ಕುಸುಮಾ ಮಾತಿಗೆ ಡೋಂಟ್ ಕೇರ್: ತಾಳಿ ಕಟ್ಟು ಎಂದು ತಾಂಡವ್ ಗೆ ಗದರಿದ ಶ್ರೇಷ್ಠಾ!

ಸೆಪ್ಟೆಂಬರ್ 21, 2024 - 18:19
 0  13
ಕುಸುಮಾ ಮಾತಿಗೆ ಡೋಂಟ್ ಕೇರ್: ತಾಳಿ ಕಟ್ಟು ಎಂದು ತಾಂಡವ್ ಗೆ ಗದರಿದ ಶ್ರೇಷ್ಠಾ!

ಕಲರ್ಸ್‌‌ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಟ್ವಿಸ್ಟ್ ಪಡೆದುಕೊಂಡಿದೆ.  ಮಗನ ಬಗ್ಗೆ ಎಲ್ಲಾ ಸತ್ಯ ತಿಳಿದಿರುವ ಕುಸುಮಾ, ಮದುವೆ ಮಂಟಪಕ್ಕೆ ರಾಯಲ್  ಆಗಿ ಎಂಟ್ರಿ ಕೊಟ್ಟು, ಮಗನಿಗೆ ಹಿಗ್ಗಾಮುಗ್ಗಾ ಬೈದು ಬುದ್ದಿ ಹೇಳಿದ್ದಾರೆ. 

ಕುಸುಮಾ ಮೊದಲಿಂದಲೂ ಮಗ ತಾಂಡವ್‌ನನ್ನು ಅತಿಯಾಗಿ ನಂಬಿದ್ದಳು. ಹೀಗಾಗಿ ತಾಂಡವ್‌ ಹಾಗೂ ಶ್ರೇಷ್ಠಾ ಕಳ್ಳಾಟ ಕೊನೆಗೂ ಅರ್ಥವಾಗದೇ ಹೋಯ್ತು. ಇದೀಗ ಮಗ ಮದುವೆಯಾಗುತ್ತಿರುವುದು ಗೊತ್ತಾಗಿ ಕುಸಿದಿದ್ದಾಳೆ. ಅಂತೂ ಕುಸುಮಾ ಹಾಗೂ ಪೂಜಾ ಮದುವೆಯನ್ನು ನಿಲ್ಲಿಸಿದ್ದಾರೆ.

ಮದುವೆ ನಿಲ್ಲಿಸಿದ ನಂತರ ಕುಸುಮಾ ತಾಂಡವ್‌‌ ಬಗ್ಗೆ ಮಾತನಾಡಿ `ತಪ್ಪು ನಿನ್ನದಲ್ಲ. ನಿನ್ನನ್ನು ನಂಬಿದ್ದು ನನ್ನ ತಪ್ಪು. ನೀನು ಶ್ರೀರಾಮಚಂದ್ರ ಎಂದು ಅಂದುಕೊಂಡಿದ್ದು ನನ್ನದೇ ತಪ್ಪು. ಊರಿನವರೆಲ್ಲ ನಿನ್ನ ಮಗ ಸರಿ ಇಲ್ಲ ಎಂದಾಗ ನಾನು ನಂಬದೇ ಹೋದೆ. ಒಳ್ಳೆ ಸೊಸೆ ಸಿಗದೇ ಇರುವ ಈ ಕಾಲದಲ್ಲಿ ಭಾಗ್ಯಾ ಅಂತಹ ಸೊಸೆ ಸಿಕ್ಕಿದ್ದು ನನ್ನ ಪುಣ್ಯ. ನಿನ್ನನ್ನು ನಂಬಿದ್ದಕ್ಕೆ ನನಗೆ ತಕ್ಕ ಶಾಸ್ತಿಯಾಗಿದೆ’ ಎಂದು ಕುಸುಮಾ ತನ್ನ ಹಣೆ ಚೆಚ್ಚಿಕೊಳ್ಳುತ್ತಾಳೆ. ಇದನ್ನು ಕಂಡು ತಾಂಡವ್‌ ಕೂಡ ಹಾಗೆ ಮಾಡಬೇಡ ಎಂದು ಬೇಸರ ಹೊರ ಹಾಕುತ್ತಾನೆ.

ಪೂಜಾ ಕೂಡ ಭಾವ ತಾಂಡವ್‌ಗೆ ಕ್ಲಾಸ್‌‌ ತೆಗದುಕೊಳ್ಳುತ್ತಾಳೆ. 16 ವರ್ಷದಿಂದ ನಿಮ್ಮನ್ನು ಮಕ್ಕಳನ್ನು ನೋಡಿಕೊಂಡ ಅಕ್ಕನಿಗೆ ನೀವು ಹೀಗೆ ಮಾಡಿದ್ದು ಸರಿನಾ? ಎಷ್ಟೇ ಅಕ್ಕನನ್ನು ನೀವು ಅವಮಾನಿಸಿದ್ದರು ಅವಳು ಮಾತ್ರ ಯಾವುದಕ್ಕೂ ಬೇಸರ ಮಾಡಿಕೊಂಡಿಲ್ಲ.  ನಾಳೆ ಗಂಡ ಸರಿ ಆಗಬಹುದು ಎಂದು ಜೀವನ ಸಾಗಿಸುತ್ತಾ ಬರುತ್ತಿರುವ ನನ್ನ ಅಕ್ಕನಿಗೆ ನೀವು ಈ ರೀತಿ ದ್ರೋಹ ಮಾಡಿದ್ದು ಸರಿನಾ? ಈ ಮನೆಹಾಳು ಶ್ರೇಷ್ಠಾಗಾಗಿ ನೀವು ಅಕ್ಕ, ಮಕ್ಕಳನ್ನೇ ದೂರ ಮಾಡುತ್ತಿದ್ದೀರಾ ಎಂದು ಪೂಜಾ ಕೇಳುತ್ತಾಳೆ.

ಇನ್ನು ಈ ಮದುವೆ ಬಗ್ಗೆ ಕುಸಮಾ ಮಾತ್ರವಲ್ಲದೇ , ಶ್ರೇಷ್ಠಾ ತಂದೆ ತಾಯಿ ಕೂಡ ಮಗಳನ್ನೇ ಧೂಷಿಸುತ್ತಾರೆ. ಕುಸುಮಾ ಮಗನಿಗೆ ಬುದ್ಧಿ ಮಾತು ಹೇಳಿ ಕೈ ಹಿಡಿದುಕೊಂಡರೆ, ಕೈ ತಪ್ಪಿಸಿ ಕಸುಮಾಗೆ ಆವಾಜ್‌ ಹಾಕುತ್ತಾಳೆ ಶ್ರೇಷ್ಠಾ. ನಿಮ್ಮ ಮಗನಿಗೆ ಹೆಂಡತಿ ಕಂಡರೆ ಇಷ್ಟವಿಲ್ಲ. ಅವನಿಗೆ ಪ್ರೀತಿ ಕೊಟ್ಟವಳು ನಾನು ತಾಂಡವ್‌ ಹೆದರಬೇಡ ತಾಳಿ ಕಟ್ಟು ಎಂದು ಹೇಳುತ್ತಾಳೆ. ಇಷ್ಟೆಲ್ಲ ಆವಾಜ್‌ ಹಾಕುವಾಗಲೇ ಶ್ರೇಷ್ಠಾ ಕೆನ್ನೆಗೆ ಬಾರಿಸುತ್ತಾಳೆ ಕುಸುಮಾ.

ಇನ್ನೊಂದು ಮದುವೆ ಬೇಕು ಎಂದಾರೆ ನಿನ್ನನ್ನು ಇಲ್ಲೇ ಹೂತು ಹಾಕುತ್ತೇನೆ ಎಂದು ತಾಂಡವ್‌ಗೆ ಕುಸುಮಾ ಬೈಯುತ್ತಾಳೆ. ಈದೀಗ ಇಷ್ಟೆಲ್ಲ ಆದ ಮೇಲೆ ಮಂಟಪಕ್ಕೆ ಭಾಗ್ಯ ಬರುತ್ತಾಳ? ಈ ಎಲ್ಲ ಸತ್ಯ ಗೊತ್ತಾಗತ್ತ ಎಂಬುದು ಮುಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.

ಭಾಗ್ಯಲಕ್ಷ್ಮೀ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಧಾರಾವಾಹಿಯಾಗಿದೆ. ಈ ಧಾರಾವಾಹಿಯಲ್ಲಿ ತಾಂಡವ್ ಹೆಂಡತಿಯನ್ನು ಬಿಟ್ಟು ಶ್ರೇಷ್ಠಾ ಮದುವೆ ಆಗೊದು ಆತನಿಗೆ ಗುರಿಯಾಗಿತ್ತು. ತಾಂಡವ್‌ಗೆ ಈಗಾಗಲೇ ಎರಡು ಮಕ್ಕಳಿದ್ದಾರೆ. ಆದರೂ ಶ್ರೇಷ್ಠಾ ಅವನನ್ನೇ ಮದುವೆ ಆಗಬೇಕು ಎಂದು ಹಠಕ್ಕೆ ಬಿದ್ದಿದ್ದ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow