ಅಲ್ಲು ಅರ್ಜುನ್ ಮತ್ತೆ ಜೈಲು ಸೇರುವ ಭೀತಿ: ಕಾಲ್ತುಳಿತ ಕೇಸ್​​ಗೆ ಸಿಕ್ತು ಬಿಗ್ ಟ್ವಿಸ್ಟ್!

ಡಿಸೆಂಬರ್ 18, 2024 - 21:02
 0  25
ಅಲ್ಲು ಅರ್ಜುನ್ ಮತ್ತೆ ಜೈಲು ಸೇರುವ ಭೀತಿ: ಕಾಲ್ತುಳಿತ ಕೇಸ್​​ಗೆ ಸಿಕ್ತು ಬಿಗ್ ಟ್ವಿಸ್ಟ್!

ಬೆಂಗಳೂರು:- ಕಾಲ್ತುಳಿತ ಕೇಸ್ ಗೆ ಸಂಬಂಧಿಸಿದಂತೆ ಅಲ್ಲು ಅರ್ಜುನ್​ ಮತ್ತೊಮ್ಮೆ ಜೈಲು ಪಾಲಾಗುವ ಆತಂಕ ಹೆಚ್ಚಿಸಿದೆ. 

ಕಾಲ್ತುಳಿತದ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಅಲ್ಲು ಅರ್ಜುನ್ ಹಾಗೂ ಥಿಯೇಟರ್ ಮಾಲೀಕರನ್ನು ಬಂಧಿಸಿದರು. ಆದರೆ ಅಲ್ಲು ಅರ್ಜುನ್ ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಬಂಧವಾದ ದಿನವೇ ಅಲ್ಲು ಅರ್ಜುನ್​ಗೆ ಬೇಲ್​ ಸಿಕ್ಕಿತ್ತು. ಮರುದಿನ ನಟ ಜೈಲಿಂದ ರಿಲೀಸ್ ಆಗಿದ್ರು.

ಪುಷ್ಪ-2 ಸಕ್ಸಸ್​ ಅಲೆಯಲ್ಲಿ ತೇಲ್ತಿದ್ದ ಅಲ್ಲು ಅರ್ಜುನ್ ಸದ್ಯ ಜೈಲಿನ ಸಂಕಷ್ಟದಿಂದ ಪಾರಾಗಿದ್ರೂ ಈಗ ಮತ್ತೊಮ್ಮೆ ಕತ್ತಲೆ ಕಂಬಿಯ ಕಂಟಕ ಎದುರಾಗುವ ಆತಂಕ ಹೆಚ್ಚಿಸಿದೆ. ಈ ಹೊಸ ಆತಂಕ ಹೆಚ್ಚಲು ಕಾರಣ, ತೆಲಂಗಾಣ ಸರ್ಕಾರ ಇಟ್ಟ ಹೆಜ್ಜೆ.

ಪುಷ್ಪ-2 ಸಕ್ಸಸ್​ ಅಲೆಯಲ್ಲಿ ತೇಲ್ತಿದ್ದ ಅಲ್ಲು ಅರ್ಜುನ್ ಸದ್ಯ ಜೈಲಿನ ಸಂಕಷ್ಟದಿಂದ ಪಾರಾಗಿದ್ರೂ ಈಗ ಮತ್ತೊಮ್ಮೆ ಕತ್ತಲೆ ಕಂಬಿಯ ಕಂಟಕ ಎದುರಾಗುವ ಆತಂಕ ಹೆಚ್ಚಿಸಿದೆ. ಈ ಹೊಸ ಆತಂಕ ಹೆಚ್ಚಲು ಕಾರಣ, ತೆಲಂಗಾಣ ಸರ್ಕಾರ ಇಟ್ಟ ಹೆಜ್ಜೆ..

ಪುಷ್ಪರಾಜ್​ಗೆ ತಪ್ಪದ ಕಂಟಕ!

ಹೈದರಾಬಾದ್‌ನ ಸಂಧ್ಯಾ ಥಿಯೇಟರ್ ಕಾಲ್ತುಳಿತ ಕೇಸ್
ಕಾಲ್ತುಳಿತ ಕೇಸ್​​​​ನಲ್ಲಿ ಅಲ್ಲು ಅರ್ಜುನ್ 11ನೇ ಆರೋಪಿ
ಕಳೆದ ಶುಕ್ರವಾರ ಬಂಧಿಸಿದ ದಿನವೇ ಮಧ್ಯಂತರ ಬೇಲ್​​​
6 ವಾರಗಳ ಮಧ್ಯಂತರ ಜಾಮೀನು ನೀಡಿದ್ದ ಹೈಕೋರ್ಟ್​
ಸಂಧ್ಯಾ ಥಿಯೇಟರ್ ಬಳಿ ಭೇಟಿ ನೀಡುವ ಬಗ್ಗೆ ಮಾಹಿತಿ
ಹೆಚ್ಚುವರಿ ಭದ್ರತೆ ನೀಡಲಾಗದು ಎಂದಿದ್ದ ಪೊಲೀಸರು
ಪೊಲೀಸರು ಹೇಳಿದ ಮೇಲು ಪುಷ್ಪರಾಜ್​​ ನಿರ್ಲಕ್ಷ್ಯತನ
ಸಂಧ್ಯಾ ಥಿಯೇಟರ್​​ಗೆ ಭೇಟಿ ನೀಡಿದ್ದ ಅಲ್ಲು ಅರ್ಜುನ್​​
ಈ ವಿಚಾರವನ್ನ ಹೈಕೋರ್ಟ್​ನ ಗಮನಕ್ಕೆ ತಂದಿರಲಿಲ್ಲ
ಬೇಲ್​​ ರದ್ದಿಗೆ ಸುಪ್ರೀಂ ಕದತಟ್ಟಲು ಸಜ್ಜಾದ ಪೊಲೀಸರು
ಭದ್ರತೆ ಮತ್ತು ನಟ ಅಲ್ಲು ಅರ್ಜುನ್​​ ನಿರ್ಲಕ್ಷ್ಯ ಪ್ರಸ್ತಾಪ

ಚಿಕ್ಕಡಪಲ್ಲಿ ಪೊಲೀಸರು ಸಂಧ್ಯಾ ಥಿಯೇಟರ್​ಗೆ ಪುಷ್ಪ 2 ಚಿತ್ರತಂಡಕ್ಕೆ ಬರಬಾರದು ಎಂದು ಲಿಖಿತವಾಗಿ ಪತ್ರದ ಮೂಲಕ ಸೂಚಿಸಿದ್ದರಂತೆ.. ಪುಷ್ಪ-2 ಚಿತ್ರತಂಡಕ್ಕೆ ಥಿಯೇಟರ್‌ಗೆ ಬರಲು ಅನುಮತಿ ನೀಡಿಲ್ಲ ಅಂತ ಪೊಲೀಸರು ಹೇಳ್ತಿದ್ದಾರೆ. ಅಲ್ಲು ಅರ್ಜುನ್ ಅನುಮತಿಯಿಲ್ಲದೆ ಥಿಯೇಟರ್‌ಗೆ ಬಂದಿದ್ದಷ್ಟೇ ಅಲ್ಲ, ಕೊನೆಗೆ ಅನುಮತಿ ಇಲ್ಲದೆ ಱಲಿ ಮೂಲಕ ತೆರಳಿದ್ದಾರೆ ಅಂತ ಪೊಲೀಸರು ಹೊಸ ವಾದ ಮಂಡಿಸ್ತಿದ್ದಾರೆ.
ನಟ ಅಲ್ಲು ಅರ್ಜುನ್ ಜಾಮೀನು ರದ್ದತಿಗೆ ಸುಪ್ರೀಂಕೋರ್ಟ್ ಮೆಟ್ಟಿಲೇರಲು ಹೈದರಾಬಾದ್ ಪೊಲೀಸರ ನಿರ್ಧರಿಸಿದ್ದಾರೆ. 

ಪುಷ್ಪ 2 ಚಿತ್ರದ ಪ್ರೀಮಿಯರ್ ಶೋಗಾಗಿ ಡಿಸೆಂಬರ್ 4 ರಂದು ರಾತ್ರಿ ಸಂಧ್ಯಾ ಥಿಯೇಟರ್‌ಗೆ ಅಲ್ಲು ಅರ್ಜುನ್ ಜೊತೆಗೆ ಪುಷ್ಪ 2 ಚಿತ್ರತಂಡ ತೆರಳಿತ್ತು. ಈ ವೇಳೆ ಅಲ್ಲು ಅರ್ಜುನ್ ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದರಿಂದ ನೂಕುನುಗ್ಗಲು ಉಂಟಾಯಿತು. ಈ ಘಟನೆ ರೇವತಿ ಸಾವನ್ನಪ್ಪಿದ್ರು. ಗಾಯಗೊಂಡ ಮಹಿಳೆ ಪುತ್ರ ಇನ್ನೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕೇಸ್​ ಅಲ್ಲು ಅರ್ಜುನ್​ಗೆ ಜೈಲು ದರ್ಶನ ಮಾಡಿಸಿತು. ಇದೀಗ ಪೊಲೀರು​ ಮತ್ತೆ ಅಲ್ಲು ಅರ್ಜುನ್ ಬೇಲ್ ವಿರುದ್ಧ ಮೇಲ್ಮನವಿ ಸಲ್ಲಿಸಲು ಮುಂದಾಗಿದ್ದಾರೆ ಎನ್ನಲಾಗ್ತಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow