ಮಧ್ಯರಾತ್ರಿ ಮುಖ್ಯದ್ವಾರದ ಬಾಗಿಲು ತೆರೆದ ಬಿಗ್ ಬಾಸ್! ದೊಡ್ಮನೆಯಿಂದ ಹೊರಬಂದ ಸ್ಪರ್ಧಿ ಇವರೇ ನೋಡಿ..!

ಸಾಕಷ್ಟು ಟ್ವಿಸ್ಟ್ಗಳನ್ನು ಕಂಡ ‘ಬಿಗ್ ಬಾಸ್ ಕನ್ನಡ ಸೀಸನ್ 11’ ರಿಯಾಲಿಟಿ ಶೋ ಈಗ ಫಿನಾಲೆಯ ಹಂತಕ್ಕೆ ತಲುಪುತ್ತಿದೆ. ಇನ್ನೂ ಬಿಗ್ ಬಾಸ್ ಕನ್ನಡ ಸೀನಸ್ 11 ರಲ್ಲಿ ಮಿಡ್ವೀಕ್ ಎಲಿಮಿನೇಷನ್ ನಡೆಯಲಿದೆ. ಯಾರೂ ಊಹಿಸಿರದ ಸ್ಪರ್ಧಿಗೆ ಅತಿ ಕಡಿಮೆ ವೋಟ್ ಬಂದಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ. ಬಿಗ್ ಬಾಸ್ ಮನೆಯಲ್ಲಿ ಒಬ್ಬರಿಗೆ ಮುಖ್ಯದ್ವಾರದ ಬಾಗಿಲು ತೆರೆಯಲಾಗಿದೆ. ಗೌತಮಿ, ಮಂಜು, ತ್ರಿವಿಕ್ರಮ್, ಭವ್ಯಾ, ಮೋಕ್ಷಿತಾ ಹಾಗೂ ರಜತ್ ಈ 6 ಮಂದಿಯಲ್ಲಿ ಒಬ್ಬರಿಗೆ ಬಿಗ್ ಬಾಸ್ ಮನೆಯಲ್ಲಿ ಕಟ್ಟ ಕಡೆಯ ರಾತ್ರಿಯಾಗುತ್ತಿದೆ.
ಬಿಗ್ ಬಾಸ್ ಈ ವಾರದ ಟಾಸ್ಕ್ನಲ್ಲಿ ಮಿಡ್ ವೀಕ್ ಎಲಿಮಿನೇಷನ್ ಖಚಿತ ಅನ್ನೋದನ್ನ ಘೋಷಿಸಲಾಗಿತ್ತು. ಮೊದಲೇ ಸುಳಿವು ಕೊಟ್ಟಂತೆ ಬಿಗ್ ಬಾಸ್ ಮನೆಯಲ್ಲಿ ಮಧ್ಯರಾತ್ರಿಯೇ ಸೈರನ್ ಸದ್ದು ಮಾರ್ದನಿಸಿದೆ.
ಸೈರನ್ ಸದ್ದಿಗೆ ಬೆಚ್ಚಿ ಬಿದ್ದು ಎದ್ದಿರುವ ಸ್ಪರ್ಧಿಗಳಿಗೆ ಬಿಗ್ ಬಾಸ್ ಮುಖ್ಯದ್ವಾರ ತೆರೆದು ಬಿಗ್ ಶಾಕ್ ಕೊಟ್ಟಿದ್ದಾರೆ. ಈ ಮುಖ್ಯದ್ವಾರ ಇಂದು ರಾತ್ರಿ ಯಾರಿಗಾಗಿ ತೆರೆದಿದೆ ಎಂದು ತಿಳಿದುಕೊಳ್ಳುವ ಸಮಯ ಶುರುವಾಗಿದ್ದು, ಈ ರಾತ್ರಿ ಈ ಮನೆಯಲ್ಲಿ ನಿಮ್ಮ ಕಡೆಯ ರಾತ್ರಿ ಆಗಿರಬಹುದು ಎಂದು ಬಿಗ್ ಬಾಸ್ ಅನೌನ್ಸ್ ಮಾಡಿದ್ದಾರೆ.
ಮಿಡ್ ವೀಕ್ ಎಲಿಮಿನೇಷನ್ನಲ್ಲಿ 6 ಸ್ಪರ್ಧಿಗಳು ಡೇಂಜರ್ ಝೋನ್ ತಲುಪಿದ್ದು ಒಬ್ಬೊಬ್ಬರು ಎಲಿಮಿನೇಟ್ ಆಗಬೇಕಾದವರ ಹೆಸರು ಹೇಳಿ ಅವರ ಫೋಟೋವನ್ನು ಸ್ವಿಮ್ಮಿಂಗ್ಪೂಲ್ ನೀರಿಗೆ ಎಸೆದಿದ್ದಾರೆ. ಮೋಕ್ಷಿತಾ ಅವರು ಗೌತಮಿ ಹೆಸರು ಹೇಳಿದ್ರೆ, ತ್ರಿವಿಕ್ರಮ್ – ಮಂಜು ಹಾಗೂ ಭವ್ಯಾ ಅವರು ಮಂಜು ಹೆಸರನ್ನ ಹೇಳಿದ್ದಾರೆ.
ಇದೀಗ ಈ ನಡುವೆಯೇ ಬಿಗ್ ಬಾಸ್ ಒಬ್ಬೊಬ್ಬರನ್ನೇ ಸೇವ್ ಮಾಡುತ್ತ ಎಲಿಮಿನೇಟ್ ಆದ ಸ್ಪರ್ಧಿಯ ಹೆಸರನ್ನು ಹೇಳಿಯೇ ಬಿಟ್ಟಿದ್ದಾರೆ. ಬಿಗ್ ಬಾಸ್ ಕನ್ನಡ ಸೀಸನ್ 11 ರ ಮಿಡ್ ವೀಕ್ ಎಲಿಮಿನೇಷನ್ ನಲ್ಲಿ ಗೌತಮಿ ಜಾಧವ್ ಹೊರ ಬಂದಿದ್ದಾರೆ. ಗೌತಮಿ ಜಾಧವ್ ಈ ವಾರದ ಮಧ್ಯೆಯೇ ಬಿಗ್ ಬಾಸ್ ಮನೆಯಿಂದ ಹೊರನಡೆಯಬಹುದೆಂದು ಅನೇಕ ವೀಕ್ಷಕರು ಊಹಿಸಿದ್ದರು. ಮಿಡ್ ವೀಕ್ ಎಲಿಮಿನೇಷನ್ನಲ್ಲಿ ಗೌತಮಿ ಹೊರ ಬಂದಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ. ಇಂದು ರಾತ್ರಿಯ ಎಪಿಸೋಡ್ನಲ್ಲಿ ಮಿಡ್ ವೀಕ್ ಎಲಿಮಿನೇಷನ್ನಲ್ಲಿ ಯಾರು ಹೊರಬಂದಿದ್ದಾರೆ ಎಂಬ ಸ್ಪಷ್ಟ ಮಾಹಿತಿ ಸಿಗಲಿದೆ.
ನಿಮ್ಮ ಪ್ರತಿಕ್ರಿಯೆ ಏನು?






