ಬಿಜೆಪಿಗೆ ನಾನು ರೆಬಲ್ ಅಲ್ಲ, ಲಾಯಲ್ : ಮಾಜಿ ಸಂಸದ ಪ್ರತಾಪ್

ಬಿಜೆಪಿಗೆ ನಾನು ರೆಬಲ್ ಅಲ್ಲ, ಲಾಯಲ್ : ಮಾಜಿ ಸಂಸದ ಪ್ರತಾಪ್
ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದಿಂದ ಹತ್ತು ವರ್ಷಗಳ ಕಾಲ ಸಂಸದರಾಗಿದ್ದ ಪ್ರತಾಪ್ ಸಿಂಹ ಅವರಿಗೆ 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ನೀಡಲಿಲ್ಲ. ಬದಲಿಗೆ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ನೀಡಿತು. ಇದಾದ ನಂತರ ಪ್ರತಾಪ್ ಸಿಂಹ ಅವರು ಬಿಜೆಪಿಯಲ್ಲಿ ಗಟ್ಟಿ ಹಾಗೂ ಭಿನ್ನ ಧ್ವನಿಯಲ್ಲಿ ಮಾತನಾಡುತ್ತಿದ್ದಾರೆ. ರಾಜ್ಯ ರಾಜಕಾರಣದಲ್ಲಿ ಸಕ್ರಿಯವಾಗುವ ಮುನ್ಸೂಚನೆ ನೀಡಿದ್ದಾರೆ.
182 ಕೋಟಿಯನ್ನು ಬಳ್ಳಾರಿ, ರಾಯಚೂರು ಭಾಗದಲ್ಲಿ ಚುನಾವಣಾ ಅಕ್ರಮ ಎಸಗಲು, ಹೆಂಡ ಖರೀದಿಸಲು ದುರುಪಯೋಗ ಮಾಡಲು ಸಾಕ್ಷ್ಯಾಧಾರ ಸಮೇತ ಸಿಕ್ಕಿ ಬಿದ್ದಿದ್ದಾರೆ. ಅಕ್ರಮವಾಗಿರುವುದು 182 ಅಲ್ಲ, 82 ಕೋಟಿ ಎಂದು ಸಿಎಂ ಸದನದಲ್ಲಿ ಒಪ್ಪಿಕೊಂಡಿದ್ದಾರೆ.ಹಣಕಾಸು ಖಾತೆ ಸಚಿವರು ಅವರೇ ಆಗಿರುವುದರಿಂದ ಸಿಎಂ ನೇರ ಹೊಣೆ ಆಗುತ್ತಾರೆ. ಸಿಎಂ ಸಿಲುಕಿಸಲು 82 ಕೋಟಿಗಿಂತ ಬೇರೆ ವಿಷಯ ಇಲ್ಲ. ಎಸ್ಟಿ ಸಮುದಾಯದವರು ಹೈದರಾಬಾದ್ ಮತ್ತು ಈ ಭಾಗದಲ್ಲಿ ಹೆಚ್ಚಿದ್ದಾರೆ. ಈ ವಿಷಯ ಕೈಗೆತ್ತಿಕೊಳ್ಳಬೇಕೆಂದು ನಾಯಕರು ಹೇಳಿದ್ದರಿಂದ ಸಭೆ ನಡೆದಿದೆ. ಈ ವಿಷಯದ ಬಗ್ಗೆ ಅಧಿವೇಶನದಲ್ಲಿ ಸಣ್ಣ ಚರ್ಚೆಯೂ ಆಗಿಲ್ಲ ಎಂದು ಯತ್ನಾಳ್, ಜಾರಕಿಹೊಳಿ, ಲಿಂಬಾವಳಿ, ಕುಮಾರ ಬಂಗಾರಪ್ಪ ಅವರು ಪಾದಯಾತ್ರೆಗೆ ಮುಂದಾಗಿದ್ದಾರೆ ಎಂದು ಪ್ರತಾಪ್ ಸಿಂಹ ಗುಡುಗಿದ್ದಾರೆ.
ಆ ಹಣದಲ್ಲಿ ಹೆಂಡ ಖರೀದಿಸಿದ್ದಕ್ಕೆ ದಾಖಲೆ ಸಿಕ್ಕಿದೆ. ಎರಡು ಚುನಾವಣೆ ರದ್ದುಪಡಿಸಲು ನಮ್ಮ ಬಳಿ ಎಲ್ಲಾ ಸಾಕ್ಷ್ಯಾಧಾರ ಇದೆ. ಇದಕ್ಕಿಂತ ದೊಡ್ಡ ವಿಚಾರ ಇದೆಯಾ ಹೇಳಿ? ಆದ್ದರಿಂದ ಹಿರಿಯ ನಾಯಕರು ಪಾದಯಾತ್ರೆ ಬಗ್ಗೆ ಕೇಳಿದರು. ಇಲ್ಲಿ ನಡೆದದ್ದು 118 ಕಿ.ಮೀ., ಅಲ್ಲಿ 192 ಕಿ.ಮೀ. ಆಗುತ್ತದೆ. ಅಲ್ಲಿ ಏನು ಮಾಡಬಹುದು ಎಂಬ ಬಗ್ಗೆ ಚರ್ಚೆ ನಡೆಯಿತು. ಪಾದಯಾತ್ರೆ ಮಾಡುವುದಾದರೆ ವರಿಷ್ಠರ ಗಮನಕ್ಕೆ ತಂದೇ ಮಾಡುತ್ತೇವೆ. ಅದಕ್ಕೂ ಮುಂಚೆ ಸಭೆ ಮಾಡಿದರೆ ರೆಬೆಲ್ಗಳು, ಅತೃಪ್ತರು ಎನ್ನುವುದು ಸರಿಯೇ? ಎಂದು ಪ್ರತಾಪ್ ಸಿಂಹ ಹರಿ ಹಾಯ್ದಿದ್ದಾರೆ.
ವೆಬ್ ಡೆಸ್ಕ್
ಫೋಕಸ್ ಕರ್ನಾಟಕ
ನಿಮ್ಮ ಪ್ರತಿಕ್ರಿಯೆ ಏನು?






