ಆಸ್ಪತ್ರೆಯಲ್ಲಿ ಗೋಲ್ಡ್ ಸುರೇಶ್ ಭೇಟಿಯಾದ ಚೈತ್ರಾ ಕುಂದಾಪುರ್: ತಲೆಸವರಿ ಧೈರ್ಯ ತುಂಬಿದ ಮಾತಿನ ಮಲ್ಲಿ!

ಫೆಬ್ರವರಿ 4, 2025 - 18:01
 0  38
ಆಸ್ಪತ್ರೆಯಲ್ಲಿ ಗೋಲ್ಡ್ ಸುರೇಶ್ ಭೇಟಿಯಾದ ಚೈತ್ರಾ ಕುಂದಾಪುರ್: ತಲೆಸವರಿ ಧೈರ್ಯ ತುಂಬಿದ ಮಾತಿನ ಮಲ್ಲಿ!

ಕಾಲು ನೋವಿ ನಿಂದ ಬಳಲುತ್ತಿರುವ ಗೋಲ್ಡ್ ಸುರೇಶ್ ಆಸ್ಪತ್ರೆಗೆ ದಾಖಲಾಗಿದ್ದು, ಇಂದು ಹಿಂದೂ ಫೈಯರ್ ಬ್ರ್ಯಾಂಡ್ ಚೈತ್ರಾ ಕುಂದಾಪುರ್ ಭೇಟಿ ಮಾಡಿದ್ದಾರೆ. ಸುರೇಶ್ ದಾಖಲಾಗಿರುವ ಆಸ್ಪತ್ರೆಗೆ ಭೇಟಿ ನೀಡಿದ ಚೈತ್ರ, ಅವರ ಆರೋಗ್ಯ ವಿಚಾರಿಸಿದ್ರು. ಜೊತೆಗೆ ಅವರ ತಲೆ ಸವರಿ ಧೈರ್ಯ ಹೇಳಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸುರೇಶ್ ಆಸ್ಪತ್ರೆ ಬೆಡ್ ನಲ್ಲಿರುವ ವಿಡಿಯೋ ಹಾಗೂ ಫೋಟೋ ವೈರಲ್ ಆಗಿತ್ತು. ಈಗ ಚೈತ್ರ ಜೊತೆ ಮಾತನಾಡ್ತಿರುವ ವಿಡಿಯೋ ವೈರಲ್ ಆಗಿದೆ. ಇದನ್ನು ನೋಡಿದ ಫ್ಯಾನ್ಸ್, ಬೇಗ ಹುಷಾರಾಗಿ ಬನ್ನಿ ಅಂತ ಕಮೆಂಟ್ ಹಾಕಿದ್ದಾರೆ. ಅಲ್ಲದೆ ಚೈತ್ರ, ಅಮ್ಮನ ಹೃದಯ ಹೊಂದಿದ್ದಾರೆಂದು ಬರೆದಿದ್ದಾರೆ. 

ಬಿಗ್ ಬಾಸ್ ಮನೆಯಲ್ಲಿ ಸುರೇಶ್ ಕಾಲಿಗಾದ ನೋವು ಕಡಿಮೆ ಆಗಿಲ್ಲ. ಬಿಗ್ ಬಾಸ್ ಕನ್ನಡ 11ರ ಸೀಸನ್ ಗೆ ಮೈ ತುಂಬ ಬಂಗಾರ ಹಾಕಿಕೊಂಡು ಬಂದವರು ಸುರೇಶ್. ಅವರು ಧರಿಸುವ ಬಂಗಾರದಿಂದಲೇ ಜನರು ಅವರನ್ನು ಗೋಲ್ಡ್ ಸುರೇಶ್ ಅಂತ ಕರೀತಾರೆ. ಉತ್ತರ ಕರ್ನಾಟಕದ ಗೋಲ್ಡ್ ಸುರೇಶ್ ಬಿಗ್ ಬಾಸ್ ಶೋನಲ್ಲಿ ಟಾಸ್ಕ್ ಆಡುವ ವೇಳೆ ಕಾಲಿಗೆ ಗಾಯ ಮಾಡ್ಕೊಂಡಿದ್ದರು. ಡ್ರಮ್ ನಲ್ಲಿ ನೀರು ತುಂಬಿ ಅದನ್ನು ರಕ್ಷಿಸುವ ಟಾಸ್ಕ್ ಅದಾಗಿತ್ತು.

ನೀರು ತುಂಬಿದ್ದ ಡ್ರಮ್ ಸುರೇಶ್ ಕಾಲ್ಮೇಲೆ ಬಿದ್ದಿತ್ತು. ನೋವು ತಾಳಲಾರದೆ ಅವರು ಚಿಕಿತ್ಸೆ ಪಡೆದಿದ್ದರು. ವೈದ್ಯರು ರೆಸ್ಟ್ ಹೇಳಿದ್ದ ಕಾರಣ ಸುರೇಶ್ ಕೆಲ ಟಾಸ್ಕ್ ಆಡಿರಲಿಲ್ಲ. ಆದ್ರೆ ನಂತ್ರ ಉತ್ತಮ ಪ್ರದರ್ಶನ ನೀಡಿ ಕ್ಯಾಪ್ಟನ್ ಕೂಡ ಆಗಿದ್ರು. ನೋವಿನ ಮಧ್ಯೆ ಆಟ ಆಡಿದ್ರೂ ಗೋಲ್ಡನ್ ಸುರೇಶ್ ಗೆ ತುಂಬಾ ದಿನ ಬಿಗ್ ಬಾಸ್ ಮನೆಯಲ್ಲಿ ಇರೋಕೆ ಸಾಧ್ಯ ಆಗ್ಲಿಲ್ಲ. ಬ್ಯುಸಿನೆಸ್ ನಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ತಕ್ಷಣ ಅವರು ಮನೆಗೆ ಬಂದಿದ್ದರು.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow