ನನ್ನನ್ನ ಡಿಸ್ಮಿಸ್ ಮಾಡೋ ತಾಕತ್ತು, ಧಮ್ ನಾಯಕರಿಗಿಲ್ಲ: ಜಿ.ಟಿ ದೇವೇಗೌಡ

ಮೈಸೂರು: ನನ್ನ ಮೇಲೆ ಆಗಲಿ, ಯತ್ನಾಳ್ ಮೇಲೆ ಆಗಲಿ ಕ್ರಮ ಕೈಗೊಳ್ಳಲು ನಾಯಕರಿಗೆ ಧಮ್ ಬೇಕು ಎಂದು ಮಾಜಿ ಸಚಿವ ಜಿ.ಟಿ ದೇವೇಗೌಡ ಹೇಳಿದ್ದಾರೆ. ನಗರದಲ್ಲಿ ಯತ್ನಾಳ್ ವಿರುದ್ಧ ಕ್ರಮ ಕೈಗೊಳ್ಳದ ವಿಚಾರಕ್ಕೆ ಪ್ರತಿಕ್ರಿಯಿಸಿ, ನನ್ನ ಮೇಲೆ ಆಗಲಿ, ಯತ್ನಾಳ್ ಮೇಲೆ ಆಗಲಿ ಕ್ರಮ ಕೈಗೊಳ್ಳಲು ನಾಯಕರಿಗೆ ಧಮ್ ಬೇಕು.
ನನ್ನನ್ನ ಪಕ್ಷದಿಂದ ಸಸ್ಪೆಂಡ್ ಮಾಡೋಕೆ ಡಿಸ್ಮಿಸ್ ಮಾಡೋಕೆ ತಾಖತ್, ಧಮ್ ಬೇಕು. ಯಾವನಿಗೇ ಆದರೂ ಧಮ್ ಇರಬೇಕು. ಜನ ಕಟ್ಟುವ ಶಕ್ತಿ ಇರಬೇಕು. ಆದ್ರೆ ನಾಯಕರಿಗೆ ನನ್ನನ್ನ ಡಿಸ್ಮಿಸ್ ಮಾಡೋ ತಾಖತ್ತು, ಧಮ್ ನಾಯಕರಿಗಿಲ್ಲ ಎಂದು ಹೇಳಿವ ಮೂಲಕ ಪರೋಕ್ಷವಾಗಿ ಕೇಂದ್ರ ಸಚಿವ ಕುಮಾರಸ್ವಾಮಿ ಅವರಿಗೆ ಕುಟುಕಿದರು.
ನಿಮ್ಮ ಪ್ರತಿಕ್ರಿಯೆ ಏನು?






