ಹುಷಾರ್ ಜನರೇ: ಭಾನುವಾರ ಈ ವಸ್ತುಗಳನ್ನು ಖರೀದಿಸಲೇಬೇಡಿ! ಬಡವರಾಗ್ತರಂತೆ!

ಭೂಮಿಯಲ್ಲಿರುವ ಧರ್ಮಗಳಲ್ಲಿ ಹಿಂದೂ ಧರ್ಮವು ಅತಿ ಹೆಚ್ಚು ದೇವರನ್ನು ಹೊಂದಿರುವ ಧರ್ಮವಾಗಿದೆ. ಹಿಂದೂ ಧರ್ಮದಲ್ಲಿ ವಾರದ ಪ್ರತಿಯೊಂದು ದಿನವೂ ಒಂದೊಂದು ವಿಭಿನ್ನ ದೇವರನ್ನು ಪೂಜಿಸಲಾಗುತ್ತದೆ. ಇನ್ನು ಕೆಲವರು ತಮ್ಮ ನಂಬಿಕೆಯ ಆಧಾರದ ಮೇಲೆ ಪ್ರತಿನಿತ್ಯ ಬೇರೆ ಬೇರೆ ದೇವರನ್ನು ಪೂಜಿಸುತ್ತಾರೆ. ಹಿಂದೂ ಧರ್ಮದಲ್ಲಿ ವಾರದ ಆಯಾಯ ದಿನವನ್ನು ಪ್ರತ್ಯೇಕವಾಗಿ ಒಂದೊಂದು ದೇವರ ಆರಾಧನೆಗಾಗಿ ಮೀಸಲಿರಿಸಲಾಗಿದೆ.
ಅದರಂತೆ ಭಾನುವಾರ ಎಲ್ಲರಿಗೂ ಬಹಳ ವಿಶೇಷವಾದ ದಿನ. ಭಾನುವಾರವು ಭಗವಾನ್ ಸೂರ್ಯ ದೇವನ ದಿನವಾಗಿದೆ. ಈ ದಿನ ಮಾಡಿದ ಕೆಲಸವು ಒಳ್ಳೆಯ ಮತ್ತು ಕೆಟ್ಟ ಫಲಿತಾಂಶಗಳನ್ನು ನೀಡುತ್ತದೆ. ವ್ಯಕ್ತಿಯ ಜಾತಕದಲ್ಲಿ ಸೂರ್ಯ ದೋಷವಿದ್ದಾಗ ಆ ವ್ಯಕ್ತಿಯು ಎಲ್ಲಾ ಕಡೆಗಳಿಂದ ಅಶುಭ ಫಲ ಅಥವಾ ಕೆಟ್ಟ ಫಲಿತಾಂಶಗಳನ್ನು ಪಡೆಯಬಹುದು. ಅಂತಹ ಪರಿಸ್ಥಿತಿಯಲ್ಲಿ, ನೀವು ಕೆಲವು ವಿಷಯಗಳ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಮತ್ತು ಭಾನುವಾರದಂದು ಅವುಗಳನ್ನು ಮಾಡುವುದನ್ನು ತಪ್ಪಿಸುವುದು ಮುಖ್ಯ.
1. ಭಾನುವಾರದಂದು ಈ ವಸ್ತುಗಳನ್ನು ಖರೀದಿಸಬೇಡಿ:
- ಕಬ್ಬಿಣ ಅಥವಾ ಕಬ್ಬಿಣದಿಂದ ಮಾಡಿದ ವಸ್ತುಗಳ ಖರೀದಿಯನ್ನು ಭಾನುವಾರ ನಿಷೇಧಿಸಲಾಗಿದೆ. ಈ ದಿನ ಹಣವನ್ನು ಖರ್ಚು ಮಾಡುವುದರಿಂದ ಲಕ್ಷ್ಮಿ ದೇವಿಯು ಕೂಡ ಕೋಪಗೊಳ್ಳಬಹುದು.
- ಕಾರ್ ಬಿಡಿಭಾಗಗಳು, ಹಾರ್ಡ್ವೇರ್ ವಸ್ತುಗಳನ್ನು, ತೋಟಗಾರಿಕೆ ಉಪಕರಣಗಳನ್ನು, ಪೀಠೋಪಕರಣಗಳನ್ನು, ಗೃಹೋಪಯೋಗಿ ವಸ್ತುಗಳನ್ನು ಸೇರಿದಂತೆ ಇನ್ನಿತರ ವಸ್ತುಗಳನ್ನು ಈ ದಿನ ಖರೀದಿಸಬಾರದು ಎನ್ನುವ ನಂಬಿಕೆಯಿದೆ.
- 2. ಭಾನುವಾರದಂದು ಈ ಕೆಲಸ ಮಾಡಬೇಡಿ:
- ಭಾನುವಾರದಂದು ಉಪ್ಪನ್ನು ಸೇವಿಸಬೇಡಿ. ಹೀಗೆ ಮಾಡುವುದರಿಂದ ಸೂರ್ಯದೇವನಿಂದ ಕೆಟ್ಟ ಪರಿಣಾಮ ಉಂಟಾಗಿ ಕೆಲಸಗಳಿಗೆ ಅಡ್ಡಿಯಾಗುತ್ತದೆ.
- ಮಾಂಸ ಮತ್ತು ಮದ್ಯ ಸೇವನೆಯನ್ನು ಸಹ ನಿಷೇಧಿಸಲಾಗಿದೆ.
ಭಾನುವಾರದಂದು ಶನಿಗೆ ಸಂಬಂಧಿಸಿದ ವಿಷಯಗಳನ್ನು ತಪ್ಪಿಸಬೇಕು.
ಕಪ್ಪು, ನೀಲಿ, ಕಂದು ಅಥವಾ ಗಾಢ ಬಣ್ಣದ ಬಟ್ಟೆಗಳನ್ನು ಧರಿಸುವುದನ್ನು ತಪ್ಪಿಸಿ.
ಈ ದಿನ ಕೂದಲನ್ನು ಕತ್ತರಿಸಬಾರದು, ಇದು ಜಾತಕದಲ್ಲಿ ಸೂರ್ಯನನ್ನು ದುರ್ಬಲಗೊಳಿಸುತ್ತದೆ.
3. ಭಾನುವಾರದಂದು ಈ ವಸ್ತುಗಳನ್ನು ಖರೀದಿಸುವುದು ಅದೃಷ್ಟ:
- ಪರ್ಸ್ ಅಥವಾ ವಾಲೆಟ್
- ಕತ್ತರಿ
- ಗೋಧಿ
- ಕೆಂಪು ಬಣ್ಣದ ವಸ್ತುಗಳು.
ಭಾನುವಾರದಂದು ರಜೆ ಇದ್ದಾಗ ನಾವು ಹೆಚ್ಚಾಗಿ ಶಾಪಿಂಗ್ನ್ನು ಅಥವಾ ಇತರೆ ವಸ್ತುಗಳನ್ನು ಖರೀದಿಸಲು ಹೋಗುತ್ತೇವೆ. ಆದರೆ, ಈ ದಿನದಂದು ಯಾವೆಲ್ಲಾ ವಸ್ತುಗಳನ್ನು ಖರೀದಿಸಬೇಕು..? ಯಾವೆಲ್ಲಾ ವಸ್ತುಗಳನ್ನು ಖರೀದಿಸಬಾರದು..? ಎನ್ನುವುದರ ಬಗ್ಗೆ ತಿಳಿದುಕೊಂಡಿರಲ್ಲವೇ..? ಅದೆ ರೀತಿ ನೀವು ಕೂಡ ಭಾನುವಾರ ದುರಾದೃಷ್ಟ ತರುವ ವಸ್ತುಗಳನ್ನು ಖರೀದಿಸದಿರಿ.
ನಿಮ್ಮ ಪ್ರತಿಕ್ರಿಯೆ ಏನು?






