ಟೆಸ್ಟ್ ಕೆರಿಯರ್ ಗೆ ಗುಡ್ ಬಾಯ್ ಹೇಳ್ತಾರಾ ರೋಹಿತ್ ಶರ್ಮಾ? ದಿಢೀರ್ ನಿರ್ಧಾರಕ್ಕೆ ಕಾರಣ?

ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಕೂಡ ಟೆಸ್ಟ್ ಕೆರಿಯರ್ ಅಂತ್ಯಗೊಳಿಸುವ ಸಾಧ್ಯತೆಯಿದೆ.
ಭಾರತ ತಂಡದ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ದಿಢೀರ್ ಆಸ್ಟ್ರೇಲಿಯಾಗೆ ತೆರಳಿದ್ದು, ಇದರ ಬೆನ್ನಲ್ಲೇ ಇಂತಹದೊಂದು ಊಹಾಪೋಹ ಶುರುವಾಗಿದೆ.
ಕಳಪೆ ಫಾರ್ಮ್ನಿಂದ ಒದ್ದಾಡುತ್ತಿರುವ ರೋಹಿತ್ ಶರ್ಮಾ ಈ ಬಾರಿಯ ಬಾರ್ಡರ್-ಗವಾಸ್ಕರ್ ಸರಣಿಯಲ್ಲಿ 4 ಇನಿಂಗ್ಸ್ಗಳಿಂದ ಕಲೆಹಾಕಿರುವುದು ಕೇವಲ 22 ರನ್ಗಳು ಮಾತ್ರ. ಅಲ್ಲದೆ ಹಿಟ್ಮ್ಯಾನ್ ನಾಯಕತ್ವದಲ್ಲೂ ಹೇಳಿಕೊಳ್ಳುವಂತಹ ತಂತ್ರಗಾರಿಕೆ ಕೂಡ ಕಂಡು ಬರುತ್ತಿಲ್ಲ.
ಒಂದೆಡೆ ಕೆಟ್ಟ ಫಾರ್ಮ್ ಹಾಗೂ ಮತ್ತೊಂದೆಡೆ ಕಳಪೆ ನಾಯಕತ್ವದಿಂದ ಟೀಕೆಗೆ ಗುರಿಯಾಗಿರುವ ರೋಹಿತ್ ಶರ್ಮಾ ಅವರೊಂದಿಗೆ ಚರ್ಚಿಸಲೆಂದೇ ಅಜಿತ್ ಅಗರ್ಕರ್ ಮೆಲ್ಬೋರ್ನ್ಗೆ ತೆರಳಿದ್ದಾರೆ. ಹೀಗಾಗಿ ಸಿಡ್ನಿ ಟೆಸ್ಟ್ ಪಂದ್ಯದ ಬಳಿಕ ಹಿಟ್ಮ್ಯಾನ್ ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದರೂ ಅಚ್ಚರಿಪಡಬೇಕಿಲ್ಲ ಎಂದು ವರದಿಯಾಗಿದೆ.
ಈ ಬಾರಿಯ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಬಳಿಕ ಟೀಮ್ ಇಂಡಿಯಾದ ಇಬ್ಬರು ಹಿರಿಯ ಆಟಗಾರರು ನಿವೃತ್ತಿ ನೀಡಲಿದ್ದಾರೆ ಎಂದು ಸುದ್ದಿಯಾಗಿತ್ತು. ಈ ಸುದ್ದಿಯನ್ನು ಪುಷ್ಠೀಕರಿಸುವಂತೆ ಸರಣಿಯ ಮಧ್ಯೆದಲ್ಲೇ ರವಿಚಂದ್ರನ್ ಅಶ್ವಿನ್ ನಿವೃತ್ತಿ ಘೋಷಿಸಿದ್ದಾರೆ. ಇದೀಗ ತಂಡದಲ್ಲಿರುವ ಅತ್ಯಂತ ಹಿರಿಯ ಆಟಗಾರನೆಂದರೆ ಅದು ರೋಹಿತ್ ಶರ್ಮಾ. ಹೀಗಾಗಿ ಮುಂದಿನ ಸರದಿ ರೋಹಿತ್ ಶರ್ಮಾ ಅವರದ್ದು ಎಂದು ಹೇಳಬಹುದಾಗಿದೆ.
ನಿಮ್ಮ ಪ್ರತಿಕ್ರಿಯೆ ಏನು?






