ನಿಮಗಿದು ಗೊತ್ತಾ!? ದೇವರ ಕೋಣೆಯಲ್ಲಿ ಈ ಹೂವುಗಳನ್ನಿಟ್ಟರೆ ಲಕ್ಷ್ಮಿ ಬರುತ್ತಾಳಂತೆ!

ಹಿಂದೂ ಪುರಾಣಗಳ ಪ್ರಕಾರ, ದೇವಸ್ಥಾನಗಳಲ್ಲಿ ಧನಾತ್ಮಕ ಶಕ್ತಿ ಅಡಗಿರುತ್ತೆ. ಇದೇ ಕಾರಣಕ್ಕೆ ದೇಗುಲಗಳಿಗೆ ಹೋದ್ರೆ, ನೆಮ್ಮದಿ, ಶಾಂತಿ, ಉಲ್ಲಾಸ ಹಾಗೂ ನವಚೈತನ್ಯ ಸಿಗುತ್ತೆ ಅನ್ನೋ ನಂಬಿಕೆ ಇದೆ. ಇನ್ನೂ ವಾಸ್ತುಶಾಸ್ತ್ರದ ಪ್ರಕಾರ, ಮನೆಗಳನ್ನು ನಿರ್ಮಿಸಬೇಕಾದ್ರೆ ಸೂಕ್ತ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಲಾಗುತ್ತೆ. ಅದ್ರಲ್ಲೂ ಮನೆಗಳಲ್ಲಿ ದೇವರ ಮನೆಯನ್ನು ನಿರ್ಮಿಸೋಕೆ, ಮನೆಯ ಈಶಾನ್ಯ ಮತ್ತು ಬ್ರಹ್ಮಸ್ಥಾನವನ್ನು ಗುರುತಿಸಲಾಗುತ್ತೆ.
ಮನೆಗೆ ಹಾಗೂ ಮನೆಯ ಸದಸ್ಯರಿಗೆ ಒಳ್ಳೆಯದಾಗಲಿ ಎಂದು ದೇವರ ಕೋಣೆಯಲ್ಲಿ ಕೆಲವು ವಸ್ತುಗಳನ್ನು ಕೂಡ ಇಡಲಾಗುತ್ತದೆ. ಆದರೆ, ಎಲ್ಲಾ ವಸ್ತುಗಳನ್ನು ಇಡುವುದರಿಂದ ಒಳ್ಳೆಯದಾಗುವುದಿಲ್ಲ. ಕೆಲವೊಂದು ವಸ್ತುಗಳನ್ನು ಇಡುವುದರಿಂದ ಒಳ್ಳೆಯದಕ್ಕಿಂತ ಕೆಟ್ಟದ್ದಾಗುವುದೇ ಜಾಸ್ತಿ. ಯಾವ ವಸ್ತುಗಳನ್ನು ನಾವು ದೇವರ ಕೋಣೆಯಲ್ಲಿ ಇಡಬೇಕು.? ಯಾವ ವಸ್ತುಗಳನ್ನು ಇಡಬಾರದು ತಿಳಿಯಿರಿ
ಇತ್ತೀಚಿನ ದಿನಗಳಲ್ಲಿ ನಾವು ದೇವರಿಗೆ ದೀಪವನ್ನು ಹಚ್ಚಿಡುವುದಕ್ಕಾಗಿ ಹಿತ್ತಾಳೆ ಅಥವಾ ಬೆಳ್ಳಿಯಂತಹ ಲೋಹದ ದೀಪವನ್ನು ಬಳಸುತ್ತೇವೆ. ಆದರೆ, ಹಿಂದಿನ ಕಾಲದಲ್ಲಿ ಮಣ್ಣಿನ ದೀಪವನ್ನು ದೇವರ ಪೂಜೆಯಲ್ಲಿ ಬಳಸುತ್ತಿದ್ದರು. ಇದರಲ್ಲಿ ಯಾವುದು ಉತ್ತಮವೆಂದು ಹೇಳುವುದಾದರೆ, ಮಣ್ಣಿನ ದೀಪವನ್ನು ಪೂಜೆಯಲ್ಲಿ ಬಳಸುವುದು ಉತ್ತಮ. ಯಾಕೆಂದರೆ, ಮಣ್ಣಿನ ದೀಪದಲ್ಲಿ ಭೂದೇವಿಯ ಒಂದು ಅಂಶ ಅಡಗಿರುತ್ತದೆ. ಈ ದೀಪವನ್ನು ಹಚ್ಚಿಡುವುದರಿಂದ ಮನೆಯಲ್ಲಿನ ನಕಾರಾತ್ಮಕತೆಯು ದೂರಾಗುತ್ತದೆ. ದೇವರು ಈ ದೀಪವನ್ನು ಬೆಳಗುವುದರಿಂದ ಬೇಗನೆ ಸಂತುಷ್ಟನಾಗುತ್ತಾನೆ. ಮಣ್ಣಿನ ದೀಪವನ್ನು ಹೊರತುಪಡಿಸಿ, ಬೆಲ್ಲದ ದೀಪವನ್ನು ಬೆಳಗುವುದು ಕೂಡ ಶುಭವೆಂದು ಹಿರಿಯರು ಹೇಳುತ್ತಾರೆ
ಹಿಂದೂ ದರ್ಮದಲ್ಲಿನ ಶುಭ ಚಿಹ್ನೆಗಳಲ್ಲಿ ಸ್ವಸ್ತಿಕ ಪ್ರಮುಖವಾದುದ್ದು. ಹಾಗಾಗಿ, ಈ ಚಿಹ್ನೆಯನ್ನು ಶುಭ ಸೂಚನೆಯಾಗಿ ವಾಹನದ ಮೇಲೆ, ಶುಭ ಕಾರ್ಯಗಳಲ್ಲಿ ಮನೆಯ ಹೊಸ್ತಿಲಿನಲ್ಲಿ ಹಾಕಲಾಗುತ್ತದೆ. ಸ್ವಸ್ತಿಕ ಚಿಹ್ನೆಯನ್ನು ನಾವು ದೇವರ ಮನೆಯಲ್ಲಿ ಹಾಕುವುದರಿಂದ ಮನೆಯ ವಾತಾವರಣದಲ್ಲಿ ಧನಾತ್ಮಕ ಕಂಪನ ಸೃಷ್ಟಿಯಾಗುವುದರ ಮೂಲಕ ನಕಾರಾತ್ಮಕ ಕಂಪನಗಳು ಮನೆಯಿಂದ ಹೊರಹೋಗುತ್ತದೆ. ಹಾಗಾಗಿ, ದೇವರ ಕೋಣೆಯಲ್ಲಿ ಸ್ವಸ್ತಿಕ ಚಿಹ್ನೆಯನ್ನು ತಪ್ಪದೇ ಬರೆಯಿರಿ
ದೇವರ ಮನೆಯಲ್ಲಿ ಇರಬೇಕಾದ ಇನ್ನೊಂದು ವಸ್ತುವೆಂದರೆ ಅದುವೇ ಕಲಶ. ಕಲಶ ಕೂಡ ಸ್ವಸ್ತಿಕ ಚಿಹ್ನೆಯಂತೆ ಶುಭ ಸೂಚನೆಯಾಗಿದೆ. ಕಲಶವನ್ನು ಲಕ್ಷ್ಮಿ ದೇವಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಯಾವ ಮನೆಯಲ್ಲಿ ಕಲಶವನ್ನು ಇಟ್ಟಿರಲಾಗುತ್ತದೆಯೋ ಆ ಮನೆಯಲ್ಲಿ ಸದಾಕಾಲ ಲಕ್ಷ್ಮಿ ದೇವಿ ನೆಲೆಸುತ್ತಾಳೆ ಎಂದು ಶ್ರೀಕೃಷ್ಣ ಹೇಳಿದ್ದಾನೆ. ಹಾಗಾಗಿ, ನಿಮ್ಮ ಮನೆಯ ದೇವರ ಕೋಣೆಯಲ್ಲಿ ಕಲಶವನ್ನು ಪ್ರತಿಷ್ಠಾಪನೆ ಮಾಡಿ
ಲಕ್ಷ್ಮಿ ದೇವಿಗೆ ಪ್ರಿಯವಾದ ವಸ್ತುಗಳಲ್ಲಿ ಶಂಖ ಕೂಡ ಒಂದು. ಈ ಶಂಖವೊಂದು ಮನೆಯಲ್ಲಿದ್ದರೆ ಅದು ಅತ್ಯಂತ ಶುಭಕರ. ದೇವರ ಮನೆಯಲ್ಲಿ ಶಂಖವನ್ನು ಇಟ್ಟುಕೊಮಡರೆ ಲಕ್ಷ್ಮಿ ದೇವಿ ನಿಮ್ಮ ಮನೆಯಲ್ಲಿ ಬಹುಬೇಗನೆ ಬಂದು ನೆಲೆಸುತ್ತಾಳೆ. ಶಂಖವಲ್ಲದೆ ಕೆಲವರು ಕವಡೆಯನ್ನು ಇಡುವುದು ಕೂಡ ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ
ದೇವರ ಕೋಣೆಯಲ್ಲಿ ಸಾಮಾನ್ಯವಾಗಿ ಗಣೇಶನ ವಿಗ್ರಹ ಅಥವಾ ಫೋಟೋವನ್ನು ಇಟ್ಟುಕೊಂಡಿರುತ್ತಾರೆ. ಗಣೇಶನ ವಿಗ್ರಹವನ್ನು ಮನೆಯಲ್ಲಿ ಇಟ್ಟುಕೊಳ್ಳುವಾಗ ಬೆಸ ಸಂಖ್ಯೆಯಲ್ಲಿ ಇಟ್ಟುಕೊಂಡಿರಬಾರದು. ಅಂದರೆ, 1, 3, 5, 7 ಗಣೇಶನ ವಿಗ್ರಹಗಳನ್ನು ಇಟ್ಟುಕೊಂಡಿರಬಾರದು. ಮನೆಯಲ್ಲಿ ಯಾವಾಗಲು 2, 4, 6 ಹೀಗೆ ಸಮ ಸಂಖ್ಯೆಯಲ್ಲಿ ಗಣೇಶನ ವಿಗ್ರಹ ಅಥವಾ ಫೋಟೋ ಇಟ್ಟುಕೊಂಡಿರಬೇಕು. ಹಾಗೂ ಗಣೇಶನ ಸೊಂಡಿಲು ಒಳಮುಖವಾಗಿರಬೇಕು. ಹೊರಮುಖದ ಸೊಂಡಿಲಿರುವ ಗಣೇಶನ ವಿಗ್ರಹವು ಸಮಸ್ಯೆಗಳನ್ನು ಸೃಷ್ಟಿಸುತ್ತದೆ.
ಅಕ್ಷತೆ ಅಥವಾ ಅಕ್ಕಿ ಕಾಳುಗಳನ್ನು ನಾವು ಕಲಶದ ಕೆಳಗೆ ಅಥವಾ ಅಕ್ಷತೆಯಾಗಿ ದೇವರ ಕೋಣೆಯಲ್ಲಿ ಇಟ್ಟುಕೊಂಡಿರುತ್ತೇವೆ. ಈ ಅಕ್ಷತೆ ಕಾಳುಗಳು ಅಥವಾ ಅಕ್ಕಿಯು ತುಂಡಾಗಿರಬಾರದು. ಅಥವಾ ನುಚ್ಚಕ್ಕಿಯನ್ನು ಬಳಸಬಾರದು. ಇಲ್ಲಿ ಬಳಸುವ ಅಕ್ಕಿ ಕಾಳುಗಳು ಶುದ್ಧವಾಗಿರಬೇಕು. ನೋಡಲು ಚೆನ್ನಾಗಿರಬೇಕು.
ನಾವು ನಮ್ಮ ಮನೆಯ ದೇವರ ಕೋಣೆಯಲ್ಲಿ ಪಿತೃಗಳ ಫೋಟೋವನ್ನು ಇಟ್ಟುಕೊಳ್ಳಬಾರದು. ಪೂಜೆ ಸ್ಥಳವೇನಿದ್ದರೂ ಅದು ದೇವರ ಪೂಜೆಗೆ ಮಾತ್ರ ಸೀಮಿತವಾಗಿರಬೇಕು. ಅಲ್ಲಿ ದೇವರ ಫೋಟೋ ಅಥವಾ ವಿಗ್ರಹಗಳು ಇರಬೇಕು. ಇಲ್ಲಿ ನಾವು ಶನಿ ದೇವನ ಫೋಟೋವನ್ನು ಹಾಗೂ ಭೈರವ ದೇವನ ಫೋಟೋವನ್ನು ಕೂಡ ಇಡಬಾರದು ಹಾಗೂ ಮನೆಯಲ್ಲಿ ಇವರನ್ನು ಪೂಜಿಸಬಾರದು. ಶಾಸ್ತ್ರಗಳ ಪ್ರಕಾರ, ಮನೆಯ ದೇವರ ಕೋಣೆಯಲ್ಲಿ ಶನಿ, ಭೈರವ ದೇವನ ಫೋಟೋ ಇಟ್ಟು ಪೂಜಿಸುವುದು ಕೆಟ್ಟದ್ದಾಗಿರುತ್ತದೆ...
ದೇವರ ಕೋಣೆಯಲ್ಲಿ ನೀವು ಇಟ್ಟುಕೊಳ್ಳಲೇಬೇಕಾದ ಮೊದಲ ವಸ್ತು ಗಂಗಾಜಲ. ಇದನ್ನು ದೇವರ ಕೋಣೆಯಲ್ಲಿ ಇಟ್ಟುಕೊಳ್ಳುವುದರಿಂದ ಮನೆಯ ಸದಸ್ಯರು ಪಾಪಗಳಿಂದ ಪರಿಹಾರವನ್ನು ಪಡೆದುಕೊಳ್ಳುತ್ತಾರೆ. ಹಾಗೂ ನೀವು ಪೂಜೆಗೆ ಬೇಕಾದ ಯಾವುದೇ ವಸ್ತುವನ್ನು ತರಲು ಮರೆತಿದ್ದರೆ ಅಂತಹ ಸಮಯದಲ್ಲಿ ಆ ವಸ್ತುವಿನ ಬದಲಾಗಿ ಹೂವು ಮತ್ತು ಅಕ್ಷತೆಯನ್ನು ಒಟ್ಟಿಗೆ ಹಿಡಿದು ದೇವರಿಗೆ ಅರ್ಪಿಸಬೇಕು.
ನಿಮ್ಮ ಪ್ರತಿಕ್ರಿಯೆ ಏನು?






