'ಡಿ' ಸಾಮ್ರಾಜ್ಯದ ಕಪಿಮುಷ್ಟಿ ಪತ್ನಿ ಕೈಯಲ್ಲಿ: ದರ್ಶನ್ ಮೇಲೆ ಕಣ್ಣಿಟ್ಟಿದ್ಯಾಕೆ ವಿಜಯಲಕ್ಷ್ಮೀ!?

ಸ್ಯಾಂಡಲ್ವುಡ್ ಬಾಕ್ಸ್ ಆಫೀಸ್ ಸುಲ್ತಾನ ಎಂದೇ ಕರೆಸಿಕೊಳ್ಳುವ ನಟ ದರ್ಶನ್ ಸಾಮ್ರಾಜ್ಯ ಈಗ ತಮ್ಮ ದಿನಕರ್ ಹಾಗು ಪತ್ನಿ ವಿಜಯಲಕ್ಷ್ಮಿ ಕೈಯಲ್ಲಿದೆ. ಸದ್ಯ ಯಾರೇ ದರ್ಶನ್ ಅವರನ್ನ ಭೇಟಿ ಮಾಡಲು ಪತ್ನಿ ವಿಜಯಲಕ್ಷ್ಮಿ ಅಥವಾ ಸಹೋದರ ದಿನಕರ್ ತೂಗುದೀಪ್ ಅವರ ಮೂಲಕವೇ ಹೋಗಬೇಕು. ಇಷ್ಟು ದಿನಗಳ ಕಾಲ ಇದ್ದ ಮ್ಯಾನೇಜರ್ ನಾಗರಾಜು ಅವರಿಗೆ ತೂಗುದೀಪ ಕುಟುಂಬ ಗೇಟ್ಪಾಸ್ ಕೊಟ್ಟಿದೆ.
ರೇಣುಕಾಸ್ವಾಮಿ ಕೇಸ್ಗೂ ಮುಂಚೆ ದರ್ಶನ್ ಸುತ್ತ ಇದ್ದ ಹಲವರಿಗೆ ವಿಜಯಲಕ್ಷ್ಮಿ ಅವರು ಗೇಟ್ ಪಾಸ್ ಕೊಟ್ಟಿದ್ದರು. ಇದೀಗ ದರ್ಶನ್ ಮ್ಯಾನೇಜರ್ ನಾಗರಾಜು ಮಾತ್ರವಲ್ಲ, ಕಾರು ಡ್ರೈವರ್ ಲಕ್ಷ್ಮಣ್ ಅವರಿಗೆ ವಿಜಯಲಕ್ಷ್ಮಿ ಅವರು ಗೇಟ್ಪಾಸ್ ಕೊಟ್ಟಿದ್ದಾರೆ.
ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ನಟ ದರ್ಶನ್ ಜೊತೆ ಈ ಇಬ್ಬರು ಜೈಲು ಸೇರಿದ್ದರು. ಡ್ರೈವರ್ ಲಕ್ಷ್ಮಣ್ ಹಾಗೂ ಮ್ಯಾನೇಜರ್ ನಾಗರಾಜ್ ಅವರಿಂದ ದರ್ಶನ್ ಅವರು ಅಂತರ ಕಾಯ್ದುಕೊಳ್ಳಲು ವಕೀಲರು ಹೇಳಿದ್ದರು. ಹೀಗಾಗಿ ಇಬ್ಬರನ್ನು ದರ್ಶನ್ ಟೀಂನಿಂದ ದೂರ ಇರಿಸಲಾಗಿದ್ದು, ದರ್ಶನ್ ಎಲ್ಲಾ ಜವಾಬ್ದಾರಿಯನ್ನು ವಿಜಯಲಕ್ಷ್ಮಿ ಅವರೇ ನೋಡಿಕೊಳ್ಳುತ್ತಿದ್ದಾರೆ. ವಿಜಯಲಕ್ಷ್ಮಿ ಅವರಿಗೆ ದರ್ಶನ್ ಸಹೋದರ ದಿನಕರ್ ಸಾಥ್ ನೀಡಿದ್ದಾರೆ
ದರ್ಶನ್ ಅವರಿಗೆ ಕಾನೂನಿನಲ್ಲಿ ಯಾವುದೇ ಸಮಸ್ಯೆ ಆಗಬಾರದು ಅನ್ನೋ ಮುನ್ನೆಚ್ಚರಿಕೆಯಿಂದ ಪತಿ ದರ್ಶನ್ ಅವರ ಮೇಲೆ ವಿಜಯಲಕ್ಷ್ಮಿ ಹದ್ದಿನ ಕಣ್ಣಿಟ್ಟಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






