ಗುರುವಾರ ವಿಷ್ಣು ಪೂಜೆ ಮಾಡುವುದರಿಂದ ಸಿಗುವ ಫಲಗಳೇನು ಗೊತ್ತಾ..?

ಗುರುವಾರ ಭಗವಾನ್ ವಿಷ್ಣುವಿಗೆ ಸಮರ್ಪಿತವಾಗಿದೆ. ಅದೇ ರೀತಿ ಈ ದಿನವನ್ನು ದೇವಗುರು ಬೃಹಸ್ಪತಿ ಎಂದು ಪರಿಗಣಿಸಲಾಗುತ್ತದೆ. ಹಿಂದೂ ಧರ್ಮದಲ್ಲಿ ಈ ದಿನಕ್ಕೆ ಹೆಚ್ಚಿನ ಮಹತ್ವವಿದೆ. ನೀವು ಆರ್ಥಿಕ ಬಿಕ್ಕಟ್ಟಿನೊಂದಿಗೆ ಹೋರಾಡುತ್ತಿದ್ದರೆ ಮತ್ತು ವಿವಿಧ ರೀತಿಯ ಸಮಸ್ಯೆಗಳು ಜೀವನ ಕಷ್ಟಕರವಾಗಿದ್ದರೆ, ಈ ದಿನವು ಸಮಸ್ಯೆಗಳನ್ನು ನಿವಾರಿಸಲು ಬಹಳ ಮಂಗಳಕರವಾಗಿದೆ.
ಇಂದು ಗುರುವಾರ ಈ ದಿನ ವಿಷ್ಣು ಪೂಜೆ ಮಾಡುವುದರಿಂದ ಅನೇಕ ರೀತಿಯ ಫಲಗಳು ಸಿಗುತ್ತವೆ. ಹಾಗೂ ಜಾತಕದಲ್ಲಿ ಗುರುಗ್ರಹದ ಸ್ಥಾನ ಕೆಟ್ಟದಾಗಿದ್ದರೆ, ಅವರು ಗುರುವಾರ ದೇವಾಲಯದಲ್ಲಿ ಕೇಸರಿ ಮತ್ತು ಹಳದಿ ಬಣ್ಣದ ಬೇಳೆಗಳನ್ನು ದಾನ ಮಾಡಬೇಕು. ಇದರಿಂದ ಕುಂಡಲಿಯಲ್ಲಿನ ಗುರುವಿನ ಸ್ಥಾನ ಬಲವಾಗುತ್ತೆ.
ಸಾಮಾನ್ಯವಾಗಿ ಗುರುವಾರ ಗುರು ರಾಘವೇಂದ್ರನನ್ನು ಪೂಜಿಸಬೇಕೆಂದು ಹೇಳುತ್ತಾರೆ. ಆದರೆ ಗುರುವಾರ ಕೇವಲ ರಾಯರನ್ನು ಮಾತ್ರವಲ್ಲ, ಸಾಯಿಬಾಬರನ್ನು ಪೂಜಿಸಿದರೂ ಕೂಡ ವಿಶೇಷ ಫಲವನ್ನು ಪಡೆದುಕೊಳ್ಳಬಹುದು. ಆದರೆ ಗುರುವಾರವು ಭಗವಾನ್ ವಿಷ್ಣು ದೇವರಿಗೆ ಅರ್ಪಿತವಾದ ದಿನವೆಂದು ಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ.
ಗುರುವಾರ ವಿಷ್ಣು ಪೂಜೆ ಮಾಡುವುದು ಹೇಗೆ? ಗುರುವಾರ, ಬೆಳಿಗ್ಗೆ ಸ್ನಾನ ಮಾಡಿ ವಿಷ್ಣುನನ್ನು ಪೂಜಿಸಬೇಕು. ಪೂಜೆಯಲ್ಲಿ ಹಳದಿ ವಸ್ತುಗಳು, ಹಳದಿ ಹೂವುಗಳು, ಹಳದಿ ಬಣ್ಣದ ಬೇಳೆಯನ್ನು, ಒಣ ದ್ರಾಕ್ಷಿ, ಸಿಹಿ ತಿಂಡಿಗಳನ್ನು, ಹಳದಿ ಅಕ್ಕಿ ಮತ್ತು ಅರಿಶಿನವನ್ನು ಅರ್ಪಿಸಬೇಕು. ವಿಷ್ಣುವಿನ ಕಥೆಯನ್ನು ಓದುವ ಮತ್ತು ಪೂಜಿಸುವ ಸಮಯದಲ್ಲಿ, ಶುದ್ಧ ಮನಸ್ಸಿನಿಂದ ತಮ್ಮೆಲ್ಲಾ ಆಸೆಗಳನ್ನು ಈಡೇರಿಸುವಂತೆ ಪೂಜಿಸಬೇಕು.
ಬಾಳೆ ಮರವನ್ನು ಗುರುವಾರ ಪೂಜಿಸುವುದು ಅವಶ್ಯಕ. ನೀರಿಗೆ ಅರಿಶಿನ ಸೇರಿಸಿ ಮತ್ತು ಬಾಳೆ ಮರಕ್ಕೆ ಅರ್ಪಿಸಿ. ನಂತರ ಬಾಳೆ ಮರಕ್ಕೆ ಬಾಳೆಹಣ್ಣು, ಕಡಲೆ ಬೇಳೆ, ಬೆಲ್ಲ ಮತ್ತು ಒಣ ದ್ರಾಕ್ಷಿಯನ್ನು ಅರ್ಪಿಸಿ. ಆರತಿಯನ್ನು ಬೆಳಗಿ ಬಾಳೆ ಗಿಡದ ಕೆಳಗೆ ದೀಪವನ್ನು ಬೆಳಗಿಸಬೇಕು. ಗುರುವಾರ, ಉಪವಾಸವನ್ನು ಮಾಡುವಾಗ ಕೇವಲ ಒಂದು ಬಾರಿ ಮಾತ್ರ ಆಹಾರವನ್ನು ಸೇವಿಸಬೇಕು.
ನಿಮ್ಮ ಪ್ರತಿಕ್ರಿಯೆ ಏನು?






