ಬ್ರಹ್ಮಗಂಟಿಗೆ ಬಿಗಿಯಾಯ್ತಾ ಮೂರು ಗಂಟು!? ಶೋಭಿತಾ ಸಾವು ಬೆನ್ನಲ್ಲೇ ಗಂಡನ ಮೇಲೆ ಹೆಚ್ಚಿದ ಗುಮಾನಿ!

ಬ್ರಹ್ಮಗಂಟು, ನೀನಾದೆ ನಾ, ಸೇರಿದಂತೆ ಕನ್ನಡ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದ ಕಿರುತೆರೆಯ ಖ್ಯಾತ ನಟಿ ಶೋಭಿತಾ ಶಿವಣ್ಣ ಸಾವಿಗೆ ಶರಣಾಗಿದ್ದಾರೆ.
ಹೈದರಾಬಾದ್ನಲ್ಲಿರುವ ಪತಿಯ ನಿವಾಸದಲ್ಲಿ ಸಾವಿಗೆ ಶರಣಾಗಿದ್ದಾರೆ. ಸಕಲೇಶಪುರ ಮೂಲದವರಾದ ಶೋಭಿತಾ ಶಿವಣ್ಣ ಮದುವೆ ಬಳಿಕ ಹೈದರಾಬಾದ್ಗೆ ಶಿಫ್ಟ್ ಆಗಿದ್ದು, ಇದೀಗ ಅಲ್ಲಿಯೇ ಕೊನೆಯುಸಿರೆಳೆದಿದ್ದಾರೆ
ಮದುವೆಯ ನಂತರ ಹೈದರಾಬಾದ್ನಲ್ಲಿ ಇದ್ದ ಕಾರಣ ಶೋಭಿತಾ ನಟನೆಯಿಂದ ದೂರವಿದ್ದರು. ಈ ಕೊರಗು ಅವರನ್ನು ಸದಾ ಕಾಡುತ್ತಿತ್ತು ಎನ್ನಲಾಗಿದೆ. ಅಲ್ಲದೇ ತಾನು ಮತ್ತೆ ಬಣ್ಣ ಹಚ್ಚಬೇಕು ತೆರೆ ಮೇಲೆ ಬರಬೇಕು ಎಂದು ಶೋಭಿತಾ ತಮ್ಮ ಸ್ನೇಹಿತರ ಬಳಿ ಆಗಾಗ ಹೇಳುತ್ತಿದ್ದರಂತೆ. ಇನ್ನು ಸದ್ಯದಲ್ಲೇ ಶೋಭಿತಾ ಪತಿ ಬೆಂಗಳೂರಿಗೆ ಶಿಫ್ಟ್ ಆಗಲು ಪ್ಲ್ಯಾನ್ ಮಾಡಿದ್ದರಂತೆ ಹೀಗಾಗಿ ಶೋಭಿತಾ ಬೆಂಗಳೂರಿಗೆ ಬಂದ ಮೇಲೆ ಮತ್ತೆ ನಟಿಸಬೇಕು ಎನ್ನುವ ಖುಷಿಯಲ್ಲಿದ್ದರಂತೆ.
ಇಷ್ಟೆಲ್ಲಾ ಪ್ಲ್ಯಾನ್ಗಳನ್ನು ಮಾಡಿಕೊಂಡಿದ್ದ ಶೋಭಿತಾಗೆ ಅದೇನಾಯ್ತೋ ಗೊತ್ತಿಲ್ಲ ಪತಿ ಸುಧೀರ್ ಮನೆಯಲ್ಲಿದ್ದಾಗಲೇ ಶೋಭಿತಾ ಅವರು ಸಾವಿಗೆ ಶರಣಾಗಿದ್ದಾರೆ ಎನ್ನಲಾಗಿದೆ. ಹೈದರಾಬಾದ್ನ ಕೊಂಡಾಪುರ ಶ್ರೀರಾಮ ಕಾಲೋನಿಯಲ್ಲಿ ವಾಸವಾಗಿದ್ದ ಶೋಭಿತಾ, ನವೆಂಬರ್ 30ರಂದು ರೂಮ್ನಲ್ಲಿ ಒಬ್ಬರೇ ಇದ್ದರಂತೆ. ಪತಿ ಸುಧೀರ್ ಅವರು ಕೆಲಸದ ನಿಮಿತ್ತ ಲ್ಯಾಪ್ ಟಾಪ್ನಲ್ಲಿ ಕೆಲಸ ಮಾಡುತ್ತಾ ಹಾಲ್ನಲ್ಲಿ ನಿದ್ರೆಗೆ ಜಾರಿದ್ದರಂತೆ. ಬೆಳಗ್ಗೆ ಎದ್ದು ನೋಡಿದರೆ ಶೋಭಿತಾ ರೂಮ್ನ ಬಾಗಿಲು ತೆರೆದಿಲ್ಲ. ಎಷ್ಟೇ ಕರೆದರೂ ಪ್ರತಿಕ್ರಿಯಿಸಿಲ್ಲ ಎನ್ನಲಾಗಿದೆ.
ಹೀಗಾಗಿ ಸುಧೀರ್, ಕೂಡಲೇ ಶೋಭಿತಾ ಸಹೋದರ ವಿಜಯ್ಗೆ ಈ ವಿಚಾರ ಮುಟ್ಟಿಸಿದ್ದು ಅವರು ಫ್ಲಾಟ್ಗೆ ಬಂದು, ಬಾಗಿಲು ಒಡೆದ ವೇಳೆ ಶೋಭಿತಾ ಮೃತದೇಹ ಕಾಣಿಸಿಕೊಂಡಿದೆ ಎನ್ನಲಾಗಿದೆ. ಇನ್ನು ಶೋಭಿತಾ ಹಾಗೂ ಪತಿ ಸುಧೀರ್ ನಡುವೆ ಯಾವುದೇ ವೈಮನಸ್ಸು ಇಲ್ಲ ಎಂದು ಆಪ್ತರು ಹೇಳುತ್ತಿದ್ದಾರೆ. ಆದರೆ ಶೋಭಿತಾ ಯಾಕೆ ಏಕಾಏಕಿ ಈ ನಿರ್ಧಾರ ತೆಗೆದುಕೊಂಡರು ಎನ್ನುವುದು ಸದ್ಯ ಯಕ್ಷ ಪ್ರಶ್ನೆಯಾಗಿದೆ. ಆದರೂ ಕೆಲವರು ಅವರ ಪತಿ ವಿರುದ್ಧ ಕೆಲವು ಅನುಮಾನಗಳನ್ನು ಹೊರಹಾಕುತ್ತಿದ್ದಾರೆ.
ಶೋಭಿತಾ ಅವರ ಸಾವು ಅನೇಕರಿಗೆ ಶಾಕಿಂಗ್ ಎನಿಸಿದೆ. ಮದುವೆ ಆಗಿ ಇನ್ನೂ ಎರಡು ವರ್ಷ ತುಂಬಿತ್ತಷ್ಟೇ. ಆಗಲೇ ಜೀವನ ಕೊನೆ ಮಾಡಿಕೊಳ್ಳುವ ನಿರ್ಧಾರಕ್ಕೆ ಅವರು ಬಂದಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಹೈದರಾಬಾದ್ನ ಗಚ್ಚಿಬೌಲಿ ಪೊಲೀಸರು ತನಿಖೆ ನಡೆಸಿದ್ದಾರೆ.
ಬ್ರಹ್ಮಗಂಟು ಧಾರವಾಹಿ ಮೂಲಕ ಜನಮನ್ನಣೆಗಳಿಸಿದ್ದ ಖ್ಯಾತ ನಟಿ ಶೋಭಿತಾ ಶಿವಣ್ಣ ಅವರು ಆತ್ಮಹತ್ಯೆ ಮಾಡಿಕೊಂಡಿರೋದು ಎಲ್ಲರಿಗೂ ಗೊತ್ತಿರುವ ವಿಚಾರ.
ಕಳೆದ 2 ವರ್ಷಗಳ ಹಿಂದೆ ಮದುವೆ ಆಗಿ ಹೈದರಾಬಾದ್ ನಲ್ಲಿ ಸೆಟಲ್ ಆಗಿದ್ದ ನಟಿ ಶೋಭಿತಾ ಆತ್ಮಹತ್ಯೆ ಮಾಡಿಕೊಳ್ಳುವವರಲ್ಲ, ಸಾವಿನ ಕಾರಣ ಬೇರೆ ಇರಬಹುದು ಎಂದು ನಟಿಯ ಆಪ್ತ ಬಳಗ ಅನುಮಾನ ವ್ಯಕ್ತಪಡಿಸಿತ್ತು.
ಇದೀಗ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ವೈದ್ಯರು ಸಾವಿನ ಅಸಲಿ ವಿಷಯ ಬಿಚ್ಚಿಟ್ಟಿದ್ದಾರೆ. ಆತ್ಮಹತ್ಯೆಯಿಂದಲೇ ಶೋಭಿತಾ ನಿಧರಾಗಿದ್ದಾರೆ ಎಂದು ವೈದ್ಯರು ಖಚಿತಪಡಿಸಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






