ಳಬಹುದು.

ನಮ್ಮ ಜೀವನದಲ್ಲಿ ಸಂತೋಷ, ಸಮೃದ್ಧಿ ಮತ್ತು ಅದೃಷ್ಟವನ್ನು ತರುತ್ತದೆ. ಸ್ತ್ರೀ ಮತ್ತು ಪುರುಷರಿಬ್ಬರೂ ಶುಕ್ರವಾರ ವ್ರತವನ್ನು ಮಾಡಬಹುದು. ಇದು ನಮಗೆ ಭೌತಿಕ ಸಂತೋಷವನ್ನು ಕರುಣಿಸುತ್ತದೆ. ಹಣಕಾಸಿನ ಸಮಸ್ಯೆಗಳಿಂದ ಮುಕ್ತರಾಗಲು ನಾವು ಶುಕ್ರವಾರದ ದಿನದಂದು ಏನು ಮಾಡಬೇಕೆಂಬುದನ್ನು ತಿಳಿಯಿರಿ..

ಶುಕ್ರವಾರದ ದಿನದಂದು ಸಂಪತ್ತಿನ ದೇವಿಯಾದ ಲಕ್ಷ್ಮಿ ದೇವಿಯನ್ನು ಧಾರ್ಮಿಕ ವಿಧಿ - ವಿಧಾನಗಳೊಂದಿಗೆ ಪೂಜಿಸಬೇಕು. ಲಕ್ಷ್ಮಿ ದೇವಿಯನ್ನು ಪೂಜಿಸುವ ಸಮಯದಲ್ಲಿ ಕಮಲದ ಹೂವನ್ನು ಆಕೆಗೆ ಅರ್ಪಿಸಬೇಕು. ಇದರಿಂದ ಆಕೆ ಬಹುಬೇಗನೆ ಸಂತುಷ್ಟಳಾಗುತ್ತಾಳೆ. ತನ್ನ ಆಶೀರ್ವಾದವನ್ನು ಮಳೆಯಂತೆ ಸುರಿಸುತ್ತಾಳೆ. ನೀವು ನಿಮ್ಮ ಜೀವನದ ಹಣದ ಸಮಸ್ಯೆಗಳಿಂದ ಮುಕ್ತರಾಗಲು ಬಯಸಿದರೆ ಲಕ್ಷ್ಮಿ ದೇವಿಯನ್ನು ಪೂಜಿಸುವ ಸಮಯದಲ್ಲಿ ಆಕೆಗೆ ಕಡ್ಡಾಯವಾಗಿ ಕಮಲದ ಹೂವನ್ನು ಅರ್ಪಿಸಿ. ಇದು ಮನೆಯಲ್ಲಿ ಧನಾಗಮನವಾಗುವಂತೆ ಮಾಡುತ್ತದೆ ಮತ್ತು ಹಣದ ಸಮಸ್ಯೆಯಿಂದ ನಿಮ್ಮನ್ನು ಮುಕ್ತಗೊಳಿಸುತ್ತದೆ.

ಲಕ್ಷ್ಮಿ ದೇವಿಯು ಪಾಯಸವನ್ನು ಹೆಚ್ಚು ಇಟ್ಟುಪಡುತ್ತಾಳೆ. ಆದ್ದರಿಂದ ಶುಕ್ರವಾರದ ದಿನದಂದು ನೀವು ಯಾವುದೇ ತುಂಡಾಗದ ಅಕ್ಕಿಯಿಂದ ಪಾಯಸವನ್ನು ತಯಾರಿಸಿ. ಇದನ್ನು ನೀವು ಸಕ್ಕರೆಯ ಬದಲಾಗಿ, ಬೆಲ್ಲದಿಂದ ತಯಾರಿಸಬೇಕು. ನಂತರ ಲಕ್ಷ್ಮಿ ದೇವಿಗೆ ಅರ್ಪಿಸಿ. ಈ ರೀತಿ ಮಾಡುವುದರಿಂದ ಅದು ನಿಮ್ಮ ಜೀವನದಲ್ಲಿ ಸಂತೋಷ, ಸಮೃದ್ಧಿ ಮತ್ತು ಆರೋಗ್ಯವನ್ನು ತರುತ್ತದೆ. ಈ ಪಾಯಸದ ನೈವೇದ್ಯವನ್ನು ಲಕ್ಷ್ಮಿ ದೇವಿಗೆ ಅರ್ಪಿಸುವುದರಿಂದ ಆಕೆಯ ಆಶೀರ್ವಾದವನ್ನು ನೀವು ಪಡೆದುಕೊಳ್ಳಬಹುದು. ಮತ್ತು ಹಣದ ಲಾಭವನ್ನು ಹೊಂದಬಹುದು.

ನೀವು ಹಣಕಾಸಿನ ಅಡಚಣೆಗಳಿಂದ ತೊಂದರೆಗೀಡಾಗಿದ್ದರೆ ಮತ್ತು ಅದನ್ನು ತೊಡೆದುಹಾಕಲು ಬಯಸಿದರೆ, ಶುಕ್ರವಾರದಂದು ನಿಮ್ಮ ಮನೆಯಲ್ಲಿ ಶ್ರೀ ಯಂತ್ರವನ್ನು ಸ್ಥಾಪಿಸಿ. ನೀವು ಅದನ್ನು ನಿಮ್ಮ ಮನೆಯ ದೇವರ ಕೋಣೆಯ ಉತ್ತರ ದಿಕ್ಕಿನಲ್ಲಿ ಅಥವಾ ಮುಖ್ಯ ದ್ವಾರದಲ್ಲಿ ಸ್ಥಾಪಿಸಬೇಕು. ಹೀಗೆ ಮಾಡುವುದರಿಂದ ನಿಮ್ಮ ಆರ್ಥಿಕ ಬಿಕ್ಕಟ್ಟನ್ನು ಪರಿಹರಿಸಿಕೊಳ್ಳಬಹುದು

ಶಾಸ್ತ್ರಗಳ ಪ್ರಕಾರ, ಮನೆಯಲ್ಲಿ ನಿಯಮಿತವಾಗಿ ಶಂಖವನ್ನು ಊದುವುದರಿಂದ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಗಳು ದೂರವಾಗುತ್ತವೆ. ಶುಕ್ರವಾರದಂದು ನೀವು ನಿಯಮಿತವಾಗಿ ಮನೆಯಲ್ಲಿ ಶಂಖವನ್ನು ಊದಬೇಕು. ಹೀಗೆ ಮಾಡುವುದರಿಂದ ಮನೆಯಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲೆಸುತ್ತದೆ ಎನ್ನುವ ನಂಬಿಕೆಯಿದೆ.

ನೀವು ಬಯಸಿದ ವಧು ಅಥವಾ ವರನನ್ನು ಪಡೆಯಲು ಬಯಸಿದರೆ, ನೀವು ಶುಕ್ರವಾರ ವೈಭವ ಲಕ್ಷ್ಮಿಯನ್ನು ಪೂಜಿಸಿ, ಉಪವಾಸ ವ್ರತವನ್ನು ತೆಗೆದುಕೊಳ್ಳಬೇಕು. ಹೀಗೆ ಮಾಡುವುದರಿಂದ ಲಕ್ಷ್ಮಿ ದೇವಿಯು ನಿಮ್ಮ ಎಲ್ಲಾ ಇಷ್ಟಾರ್ಥಗಳನ್ನು ಪೂರ್ಣಗೊಳಿಸುತ್ತಾಳೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow