ಖುಷಿಯಿಂದ ಸ್ಟೇಡಿಯಂ ಬಳಿ ಹೋದೆ.. ಆಮೇಲೆ ಭಯ ಆಯ್ತು: ಚಿನ್ನಸ್ವಾಮಿ ದುರಂತದ ಬಗ್ಗೆ ಚಂದನ್ ಶೆಟ್ಟಿ ಹೇಳಿದ್ದೇನು?

ಜೂನ್ 5, 2025 - 20:33
 0  12
ಖುಷಿಯಿಂದ ಸ್ಟೇಡಿಯಂ ಬಳಿ ಹೋದೆ.. ಆಮೇಲೆ ಭಯ ಆಯ್ತು: ಚಿನ್ನಸ್ವಾಮಿ ದುರಂತದ ಬಗ್ಗೆ ಚಂದನ್ ಶೆಟ್ಟಿ ಹೇಳಿದ್ದೇನು?

ಬೆಂಗಳೂರು:- ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ಸಂಭವಿಸಿದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ರ್ಯಾಪರ್ ಚಂದನ್ ಶೆಟ್ಟಿ ಅವರು ಭಯಾನಕ ಅನುಭವ ಬಿಚ್ಚಿಟ್ಟಿದ್ದಾರೆ. 

ಈ ಸಂಬಂಧ ಮಾತನಾಡಿದ ಅವರು, ಖುಷಿಯಿಂದ ಸ್ಟೇಡಿಯಂನ ಗೇಟ್ ನಂಬರ್ 3 ಬಳಿ ಹೋದೆ. ಆದರೆ, ಗೇಟ್ ಬಳಿಗೂ ಹೋಗಕೆ ಆಗಲಿಲ್ಲ. ಆಮೇಲೆ 10ನೇ ನಂಬರ್ ಗೇಟ್ ಬಳಿ ಬಂದೆ. ಅಲ್ಲಿ ನನಗೆ ಒಮ್ಮೆ ಉಸಿರಾಡೋಕೂ ಕಷ್ಟ ಆಯ್ತು. 11 ಜನರು ನಿಧನ ಹೊಂದಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಯಾರು ಹೊಣೆ ಎಂದು ಹೇಳೋದು ಕಷ್ಟ. 2 ದಿನ ಬಿಟ್ಟು ಈವೇಂಟ್ ಮಾಡಬಹುದಿತ್ತು. ಆಸ್ಪತ್ರೆಯಲ್ಲಿ ಇರುವವರು ಬೇಗೆ ಚೇತರಿಕೆ ಕಾಣಲಿ’ ಎಂದು ಅವರು ಹೇಳಿದ್ದಾರೆ.

ಇನ್ನೂ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಸಂಭವಿಸಿದ ಕಾಲ್ತುಳಿತಕ್ಕೆ 11 ಆರ್‌ಸಿಬಿ ಅಭಿಮಾನಿಗಳು ದುರ್ಮರಣಕ್ಕೀಡಾಗಿದ್ದಾರೆ. 50ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತರ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow