ಅಪ್ಪಿತಪ್ಪಿಯೂ ಶುಕ್ರವಾರ ಈ ತಪ್ಪುಗಳನ್ನು ಮಾಡ್ಬೇಡಿ: ಶುಕ್ರ ದುರ್ಬಲನಾಗ್ತನಂತೆ!

ಎಪ್ರಿಲ್ 18, 2025 - 07:26
 0  10
ಅಪ್ಪಿತಪ್ಪಿಯೂ ಶುಕ್ರವಾರ ಈ ತಪ್ಪುಗಳನ್ನು ಮಾಡ್ಬೇಡಿ: ಶುಕ್ರ ದುರ್ಬಲನಾಗ್ತನಂತೆ!

ಶುಕ್ರವಾರ ಲಕ್ಷ್ಮಿ ದೇವಿಗೆ ಅರ್ಪಿತವಾಗಿದೆ. ಈ ದಿನದಂದು ಲಕ್ಷ್ಮಿ ದೇವಿಯನ್ನು ಪೂಜಿಸುವುದು ವಿಶೇಷವಾಗಿ ಫಲಪ್ರದವೆಂದು ಪರಿಗಣಿಸಲಾಗಿದೆ. ಶುಕ್ರವಾರದಂದು ಮಾಡುವ ಪೂಜೆ ಮತ್ತು ಉಪವಾಸ ಕುಟುಂಬದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ. ಧರ್ಮ ಗ್ರಂಥಗಳ ಪ್ರಕಾರ ಶುಕ್ರವಾರ ಲಕ್ಷ್ಮೀ ದೇವಿಯ ಹೆಸರಿನಲ್ಲಿ ಮಾಡುವ ಉಪವಾಸದ ವ್ರತ ನಮ್ಮನ್ನು ಹಣದ ಸಮಸ್ಯೆಗಳಿಂದ ಪಾರು ಮಾಡುವುದು ಮಾತ್ರವಲ್ಲದೆ ಧನಾಗಮನವಾಗುವಂತೆ ಮಾಡುತ್ತದೆ.

ಒಂದು ವೇಳೆ ನಿಮ್ಮ ಜೀವನದಲ್ಲಿಯೂ ಕೂಡ ಹಣದ ಕೊರತೆ ಎದುರಾದರೆ ನಿಮ್ಮ ಮೇಲೆ ಲಕ್ಷ್ಮಿ ದೇವಿ ಕೋಪಿಸಿಕೊಂಡಿದ್ದಾಳೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಲಕ್ಷ್ಮಿ ದೇವಿಯ ಆಶೀರ್ವಾದವನ್ನು ಪಡೆದುಕೊಳ್ಳಲು ನಾವು ಶುಕ್ರವಾರ ತಪ್ಪದೇ ತಾಯಿ ಲಕ್ಷ್ಮಿಯ ಅನುಗ್ರಹವನ್ನು ಪಡೆದುಕೊಳ್ಳಬೇಕು.

- ಶುಕ್ರವಾರ, ಯಾವುದೇ ಮಹಿಳೆ ಅಥವಾ ಹುಡುಗಿಯನ್ನು ಮರೆತೂ ಕೂಡ ಅಗೌರವಿಸಬಾರದು.

- ಈ ದಿನ ನಪುಂಸಕರನ್ನು ಅವಮಾನಿಸಬೇಡಿ. ಇಲ್ಲವಾದರೆ, ಅವರ ಶಾಪದಿಂದಾಗಿ ಮನೆಯಲ್ಲಿ ಬಡತನ ಎದುರಾಗುವುದು.

- ಎಲ್ಲಿ ಮಹಿಳೆಯರನ್ನು ಗೌರವಿಸಲಾಗುವುದಿಲ್ಲವೋ ಅಲ್ಲಿ ಲಕ್ಷ್ಮಿ ದೇವಿಯು ನೆಲೆಸುವುದಿಲ್ಲ ಎಂದು ಹಿಂದೂ ಧರ್ಮದಲ್ಲಿ ಹೇಳಲಾಗಿದೆ. ಆದ್ದರಿಂದ ಪ್ರತಿಯೊಬ್ಬರು ಮಹಿಳೆಯರನ್ನು ಗೌರವಿಸಬೇಕು.

ಶುಕ್ರವಾರ, ಯಾರಿಂದಲೂ ಹಣವನ್ನು ತೆಗೆದುಕೊಳ್ಳಬೇಡಿ ಅಥವಾ ಹಣವನ್ನು ಎರವಲು ಪಡೆಯಬೇಡಿ. ಹಾಗೆ ಮಾಡುವುದರಿಂದ ಸಂಪತ್ತು ಹೆಚ್ಚಿಸುವಲ್ಲಿ ಸಮಸ್ಯೆಗಳು ಉಂಟಾಗುತ್ತವೆ ಎನ್ನುವ ನಂಬಿಕೆಯಿದೆ.

- ಶುಕ್ರವಾರ ಸಕ್ಕರೆಯನ್ನು ಯಾರಿಗೂ ನೀಡಬಾರದು ಎನ್ನುವ ಧಾರ್ಮಿಕ ನಂಬಿಕೆಯಿದೆ. ಹೀಗೆ ಮಾಡುವುದರಿಂದ ಶುಕ್ರ ಗ್ರಹವು ವ್ಯಕ್ತಿಯ ಜಾತಕದಲ್ಲಿ ದುರ್ಬಲವಾಗುತ್ತದೆ.
- ಶುಕ್ರನ ದುರ್ಬಲತೆಯು ಸೌಕರ್ಯಗಳ ಕೊರತೆ ಮತ್ತು ಹಣಕಾಸಿನ ನಿರ್ಬಂಧಗಳಿಗೆ ಕಾರಣವಾಗುತ್ತದೆ.
- ನಿಮ್ಮ ವ್ಯಾಪಾರವು ಸರಿಯಾಗಿ ನಡೆಯುತ್ತಿದ್ದು, ಆದರೂ ನಿಮ್ಮ ಬಳಿ ಹಣ ಉಳಿಯದಿದ್ದರೆ ಆಗ ನೀವು ಲಕ್ಷ್ಮಿ ದೇವಿಯ ಗಜ ಲಕ್ಷ್ಮಿ ರೂಪವನ್ನು ಪೂಜಿಸಬೇಕು. ಲಕ್ಷ್ಮಿಯ ಗಜಲಕ್ಷ್ಮಿ ರೂಪದಲ್ಲಿ ಆಕೆಯ ಎರಡೂ ಬದಿಗಳಲ್ಲಿ ಆನೆಗಳು ನಿಂತಿರುತ್ತದೆ. ಗಜಲಕ್ಷ್ಮಿಯನ್ನು ಪೂಜಿಸುವಾಗ ಆಕೆಗೆ ಗುಲಾಬಿ ಹೂವುಗಳನ್ನು ಅರ್ಪಿಸಿ ಮತ್ತು ತುಪ್ಪದ ದೀಪವನ್ನು ಬೆಳಗಿಸಿ. ಈಗ ಲಕ್ಷ್ಮಿಯನ್ನು ಪೂಜಿಸಿ. ಮಂತ್ರಗಳನ್ನು ಜಪಿಸಿ. ಅದರ ನಂತರ ಲಕ್ಷ್ಮಿಗೆ ಆರತಿಯನ್ನು ಮಾಡುವ ಮೂಲಕ ಪೂಜೆಯನ್ನು ಪೂರ್ಣಗೊಳಿಸಿ. ನಂತರ ಪೂಜೆಗಿಟ್ಟ ಗುಲಾಬಿ ಹೂವುಗಳನ್ನು ನೀವು ಹಣವಿಡುವ ಸ್ಥಳದಲ್ಲಿ ಇರಿಸಿ

ಹಣವನ್ನು ಉಳಿಸುವ ಸಲುವಾಗಿ, ಭಕ್ತಿಯಿಂದ ಲಕ್ಷ್ಮಿ ದೇವಿಯ ಆರಾಧನೆಯನ್ನು ಮಾಡಬೇಕು. ಈ ದಿನ ನೀವು ಧಾನ್ಯ ಲಕ್ಷ್ಮಿಯ ವಿಗ್ರಹ ಅಥವಾ ಚಿತ್ರವನ್ನು ಪೂಜಿಸಬೇಕು. ಈಗ ಆಕೆಯ ಮುಂದೆ ತುಪ್ಪದ ದೀಪವನ್ನು ಹಚ್ಚಿ ಬೆಳ್ಳಿ ನಾಣ್ಯಗಳನ್ನು ಅರ್ಪಿಸಿ. ಈಗ ಮಾತೆ ಲಕ್ಷ್ಮಿಯ ಮಂತ್ರಗಳನ್ನು ಪಠಿಸಿ ಮತ್ತು ಪೂಜೆಯ ಕೊನೆಯಲ್ಲಿ ಆರತಿ ಮಾಡಿ. ಈಗ ಈ ನಾಣ್ಯವನ್ನು ಹಣ ಇಡುವ ಸ್ಥಳದಲ್ಲಿ, ಅಂದರೆ ತಿಜೋರಿ ಅಥವಾ ವಾಲ್ಟ್‌ನಲ್ಲಿ ಇರಿಸಿ.

ನಿಮ್ಮ ಹಣವನ್ನು ಅನಗತ್ಯವಾಗಿ ಸಾಕಷ್ಟು ಖರ್ಚು ಮಾಡಲಾಗುತ್ತಿದ್ದರೆ ಮತ್ತು ಸಾಕಷ್ಟು ಪ್ರಯತ್ನಗಳ ನಂತರವೂ ನಿಮ್ಮ ಬಳಿ ಖರ್ಚುಗಳನ್ನು ನಿಲ್ಲಿಸಲು ಸಾಧ್ಯವಾಗದಿದ್ದರೆ, ಪ್ರತಿದಿನ ಅಥವಾ ಪ್ರತಿ ಶುಕ್ರವಾರ, ಲಕ್ಷ್ಮಿ ದೇವಿಯ ಪೂಜೆಯ ಸಮಯದಲ್ಲಿ, ಆಕೆಯ ಪಾದಕ್ಕೆ ಒಂದು ರೂಪಾಯಿ ನಾಣ್ಯಗಳನ್ನು ಅರ್ಪಿಸಿ. ತಿಂಗಳ ಕೊನೆಯಲ್ಲಿ, ಸುಮಂಗಲಿ ಮಹಿಳೆಗೆ ಈ ನಾಣ್ಯಗಳನ್ನು ದಾನ ಮಾಡಿ. ಈ ಕೆಲಸವನ್ನು ಯಾವಾಗಲೂ ಮಾಡುತ್ತಿರಿ. ಇದು ಹಣದ ಖರ್ಚನ್ನು ನಿಲ್ಲಿಸುತ್ತದೆ ಮತ್ತು ಸಂಪತ್ತಿನ ಹೆಚ್ಚಳವೂ ಆಗುತ್ತದೆ ಎನ್ನುವ ನಂಬಿಕೆಯಿದೆ.

ನೀವು ಬಹಳಷ್ಟು ಹಣವನ್ನು ಗಳಿಸುತ್ತಿದ್ದು, ಆ ಹಣ ನಿಮ್ಮ ಬಳಿ ಉಳಿಯುತ್ತಿಲ್ಲವೆಂದು ನಿಮಗೆ ಎನಿಸಿದರೆ ನೀವು ಶುಕ್ರವಾರ ತಪ್ಪದೇ ಲಕ್ಷ್ಮಿಯ ಈ ವಿಗ್ರಹವನ್ನು ಮನೆಯ್ಲಲಿಟ್ಟು ಪೂಜಿಸಬೇಕು. ವಿಗ್ರಹ ಅಥವಾ ಚಿತ್ರ ಹೇಗಿರಬೇಕೆಂದರೆ, ಅದರಲ್ಲಿ ಲಕ್ಷ್ಮಿ ದೇವಿಯು ತನ್ನ ಕೈಗಳಿಂದ ನಾಣ್ಯವನ್ನು ಚೆಲ್ಲುತ್ತಿರಬೇಕು.

ಭಕ್ತರು ಸೂರ್ಯೋದಯಕ್ಕೆ ಮುಂಚಿತವಾಗಿ ಎದ್ದು ಸ್ನಾನದಿಂದ ನಿವೃತ್ತರಾಗಬೇಕು. ಅದರ ನಂತರ ಸ್ವಚ್ಛವಾದ ಬಟ್ಟೆಗಳನ್ನು ಧರಿಸಿ. ಅದರ ನಂತರ, ಮನೆಯ ಪೂಜಾ ಸ್ಥಳದಲ್ಲಿ ಕೆಂಪು ಬಣ್ಣದ ಬಟ್ಟೆಯನ್ನು ಹರಡಿ ಮತ್ತು ಅದರ ಮೇಲೆ ತಾಯಿ ಲಕ್ಷ್ಮಿಯೊಂದಿಗೆ ವಿಷ್ಣುವಿನ ಮೂರ್ತಿಯನ್ನು ಸ್ಥಾಪಿಸಿ. ಲಕ್ಷ್ಮಿ ದೇವಿಯ ಮುಂದೆ ಅಕ್ಕಿಯ ರಾಶಿಯನ್ನು ಇರಿಸಿ ಮತ್ತು ಅದರ ಮೇಲೆ ಶುದ್ಧ ನೀರಿನಿಂದ ತುಂಬಿದ ತಾಮ್ರದ ಪಾತ್ರೆಯನ್ನು ಇರಿಸಿ. ಈಗ ಪೂರ್ವಕ್ಕೆ ಅಭಿಮುಖವಾಗಿ ಕುಳಿತು ಪೂಜೆ ಮಾಡಿ. ಈಗ ಲಕ್ಷ್ಮಿ ದೇವಿಯ ಮುಂದೆ ತುಪ್ಪದ ದೀಪವನ್ನು ಹಚ್ಚಿ ಮತ್ತು ಅವಳಿಗೆ ಬಿಳಿ ಹೂವುಗಳು, ಬಿಳಿ ಶ್ರೀಗಂಧ ಮತ್ತು ಸುಗಂಧ ದ್ರವ್ಯಗಳನ್ನು ಅರ್ಪಿಸಿ. ಈಗ ತಾಯಿಯ ಮಂತ್ರಗಳನ್ನು ಪಠಿಸಿ ಮತ್ತು ಕೊನೆಯಲ್ಲಿ ಲಕ್ಷ್ಮಿ ದೇವಿಯ ಆರತಿಯನ್ನು ಹಾಡಿ. ಈ ಕಾರಣದಿಂದಾಗಿ, ವ್ಯಕ್ತಿಯ ಎಲ್ಲಾ ತೊಂದರೆಗಳು ಮತ್ತು ಪಾಪಗಳು ದೂರವಾಗುತ್ತವೆ ಮತ್ತು ತಾಯಿಯ ಕೃಪೆ ಯಾವಾಗಲೂ ಉಳಿಯುತ್ತದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow