ಅಯೋಧ್ಯೆ ರಾಮ ಮಂದಿರದಲ್ಲಿ ಮೊದಲ ದೀಪಾವಳಿ: ಅದ್ದೂರಿಯಾಗಿ ಆಚರಿಸಲು ಯೋಗಿ ಸರ್ಕಾರ ಸಿದ್ಧತೆ

ನೂರಾರು ವರ್ಷಗಳ ಹೋರಾಟದ ಫಲವಾಗಿ ಜನವರಿ 22, 2024ರಂದು ಆಯೋಧ್ಯೆಯಲ್ಲಿ ಮರ್ಯಾದಾ ಪುರುಷೋತ್ತಮ ಶ್ರೀ ರಾಮ ಚಂದ್ರನ ಮಂದಿರವನ್ನು ಅದ್ಧೂರಿಯಾಗಿ ನಿರ್ಮಿಸಿಲಾಯಿತು. ಜನವರಿಯಲ್ಲಿ ನಡೆದ ಪ್ರಾಣಪ್ರತಿಷ್ಠೆಯ ನಂತರ ಬಾಲರಾಮನ ದರ್ಶನವನ್ನು ಕೋಟಿ ಕೋಟಿ ಜನರು ಪಡೆದಿದ್ದಾರೆ.
ಇನ್ನೂ ಅಯೋಧ್ಯೆಯಲ್ಲಿ ಬಾಲರಾಮನ ಮೂರ್ತಿ ಪ್ರತಿಷ್ಠಾಪನೆಯ ಬಳಿಕ ಇದು ಮೊದಲ ದೀಪಾವಳಿಯಾಗಿದೆ. ಈಗಾಗಲೇ ದೀಪೋತ್ಸವಕ್ಕೆ ಸಕಲ ಸಿದ್ಧತೆ ನಡೆದಿದ್ದು, ದೇವಾಲಯವು ಪರಿಸರ ಸ್ನೇಹಿ ದೀಪಗಳಿಂದ ಕಂಗೊಳಿಸಲಿದೆ. ದೀಪದಿಂದಾಗುವ ಕಲೆಗಳು ಹಾಗೂ ಮಸಿಗಳನ್ನು ತಪ್ಪಿಸಲು ವೀಶೇಷವಾಗಿ ದೀಪಗಳನ್ನು ರಚಿಸಲಾಗಿದೆ. ಹಾಗೂ ದೀರ್ಘಕಾಲ ಬೆಳಗುವಂತ ದೀಪಗಳನ್ನು ತಯಾರಿಸಲಾಗಿದೆ.
ಅಯೋಧ್ಯೆಯಲ್ಲಿನ ಈ ದೀಪೋತ್ಸವ ಸರಯೂ ನದಿಯ ದಂಡೆಯ ಮೇಲೆ ನಡೆಯಲಿದೆ. ಈ ವರ್ಷ ಸರಿಸುಮಾರು 25 ರಿಂದ 28 ಲಕ್ಷ ದೀಪಗಳನ್ನು ಬೆಳಗಿಸುವ ಮೂಲಕ ವಿಶ್ವದಾಖಲೆಯ ಗುರಿಯನ್ನು ಹೊಂದಿದೆ. ಹೂವಿನಿಂದ ರಾಮಮಂದಿರವನ್ನು ವಿಶೇಷವಾಗಿ ಅಲಂಕರಿಸಲಾಗುತ್ತದೆ. ದೇವಾಲಯದ ಸಂಪೂರ್ಣ ಅಲಂಕಾರಕ್ಕಾಗಿ ವಿವಿಧ ವಿವಿಧ ತಂಡಗಳನ್ನು ನಿಯೋಜಿಸಲಾಗಿದೆ.
ದೀಪಗಳ ವ್ಯವಸ್ಥೆ ಪ್ರವೇಶ ಕಮಾನು ಅಲಂಕಾರಗಳು ಮತ್ತು ಸಂಪೂರ್ಣ ಶುಚಿಗೊಳಿಸುವಿಕೆಯ ಒಟ್ಟಾರೆ ಮೇಲ್ವಿಚಾರಣೆಯನ್ನು ಬಿಹಾರ ಕೇಡರ್ನ ನಿವೃತ್ತ ಪೋಲೀಸ್ ಅಶು ಶುಕ್ಲಾ ಅವರಿಗೆ ವಹಿಸಲಾಗಿದೆ. ಹೂವುಗಳು ಮತ್ತು ದೀಪಗಳಿಂದ ಅಲಂಕರಿಸಿರುವ ದೇವಾಲಯದ ವಿಹಂಗಮ ನೋಟ ಭಕ್ತರ ಕಣ್ಮನ ಸೆಳೆಯಲಿದೆ.
ನಿಮ್ಮ ಪ್ರತಿಕ್ರಿಯೆ ಏನು?






