ಅನೈತಿಕ ಸಂಬಂಧಕ್ಕೆ ಬಿತ್ತು ಹೆಣ: ಇಟ್ಟುಕೊಂಡವಳ ಸಹವಾಸದಿಂದ ಕೊಲೆಯಾದ.!

ಮಾರ್ಚ್ 15, 2025 - 22:02
 0  38
ಅನೈತಿಕ ಸಂಬಂಧಕ್ಕೆ ಬಿತ್ತು ಹೆಣ: ಇಟ್ಟುಕೊಂಡವಳ ಸಹವಾಸದಿಂದ ಕೊಲೆಯಾದ.!

ಮೈಸೂರು: ಅನೈತಿಕ ಸಂಬಂಧಕ್ಕೆ ಹೆಣ ಬೀಳೋದು ಇತ್ತೀಚಿಗೆ ಸಾಮಾನ್ಯವಾಗಿದೆ. ಇದೀಗ ವ್ಯಕ್ತಿಯ  ಬರ್ಬರ ಹತ್ಯೆ ಮಾಡಿರುವ ಘಟನೆ ಮೈಸೂರು ತಾಲೂಕಿನ ಅನುಗನಹಳ್ಳಿಯಲ್ಲಿ ನಡೆದಿದೆ‌. ತಡರಾತ್ರಿ ಮನೆಯಲ್ಲಿ ಈ ಘಟನೆ ನಡೆದಿದೆ‌. ಸೂರ್ಯ ಕೊಲೆಯಾದ ವ್ಯಕ್ತಿಯಾಗಿದ್ದು, ಆರೇಳು ವರ್ಷಗಳ ಹಿಂದ ಮೈಸೂರಿನ ಹಿನಕಲ್‌ನ ನಿವಾಸಿ ದೀಪಿಕಾಳ ಮದುವೆಯಾಗಿದ್ದಾನೆ. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಆದರೂ ಸಹ ಇನ್ಸ್ಟ್ರಗ್ರಾಮ್‌ನಲ್ಲಿ ಪರಿಚಯವಾದ ಶ್ವೇತಾ ಎನ್ನುವ ಸುಂದರಿಯ ಬಲೆಗೆ ಬಿದ್ದು ಇದೀಗ ಕೊಲೆಯಾಗಿದ್ದಾನೆ.

ಅವಳ ಜೊತೆ ಸಂಬಂಧದಲ್ಲಿದ್ದ ಸೂರ್ಯ, ಶ್ವೇತಾಳನ್ನ ಆಗಾಗ ಮನೆಗೂ ಕರೆದಯಕೊಂಡು ಬರುತ್ತಿದ್ದನಂತೆ. ಇಬ್ಬರು ಜೊತೆ ಇರುವ ಖಾಸಗಿ ಪೋಟೋಗಳನ್ನ ಸ್ಟೇಟಸ್ ಗೆ ಹಾಕಿದ್ದ. ಈ ವಿಷಯ ಗೊತ್ತಾದ ಮೇಲೆ ಸೂರ್ಯ ಪತ್ನಿ ದೀಪಿಕಾ, ತಾಯಿ ಪುಷ್ಪ ಮನೆ ಬಿಟ್ಟು ತವರು ಮನೆ ಸೇರಿದ್ದಾರೆ‌.

ಸೂರ್ಯನಿಗೆ ದಿನಗಳೆದಂತೆ ಶ್ವೇತಾ ಹಣ ಅಸ್ತಿಗಾಗಿ ಪೀಡಿಸುತ್ತಿದ್ದಾಳೆ. ಹೀಗಾಗಿ ಆಸ್ತಿ ಮಾರಾಟ ಮಾಡೋಕೆ ಸೂರ್ಯ ಮನೆಯವರಿಗೆ ಕಿರುಕುಳ ನೀಡಿದ್ದಾನೆ. ಆದ್ರೆ ಮನೆಯವರು ಆಸ್ತಿ ಮಾರಾಟಕ್ಕೆ ಒಪ್ಪಿಗೆ ನೀಡಿಲ್ಲ.

 ಆದರೂ ಶ್ವೇತಾ ಆಸ್ತಿ ಮಾರಾಟ ಮಾಡಿ ಹಣ ತೊಂಗೊಂಡು ಬಾ ಬೆಂಗಳೂರಲ್ಲಿ ಸೆಟಲ್ ಆಗೋಣ ಎಂದು ಟಾರ್ಚರ್ ಕೊಡುತ್ತಿದ್ದಳು . ಬಗ್ಗೆ ಸೂರ್ಯ ಸಹ ಮನೆಯವರ ಬಳಿ ಹೇಳಿಕೊಂಡಿದ್ದನಂತೆ. ಆಗಾಗ ಕುಟುಂಬಸ್ಥರಿಗೆ ಪೋನ್ ಮಾಡಿ, ವಾಯ್ಸ್ ಮೆಸೆಜ್ ಕಳುಹಿಸಿ ಕಷ್ಟ ಹೇಳಿಕೊಳ್ಳುತ್ತಿದ್ದ.

ರಾತ್ರಿ ಕೂಡ ಅನುಗನಹಳ್ಳಿಯ ತೋಟದ ಮನೆಯಲ್ಲಿ ಶ್ವೇತಾ ಹಾಗೂ ಸೂರ್ಯ ಜೊತೆಯಲ್ಲೆ ಇದ್ದರು ಆದ್ರೆ, ಬೆಳಗಾಗುವಷ್ಟರಲ್ಲಿ ರೌಡಿ ಶೀಟರ್ ಸೂರ್ಯ ಕೊಲೆಯಾಗಿದ್ದಾನೆ. ಆದ್ರೆ, ಶ್ವೇತಾ ಮಾತ್ರ ಪರಾರಿಯಾಗಿದ್ದಾಳೆ. ಇನ್ನು ಕೊಲೆಯಾಗಿರೋ ಸ್ಥಳದಲ್ಲಿ ಹೋಟೆಲ್‌ನಿಂದ ತಂದ ಆಹಾರ ಪದಾರ್ಥಗಳು ಬಿದ್ದಿವೆ. ಇನ್ನು ಪ್ರೇಯಸಿ ಶ್ವೇತಾಳಿಗೆ ಸಂಬಂಧಿಸಿದ ವಸ್ತುಗಳು ಪತ್ತೆಯಾಗಿವೆ. ಹೀಗಾಗಿ ಈ ಕೃತ್ಯದ ಹಿಂದೆ ಶ್ವೇತಾಳ ಕೈವಾಡ ಇದೆ ಎನ್ನುವ ಅನುಮಾನ ವ್ಯಕ್ತವಾಗಿದೆ.

 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow