ಬಯಲು ಸೀಮೆಗೆ ಭದ್ರೆ ನೀರುಣಿಸುವುದು ಯಾವಾಗ!?ಆಮೆಗತಿಯಲ್ಲಿ ತುಂಗಾ ಕಾಮಗಾರಿ!

ಚಿತ್ರದುರ್ಗ: ಅನುದಾನದ ಕೊರತೆ, ಭೂಸ್ವಾಧೀನ ಪ್ರಕ್ರಿಯೆ ವಿಳಂಬದಿಂದಾಗಿ ಮಧ್ಯ ಕರ್ನಾಟಕದ ನಾಲ್ಕು ಜಿಲ್ಲೆಗಳಿಗೆ ನೀರುಣಿಸುವ ಭದ್ರಾ ಮೇಲ್ದಂಡೆ ಯೋಜನೆ ಕುಂಟುತ್ತಾ ಸಾಗಿದೆ.
ಬಯಲು ಸೀಮೆ ಜನರ ಬಹುನಿರೀಕ್ಷಿತ ಭದ್ರಾ ಮೇಲ್ದಂಡೆ ಯೋಜನೆ ಕುಂಟುತ್ತಾ ಸಾಗಿದೆ. ಯೋಜನೆಗೆ ಹೆಚ್ಚು ನೀರು ಕೊಡುವ ತುಂಗಾ ಜಲಾಶಯದಿಂದ ಭದ್ರಾಕ್ಕೆ ಲಿಫ್ಟ್ ಮಾಡುವ ಕಾಮಗಾರಿಯ ಎರಡು ಲಿಫ್ಟ್ ಗಳು ಮತ್ತು 500 ಮೀಟರ್ ಸುರಂಗ ಕಾಲುವೆ ಮಾಡಲು 15 ವರ್ಷಗಳಾದರೂ ಸಾಧ್ಯವಾಗಿಲ್ಲ ಎಂದು ಕಾಮಗಾರಿ ವೀಕ್ಷಣೆ ಮಾಡಿದ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಕಸವನಹಳ್ಳಿ ರಮೇಶ್ ಆಕ್ರೋಶ ವ್ಯಕ್ತಪಡಿಸಿದರು.
ಹಿರಿಯೂರಿನ 12 ಜನ ರೈತರ ತಂಡ ತುಂಗಾ ಜಲಾಶಯದಿಂದ ಆರಂಬಿಕ ಹಂತ ಮುತ್ತಿನಕೊಪ್ಪ ಇಂಟೇಕ್ ಕ್ಯನಾಲ್ ತುಂಗಾ ಜಲಾಶಯದ ಹಿನ್ನೀರಿನ ಪ್ರದೇಶದಿಂದ ಮೊದಲನೇ ಲಿಫ್ಟ್ ವರೆಗೂ ಕಾಲುವೆ ಮಾರ್ಗದಲ್ಲಿ ಸುರಂಗ ಮಾರ್ಗದವರೆಗೆ ಕಾಮಗಾರಿ ವೀಕ್ಷಿಸಿದಾಗ ಅಲ್ಲಲ್ಲಿ ಕಾಲುವೆ ಕಾಮಗಾರಿ ಬಾಕಿ ಉಳಿದಿದೆ.
ಮುತ್ತಿನ ಕೊಪ್ಪ ಸಮೀಪದ ಒಂದನೇ ಲಿಫ್ಟ್ ಪಂಪ್ ಹೌಸ್ ಕಟ್ಟಡ ಕಾಮಗಾರಿ ಅಪೂರ್ಣವಾಗಿದ್ದು ಅಲ್ಲಿ ಮೋಟರ್ ಪಂಪ್ ಗಳನ್ನು ಅಳವಡಿಸಲಾಗಿಲ್ಲ. ಅಲ್ಲದೆ ನೀರೆತ್ತುವ ಕೊಳವೆಗಳು ಹತ್ತು ಹದಿನೈದು ವರ್ಷಗಳ ಹಿಂದೆ ಖರೀದಿ ಮಾಡಿದ್ದು,ತುಕ್ಕು ಹಿಡಿಯುವಂತಾಗಿವೆ, ಅವುಗಳನ್ನೇ ಬಳಕೆ ಮಾಡಲಾಗುತ್ತಿದೆ ಇದರಿಂದ ಕಾಮಗಾರಿಯ ಗುಣಮಟ್ಟ ಕಳಪೆಯಾಗುತ್ತದೆ ಅಲ್ಲದೆ ವಿದ್ಯುತ್ ಟವರ್ ಗಳನ್ನು ನಿರ್ಮಿಸಲಾಗಿದೆ ಆದರೆ ವಿದ್ಯುತ್ ಮಾರ್ಗ ಎಳೆಯಲಾಗಿಲ್ಲ.ಅಲ್ಲದೆ ಎಲೆಕ್ಟ್ರಿಕ್ ಸಬ್ ಸ್ಟೇಷನ್ ಕಾಮಗಾರಿ ಅಪೂರ್ಣವಾಗಿದೆ. ಎರಡನೇ ಲಿಫ್ಟ್ ನ ಸಾತುಕೋಳಿ ಬಳಿ ಇರುವ ಕಾಮಗಾರಿಯು ಸಹ ಅಪೂರ್ಣವಾಗಿದೆ ಅಲ್ಲದೆ ಸುರಂಗ ಮಾರ್ಗ ಸಹ ಪೂರ್ಣವಾಗಿಲ್ಲ ಅಲ್ಲಲ್ಲಿ ಸೇತುವೆ ನಿರ್ಮಾಣ ಹಾಗೂ ಕಾಲುವೆ ಕಾಂಕ್ರೀಟ್ ಕಾಮಗಾರಿ ಬಾಕಿ ಇದೆ. ಈ ಭಾಗದಲ್ಲಿ ಅತಿ ಹೆಚ್ಚು ಮಳೆ ಬೀಳುವ ಕಾರಣಕ್ಕೆ ಆರು ತಿಂಗಳು ಮಾತ್ರ ಕಾಮಗಾರಿ ನಡೆಸಬಹುದು.ಅದರಲ್ಲಿಯೂ ನೀರನ್ನು ಹೊರ ಹಾಕಲು ಕೆಲವು ಸಮಯ ತೆಗೆದುಕೊಳ್ಳುತ್ತದೆ. ಈ ಬೇಸಿಗೆ ಕಳೆಯುವುದರೊಳಗೆ ಕಾಮಗಾರಿ ಮುಕ್ತಾಯಗೊಳಿಸಲು ಸಮರೋಪಾದಿಯಲ್ಲಿ ಕೆಲಸ ಮಾಡಬೇಕಾಗುತ್ತದೆ ಎಂದು ಒತ್ತಾಯಿಸಿದ್ದಾರೆ...
ನಿಮ್ಮ ಪ್ರತಿಕ್ರಿಯೆ ಏನು?






