ದೇವರ ಮನೆಯಲ್ಲಿ ಕಲಶ ಕೂರಿಸ್ತೀರಾ!? ಹಾಗಿದ್ರೆ ಎಲೆ ತೆಂಗಿನಕಾಯಿ ಹಾಳಾದರೆ ಹೀಗೆ ಮಾಡಿ!

ನಮ್ಮ ಪೂರ್ವಜರ ಕಾಲದಿಂದಲೂ ಬಂದಿರುವಂತಹ ಬಹಳ ಪ್ರಾಚೀನವಾದ ಭಾರತೀಯ ಧಾರ್ಮಿಕ ಅಭ್ಯಾಸ ಎಂದರೆ ಅದು ಕಲಶ ಪೂಜೆ . ಕಲಶದಲ್ಲಿ ಲಕ್ಷ್ಮೀ ದೇವಿಯು ಇರುತ್ತಾಳೆ ಎನ್ನುವ ನಂಬಿಕೆ ಮೊದಲಿನಿಂದಲೂ ನಮ್ಮಲ್ಲಿ ಇದೆ.
ಹಬ್ಬದ ಆಚರಣೆಗಳ ಸಮಯದಲ್ಲಿ, ಕಲಶವನ್ನು ನೀರು, ನಾಣ್ಯಗಳು, ಅಕ್ಕಿ ಅಥವಾ ಆಭರಣಗಳಿಂದ ತುಂಬಿ ನಂತರ ತಲೆಕೆಳಗಾದಂತೆ ತೆಂಗಿನಕಾಯಿಯನ್ನು ಮೇಲೆ ಇರಿಸಲಾಗುತ್ತದೆ. ಈ ಸಮಯದಲ್ಲಿ, ಇದನ್ನು ಪೂರ್ಣ ಕಲಶ ಅಥವಾ ಪೂರ್ಣ ಕುಂಭ ಎಂದು ಕರೆಯಲಾಗುತ್ತದೆ. ಸಾಮನ್ಯವಾಗಿ ಪೂರ್ಣ ಕಲಶವನ್ನು ದೇವರ ಕೋಣೆಯಲ್ಲಿ ಪ್ರತಿದಿನ ಅಥವಾ ವಿಶೇಷ ಹಬ್ಬದ ಪೂಜೆಗಳಲ್ಲಿ ಇಡಲಾಗುತ್ತದೆ.
ಕೆಲವೊಂದು ಮನೆಗಳಲ್ಲಿ ದೇವರ ಮುಂದೆ ದೀಪವನ್ನಿಟ್ಟು ಪೂಜೆ ಮಾಡುತ್ತಿದ್ದರೆ, ಇನ್ನು ಕೆಲವು ಮನೆಗಳಲ್ಲಿ ಕಲಶವನ್ನಿಟ್ಟು ಪೂಜೆ ಮಾಡುವ ಪದ್ಧತಿಯನ್ನು ಹೊಂದಿರುತ್ತಾರೆ. ದೇವರ ಮುಂದೆ ಕಲಶವನ್ನಿಟ್ಟು ಪೂಜೆ ಮಾಡುವುದು ಮಂಗಳಕರವಾಗಿರುತ್ತದೆ. ಕೆಲವರು ಕಲಶದ ಮೇಲೆ ವೀಳ್ಯದೆಲೆಯನ್ನಿಟ್ಟು ಪೂಜೆ ಮಾಡಿದರೆ, ಇನ್ನು ಒಂದಿಷ್ಟು ಜನ ತೆಂಗಿನಕಾಯಿಯನ್ನು ಇಟ್ಟು ಪೂಜೆ ಮಾಡುತ್ತಾರೆ. ಈ ಕಲಶದ ಮೇಲೆ ಇಟ್ಟಿರುವ ತೆಂಗಿನಕಾಯಿ ಒಡೆಯಬಹುದು, ಹಾಳಾಗಬಹುದು ಅಥವಾ ಮೊಳಕೆ ಬರಬಹುದು ಈ ರೀತಿಯೆಲ್ಲಾ ಆಗುವುದು ಯಾವುದರ ಸಂಕೇತವೆಂಬುದು ನಿಮಗೆ ತಿಳಿದಿದೆಯೆ.?
ಸಾಮಾನ್ಯವಾಗಿ ಜನರು 2 ರೀತಿಯಲ್ಲಿ ಕಲಶ ಸ್ಥಾಪನೆಯನ್ನು ಮಾಡುತ್ತಾರೆ. ಒಂದು ಲಕ್ಷ್ಮಿ ಕಲಶ. ಇದು ಮನೆಯ ದೇವರ ಕೋಣೆಯಲ್ಲಿ ಶುಕ್ರವಾರದ ದಿನದಂದು ಲಕ್ಷ್ಮಿ ದೇವಿಯನ್ನು ಇಡುವಂತಹದ್ದು. ಎರಡನೇಯದು ಮನೆ ದೇವರ ಕಲಶ. ಇದನ್ನು ಮನೆಯ ದೇವರ ಹೆಸರಿನಲ್ಲಿ ಯಾವ ದಿನ ನಿಮ್ಮ ಮನೆ ದೇವರಿಗೆ ಸರ್ಪಿತವಾಗಿರುತ್ತದೆಯೋ ಆ ದಿನ ಸ್ಥಾಪನೆ ಮಾಡುವಂತಹದ್ದು.
2. ಎಷ್ಟು ದಿನಗಳಿಗೊಮ್ಮೆ ಕಲಶದಲ್ಲಿನ ತೆಂಗಿನಕಾಯಿ ಬದಲಾಯಿಸಬೇಕು.?
ಕಲಶವನ್ನು ಸ್ಥಾಪನೆ ಮಾಡಿದ 5 ದಿನಗಳಿಗೊಮ್ಮೆ ಅಥವಾ 15 ದಿನಗಳಿಗೊಮ್ಮೆ ಕಲಶವನ್ನು ಶುದ್ಧಮಾಡಬೇಕು. ಕಲಶದಲ್ಲಿ ಎಲೆ ಅಥವಾ ತೆಂಗಿನಕಾಯಿಯನ್ನು ತೆಗೆದು ಹೊಸದನ್ನು ಇಟ್ಟು ಕಲಶ ಸ್ಥಾಪನೆ ಮಾಡಬೇಕು. ಇದಲ್ಲದೆ ಪ್ರತಿನಿತ್ಯವೂ ಕಲಶವನ್ನು ಅಲುಗಾಡಿಸದೇ ಕೇವಲ ತೆಂಗಿನಕಾಯಿ ಮತ್ತು ಎಲೆಯನ್ನು ಮಾತ್ರ ಬದಲಾಯಿಸಬಹುದು. ನೀವು ಹುಣ್ಣಿಮೆ ದಿನದ ಪೂಜೆಯನ್ನು ವಿಶೇಷ ರೀತಿಯಲ್ಲಿ ಮಾಡುತ್ತಿದ್ದರೆ ಪ್ರತೀ ಹುಣ್ಣಿಮೆಯ ದಿನದಂದು ಕಲಶವನ್ನು ತೆಗೆದು ಸ್ವಚ್ಛಗೊಳಿಸಿ ಹೊಸ ಕಾಯಿ ಇಟ್ಟು ಪೂಜೆಯನ್ನು ಮಾಡಬೇಕು. ಅಮಾವಾಸ್ಯೆ ದಿನ ಪೂಜೆ ಮಾಡುತ್ತಿದ್ದರೆ ಪ್ರತೀ ಅಮಾವಾಸ್ಯೆಗೂ ಬದಲಾಯಿಸಬೇಕು. ಒಂದು ವೇಳೆ 6 ತಿಂಗಳುಗಳ ಕಾಲ ಕಲಶದಲ್ಲಿನ ತೆಂಗಿನಕಾಯಿ ಚೆನ್ನಾಗಿಯೇ ಇದ್ದರೆ ಅದನ್ನು ಮತ್ತೆ ಕಲಶದಲ್ಲೇ ಇಟ್ಟು ಪೂಜೆಯನ್ನು ಮಾಡಬಹುದು.
ಕಲಶಕ್ಕೆ ತೆಂಗಿನಕಾಯಿಯನ್ನು ಆರಿಸಿಕೊಳ್ಳುವಾಗ ನಾವು ತುಂಬಾ ಎಳೇಯ ತೆಂಗಿನಕಾಯಿಯನ್ನು ಅಥವಾ ತುಂಬಾ ಬಲಿತ ತೆಂಗಿನಕಾಯಿಯನ್ನು ಆಯ್ದುಕೊಳ್ಳಬಾರದು. ತುಂಬಾ ಬಲಿತ ತೆಂಗಿನಕಾಯಿಯ ನೀರು ಬಹುಬೇಗನೆ ಇಂಗಿ ಹೋಗಿರುತ್ತದೆ. ಕಲಶಕ್ಕೆ ತೆಂಗಿನಕಾಯಿಯನ್ನು ಇಡುವ ಮುನ್ನ ಅದನ್ನು ಒಂದಿಷ್ಟು ಸಮಯ ನೀರಿನಲ್ಲಿ ಇಟ್ಟು ಅದನ್ನು ಕಲಶದಲ್ಲಿಡಬೇಕು. ಈ ರೀತಿ ನೀರಿನಲ್ಲಿಟ್ಟು ನಂತರ ಕಲಶದಲ್ಲಿಡುವುದರಿಂದ ದೀರ್ಘಕಾಲದವರೆಗೆ ತೆಂಗಿನಕಾಯಿ ಚೆನ್ನಾಗಿರುತ್ತದೆ. ಕಲಶದಲ್ಲಿಡುವ ತೆಂಗಿನಕಾಯಿಯ ಮೇಲೆ ಅರಿಶಿನ, ಕುಂಕವನ್ನಿಟ್ಟು ನಂತರ ಇಡಬೇಕು. ಒಂದು ವೇಳೆ ಪದೇ ಪದೇ ಕಲಶದ ಮೇಲಿಟ್ಟ ತೆಂಗಿನಕಾಯಿ ಒಣಗಿ ಹೋಗುತ್ತಿದ್ದರೆ, ಹಾಳಾಗುತ್ತಿದ್ದರೆ ಇದು ನಿಮ್ಮ ಮನೆಯಲ್ಲಿ ನಡೆಯಲಿರುವ ಅಶುಭ ಸೂಚನೆಯ ಅಥವಾ ಕೆಟ್ಟ ಘಟನೆಗಳ ಸಂಕೇತವಾಗಿರಬಹುದು.
4. ಕಲಶದಲ್ಲಿಟ್ಟ ತೆಂಗಿನಕಾಯಿ ಪದೇ ಪದೇ ಹಾಳಾಗುತ್ತಿದ್ದರೆ, ಒಡೆಯುತ್ತಿದ್ದರೆ ಈ ರೀತಿ ಮಾಡಿ:
ಒಂದು ವೇಳೆ ಮನೆಯಲ್ಲಿ ಕಲಶದಲ್ಲಿಟ್ಟಿರುವ ತೆಂಗಿನಕಾಯಿ ಈ ರೀತಿ ಸೂಚನೆಗಳನ್ನು ನೀಡುತ್ತಿದ್ದರೆ ಮೂರು ಸೋಮವಾರಗಳ ಕಾಲ ಅಥವಾ 3 ಪ್ರದೋಷ ದಿನದಂದು ಶಿವನ ದೇವಸ್ಥಾನಕ್ಕೆ ಭೇಟಿ ನೀಡಿ ಅಲ್ಲಿ ರುದ್ರಾಭಿಷೇಕವನ್ನು ಮಾಡಿಸಬೇಕು. ಇದನ್ನು ಹೊರತುಪಡಿಸಿ, ನವಗ್ರಹ ಪೂಜೆ ಅಥವಾ ನವಗ್ರಹ ಶಾಂತಿ ಮಾಡಿಸುವುದರಿಂದ ಕೂಡ ಈ ದೋಷ ನಿವಾರಣೆಯಾಗುವುದು.
ಕೆಲವೊಮ್ಮೆ ಕಲಶದಲ್ಲಿಟ್ಟಿರುವ ತೆಂಗಿನಕಾಯಿಯಲ್ಲಿ ಹೂವು ಬರುವುದು ಅಥವಾ ಮೊಳಕೆಯೊಡೆಯುವುದನ್ನು ನೀವು ಗಮನಿಸಿರುತ್ತೀರಿ. ಇದನ್ನು ಅತ್ಯಂತ ಶುಭ ಅಥವಾ ಮಂಗಳಕರ ಸೂಚನೆಯೆಂದು ಪರಿಗಣಿಸಲಾಗುತ್ತದೆ. ತೆಂಗಿನಕಾಯಿಯಲ್ಲಿ ಈ ರೀತಿಯಾದರೆ ಅದು ನಿಮ್ಮ ಮನೆಗೆ ಧನ, ಸಂಪತ್ತು ಹಾಗೂ ಸಮೃದ್ಧಿಯನ್ನು ತರುವ ಸೂಚನೆಯಾಗಿರುತ್ತದೆ. ಹೂವು ಬಂದಿರುವ ತೆಂಗಿನಕಾಯಿಯನ್ನು ಸೇವಿಸಬಹುದು ಅಥವಾ ಹೂವನ್ನು ತೆಗೆದು ಆ ಕಾಯಿಯನ್ನು ಸಿಹಿ ಅಡುಗೆಯಲ್ಲಿ ಬಳಸಿಕೊಳ್ಳಬಹುದು.ಇನ್ನು ಮೊಳಕೆ ಬಂದಿರುವ ತೆಂಗಿನಕಾಯಿಯನ್ನು ಹಾಗೇ ನೆಲದಲ್ಲಿ ನೆಡಿ. ಈ ತೆಂಗಿನಕಾಯಿಯನ್ನು ತುಂಬಾ ವಯಸ್ದಾದವರ ಕೈಯಲ್ಲಿ ನೆಡಿಸಬೇಕು. ಒಂದು ವೇಳೆ ಇದು ಸಾಧ್ಯವಾಗದೇ ಇದ್ದರೆ ಮೊಳಕೆ ಬಂದಿರುವ ತೆಂಗಿನಕಾಯಿಯನ್ನು ದೇವಸ್ಥಾನಗಳಿಗೆ ದಾನವಾಗಿ ನೀಡಬಹುದು. ಇದು ಮನೆಯ ಅಭಿವೃದ್ಧಿಯನ್ನು ಸೂಚಿಸುತ್ತದೆ.
ಕಲಶದಲ್ಲಿಟ್ಟಿರುವ ತೆಂಗಿನಕಾಯಿ ಅಥವಾ ಎಲೆಗಳು ಹಾಳಾದರೆ, ತೆಂಗಿನಕಾಯಿಯಲ್ಲಿ ಹೂವುಗಳು ಮತ್ತು ಮೊಳಕೆಗಳು ಬಂದಾಗ ಅದನ್ನು ಏನು ಮಾಡಬೇಕು ಎಂಬುದನ್ನು ನಿಮಗೆ ಈ ಲೇಖನ ತಿಳಿಸಿದೆ. ಇದರಿಂದ ನೀವಿನ್ನು ನಿರಾಳವಾಗಿ ಮನೆಯಲ್ಲಿ ಕಲಶ ಪೂಜೆಯನ್ನು ಮಾಡಬಹುದಾಗಿದೆ.
ನಿಮ್ಮ ಪ್ರತಿಕ್ರಿಯೆ ಏನು?






