ಇಡೀ ದೇಶಕ್ಕೆ ಮೈಸೂರು ನಂಬರ್ ಒನ್ ! ಯಾಕೆ ಗೊತ್ತಾ?

ಆಗಸ್ಟ್ 26, 2024 - 12:55
 0  12
ಇಡೀ ದೇಶಕ್ಕೆ ಮೈಸೂರು ನಂಬರ್ ಒನ್ ! ಯಾಕೆ ಗೊತ್ತಾ?
FOCUS KARNATAKA Mysuru

ಇಡೀ ದೇಶಕ್ಕೆ ಮೈಸೂರು ನಂಬರ್ ಒನ್ ! ಯಾಕೆ ಗೊತ್ತಾ?


ಬೀದಿ ಬದಿಯ ವ್ಯಾಪಾರಿಗಳಿಗೆ, ಸಣ್ಣಪುಟ್ಟ ವ್ಯಾಪಾರಿಗಳಿಗೆ ಸಾಲ ಸೌಲಭ್ಯ ಕಲ್ಪಿಸುವ ಮೂಲಕ ಅವರ ವ್ಯಾಪಾರಕ್ಕೆ ಪುಷ್ಠಿ ನೀಡುವ ಸಲುವಾಗಿ ಕೇಂದ್ರ ಸರ್ಕಾರ 2000ನೇ ಇಸವಿಯಲ್ಲಿ ಪಿಎಂ ಸ್ವನಿಧಿ ಎಂಬ ಯೋಜನೆಯನ್ನು ಆರಂಭಿಸಿತ್ತು. ಈಗ, ಇಡೀ ದೇಶದಲ್ಲಿ ಈ ಯೋಜನೆಯ ಲಾಭವನ್ನು ಅತಿ ಹೆಚ್ಚಾಗಿ ಪಡೆದವರು ಮೈಸೂರಿಗರು! ರಾಷ್ಟ್ರಮಟ್ಟದಲ್ಲಿ ಅತಿ ಹೆಚ್ಚು ಬೀದಿ ಬದಿ ವ್ಯಾಪಾರಿಗಳಿಗೆ ಸಾಲ ಸೌಲಭ್ಯ ಕಲ್ಪಿಸುವ ಮೂಲಕ ಅಸಂಘಟಿತ ವಲಯದಲ್ಲಿರುವ ವ್ಯಾಪಾರಸ್ಥರ ನೆರವಿಗೆ ಮಹಾನಗರ ಪಾಲಿಕೆ ಶ್ರಮಿಸುತ್ತಿದೆ.

ಕಳೆದ ನಾಲ್ಕು ವರ್ಷಗಳಲ್ಲಿ 37 ಸಾವಿರಕ್ಕೂ ಹೆಚ್ಚು ರಸ್ತೆ ಬದಿ ವ್ಯಾಪಾರಿಗಳಿಗೆ 38 ಕೋಟಿ ರೂ. ಸಾಲ ನೀಡುವ ಮೂಲಕ ರಾಷ್ಟ್ರ ಮಟ್ಟದಲ್ಲಿ ಮೈಸೂರು ಮಹಾನಗರ ಪಾಲಿಕೆ ದಾಖಲೆ ನಿರ್ಮಿಸಿದ್ದು, ಕೇಂದ್ರ ಸರಕಾರದ ಪ್ರಶಂಸೆಗೂ ಪಾತ್ರವಾಗಿದೆ.

ದೇಶದಲ್ಲಿ1.5 ಕೋಟಿ ಬೀದಿ ಬದಿ ವ್ಯಾಪಾರಿಗಳಿದ್ದು, ವಾರ್ಷಿಕ 36 ಸಾವಿರ ಕೋಟಿ ರೂ. ವ್ಯಾಪಾರ ವಹಿವಾಟು ನಡೆಸುತ್ತಿದ್ದು, ದೇಶದ ಜಿಡಿಪಿಯಲ್ಲಿಅವರ ಕೊಡುಗೆ ಸಾಲಷ್ಟು ಇದೆ. ಮೈಸೂರು ನಗರದಲ್ಲಿ17 ಸಾವಿರ ಬೀದಿ ಬದಿ ವ್ಯಾಪಾರಿಗಳಿದ್ದು, ವಾರ್ಷಿಕ 50 ಕೋಟಿ ರೂ. ವಹಿವಾಟು ನಡೆಯುತ್ತದೆ.

2000ರಲ್ಲಿ ಕೇಂದ್ರ ಜಾರಿಗೊಳಿಸಿದ್ದ ಪಿಎಂ ಸ್ವನಿಧಿ ಯೋಜನೆಯನ್ನು ಅತಿ ಹೆಚ್ಚು ಜನರಿಗೆ ತಲುಪಿಸಿದ ಹೆಗ್ಗಳಿಕೆಗೆ ಮೈಸೂರು ಮಹಾನಗರ ಪಾಲಿಕೆ ಭಾಜನವಾಗಿದೆ. ಬೀದಿ ಬದಿಯ ವ್ಯಾಪಾರಿಗಳಿಗೆ ಸಾಲ ನೀಡುವಂಥ ಈ ಯೋಜನೆಯಡಿ, ಕಳೆದ ನಾಲ್ಕು ವರ್ಷಗಳಲ್ಲಿ ಪಾಲಿಕೆಯಿಂದ ಜಿಲ್ಲೆಯ 37 ಸಾವಿರ ವ್ಯಾಪಾರಿಗಳಿಗೆ ಸಾಲ ನೀಡಲಾಗಿದೆ. ಒಟ್ಟು 38 ಕೋಟಿ ರೂ.ಗಳನ್ನು ಸಾಲದ ರೂಪದಲ್ಲಿ ಅನುಷ್ಠಾನಗೊಳಿಸಲಾಗಿದೆ.

ಬೀದಿ ಬದಿಯ ವ್ಯಾಪಾರಿಗಳಿಗೆ, ಸಣ್ಣಪುಟ್ಟ ವ್ಯಾಪಾರಿಗಳಿಗೆ ಸಾಲ ಸೌಲಭ್ಯ ಕಲ್ಪಿಸುವ ಮೂಲಕ ಅವರ ವ್ಯಾಪಾರಕ್ಕೆ ಪುಷ್ಠಿ ನೀಡುವ ಸಲುವಾಗಿ ಕೇಂದ್ರ ಸರ್ಕಾರ 2000ನೇ ಇಸವಿಯಲ್ಲಿ ಪಿಎಂ ಸ್ವನಿಧಿ ಎಂಬ ಯೋಜನೆಯನ್ನು ಆರಂಭಿಸಿತ್ತು. ಈಗ, ಇಡೀ ದೇಶದಲ್ಲಿ ಈ ಯೋಜನೆಯ ಲಾಭವನ್ನು ಅತಿ ಹೆಚ್ಚಾಗಿ ಪಡೆದವರು ಮೈಸೂರಿಗರು! ರಾಷ್ಟ್ರಮಟ್ಟದಲ್ಲಿ ಅತಿ ಹೆಚ್ಚು ಬೀದಿ ಬದಿ ವ್ಯಾಪಾರಿಗಳಿಗೆ ಸಾಲ ಸೌಲಭ್ಯ ಕಲ್ಪಿಸುವ ಮೂಲಕ ಅಸಂಘಟಿತ ವಲಯದಲ್ಲಿರುವ ವ್ಯಾಪಾರಸ್ಥರ ನೆರವಿಗೆ ಮಹಾನಗರ ಪಾಲಿಕೆ ಶ್ರಮಿಸುತ್ತಿದೆ.

ಕಳೆದ ನಾಲ್ಕು ವರ್ಷಗಳಲ್ಲಿ 37 ಸಾವಿರಕ್ಕೂ ಹೆಚ್ಚು ರಸ್ತೆ ಬದಿ ವ್ಯಾಪಾರಿಗಳಿಗೆ 38 ಕೋಟಿ ರೂ. ಸಾಲ ನೀಡುವ ಮೂಲಕ ರಾಷ್ಟ್ರ ಮಟ್ಟದಲ್ಲಿ ಮೈಸೂರು ಮಹಾನಗರ ಪಾಲಿಕೆ ದಾಖಲೆ ನಿರ್ಮಿಸಿದ್ದು, ಕೇಂದ್ರ ಸರಕಾರದ ಪ್ರಶಂಸೆಗೂ ಪಾತ್ರವಾಗಿದೆ.


ದೇಶದಲ್ಲಿ1.5 ಕೋಟಿ ಬೀದಿ ಬದಿ ವ್ಯಾಪಾರಿಗಳಿದ್ದು, ವಾರ್ಷಿಕ 36 ಸಾವಿರ ಕೋಟಿ ರೂ. ವ್ಯಾಪಾರ ವಹಿವಾಟು ನಡೆಸುತ್ತಿದ್ದು, ದೇಶದ ಜಿಡಿಪಿಯಲ್ಲಿಅವರ ಕೊಡುಗೆ ಸಾಲಷ್ಟು ಇದೆ. ಮೈಸೂರು ನಗರದಲ್ಲಿ17 ಸಾವಿರ ಬೀದಿ ಬದಿ ವ್ಯಾಪಾರಿಗಳಿದ್ದು, ವಾರ್ಷಿಕ 50 ಕೋಟಿ ರೂ. ವಹಿವಾಟು ನಡೆಯುತ್ತಿದೆ.


ಕೇಂದ್ರ ಸರಕಾರದ ರಾಷ್ಟ್ರೀಯ ಜೀವನೋಪಾಯ ಅಭಿಯಾನ ಕೌಶಲ್ಯಾಭಿವೃದ್, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯು ಪಿಎಂ ಸ್ವ ನಿ ಯೋಜನೆಯಡಿ ರಸ್ತೆ ಬದಿ ವ್ಯಾಪಾರಿಗಳಿಗೆ ಹಂತ ಹಂತವಾಗಿ ಸಾಲ ಸೌಲಭ್ಯ ಕಲ್ಪಿಸುತ್ತದೆ. ಮೊದಲ ಹಂತದಲ್ಲಿ10 ಸಾವಿರ ರೂ. ಎರಡನೇ ಹಂತದಲ್ಲಿ20 ಸಾವಿರ ಮತ್ತು ಮೂರನೇ ಹಂತದಲ್ಲಿ50 ಸಾವಿರ ರೂ. ಸಾಲ ನೀಡಲಾಗುತ್ತದೆ. ಈ ಯೋಜನೆಯನ್ನು ಮೈಸೂರು ನಗರದಲ್ಲಿಪಾಲಿಕೆಯು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಮೂಲಕ ದಾಖಲೆ ನಿರ್ಮಿಸಿದೆ. ಪಾಲಿಕೆ ರಸ್ತೆ ಬದಿ ವ್ಯಾಪಾರಿಗಳಿಗೆ ನೀಡುವ ಈ ಸಾಲಕ್ಕೆ ಸರಕಾರವೇ ಗ್ಯಾರಂಟಿಯಾಗಿದೆ.

ವೆಬ್ ಡೆಸ್ಕ್
ಫೋಕಸ್ ಕರ್ನಾಟಕ

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow