ಕೊಲೆಯ ಬೆದರಿಕೆ ನಡುವೆಯೂ ದುಬೈ ಹೊರಡಲು ರೆಡಿಯಾದ ಸಲ್ಲು!

ಅಕ್ಟೋಬರ್ 28, 2024 - 13:59
 0  8
ಕೊಲೆಯ ಬೆದರಿಕೆ ನಡುವೆಯೂ ದುಬೈ ಹೊರಡಲು ರೆಡಿಯಾದ ಸಲ್ಲು!

ಒಂದೆಡೆ ಮೇಲಿಂದ ಮೇಲೆ ಕೊಲೆ ಬೆದರಿಕೆ ಬರುತ್ತಿರುವ ನಡುವೆಯೂ ಸಲ್ಮಾನ್ ಖಾನ್ ಅವರು, ದುಬೈ ಹೊರಡಲು ರೆಡಿ ಆಗಿದ್ದಾರೆ. ಲಾರೆನ್ಸ್ ಬಿಷ್ಣೋಯ್ ಬೆದರಿಕೆಯಿಂದಾಗಿ ಸಲ್ಮಾನ್ ಖಾನ್ ಸಂಪೂರ್ಣ ಭದ್ರತೆಯೊಂದಿಗೆ ಮುಂಬೈನಲ್ಲಿದ್ದಾರೆ. ‘ಸಿಖಂದರ್’ ಸಿನಿಮಾದ ಶೂಟಿಂಗ್ ಮುಂಬೈನ ಹೊರಗೆ ನಡೆಯಬೇಕಿತ್ತು. ಆದರೆ ಅದನ್ನು ರದ್ದುಪಡಿಸಿ ಮುಂಬೈನಲ್ಲಿ ಸೆಟ್ ಹಾಕಲಾಗಿದೆ ಎಂಬ ಮಾಹಿತಿ ಇದೆ. ವರದಿಯ ಪ್ರಕಾರ ಸಲ್ಮಾನ್ ಖಾನ್ ಶೀಘ್ರದಲ್ಲೇ ದುಬೈಗೆ ಕಾರ್ಯಕ್ರಮವೊಂದಕ್ಕೆ ತೆರಳಲಿದ್ದಾರೆ.

ದಬಾಂಗ್ ರಿಲೋಡೆಡ್’ಗಾಗಿ ಸಲ್ಮಾನ್ ಖಾನ್ ದುಬೈಗೆ ಹೋಗಲಿದ್ದಾರೆ ಎಂಬ ವರದಿಗಳಿವೆ. ಡಿಸೆಂಬರ್ 7ರಂದು ಶೋ ಆರಂಭವಾಗಲಿದೆ ಎಂದು ವರದಿಯಾಗಿದೆ. ಸಲ್ಮಾನ್ ತಮ್ಮ ಜೀವಕ್ಕೆ ಅಪಾಯವಿರುವಾಗಲೂ ಎಲ್ಲಾ ಚಿತ್ರೀಕರಣ ಮತ್ತು ಕಾರ್ಯಕ್ರಮಗಳನ್ನು ಸಮಯಕ್ಕೆ ಮುಗಿಸುತ್ತಿದ್ದಾರೆ.

ಸಲ್ಮಾನ್ ಖಾನ್ ಜೊತೆಗೆ ಜಾಕ್ವೆಲಿನ್ ಫರ್ನಾಂಡೀಸ್, ಸೋನಾಕ್ಷಿ ಸಿನ್ಹಾ, ಸುನಿಲ್ ಗ್ರೋವರ್, ಆಸ್ತಾ ಗಿಲ್ ಮತ್ತು ಮನೀಶ್ ಪಾಲ್ ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಶೋ ದುಬೈ ಹಾರ್ಬರ್‌ನಲ್ಲಿ ನಡೆಯಲಿದೆ. ಸಿಕ್ಕಿರುವ ಮಾಹಿತಿಯಂತೆ ಶೋ ಟಿಕೆಟ್‌ಗಳ ಮಾರಾಟವೂ ಆರಂಭವಾಗಿದೆ.

ಸಲ್ಮಾನ್ ಖಾನ್ ಸಂಪೂರ್ಣ ಭದ್ರತೆಯೊಂದಿಗೆ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ ಎನ್ನಲಾಗಿದೆ. ಆದರೆ ಯಾವುದೇ ಸಮಸ್ಯೆಗಳು ಉದ್ಭವಿಸಿದರೆ, ಪ್ರೋಗ್ರಾಂನಲ್ಲಿ ಕೆಲವು ಬದಲಾವಣೆಗಳಾಗಬಹುದು… ಎಂದು ಕೂಡ ಹೇಳಲಾಗುತ್ತದೆ. ನಿಮಗೆ ಹೇಳಬೇಕೆಂದರೆ, ಸಲ್ಮಾನ್ ಖಾನ್ ಅವರು ‘ಸಿಂಗಮ್ ಅಗೇನ್’ ಚಿತ್ರದ ಶೂಟಿಂಗ್ ಕೂಡ ಮುಗಿಸಿದ್ದಾರೆ. ಚಿತ್ರದಲ್ಲಿ ಅತಿಥಿ ನಟನಾಗಿ ಕಾಣಿಸಿಕೊಳ್ಳಲಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow