ಮಂಗಳವಾರ ಯಾವ ದೇವರು ಪೂಜಿಸಿದರೆ ಒಳಿತು? ಅಪ್ಪಿತಪ್ಪಿಯೂ ಪೂಜೆಯಲ್ಲಿ ಈ ತಪ್ಪು ಆಗಬಾರದು!

ಫೆಬ್ರವರಿ 4, 2025 - 07:00
 0  11
ಮಂಗಳವಾರ ಯಾವ ದೇವರು ಪೂಜಿಸಿದರೆ ಒಳಿತು? ಅಪ್ಪಿತಪ್ಪಿಯೂ ಪೂಜೆಯಲ್ಲಿ ಈ ತಪ್ಪು ಆಗಬಾರದು!

ಸನಾತನ ಹಿಂದೂ ಧರ್ಮದಲ್ಲಿ ಪ್ರತಿ ದಿನವೂ ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿದೆ ಅಂದರೆ ತಪ್ಪಾಗಲ್ಲ. ಹಿಂದೂ ಧರ್ಮದಲ್ಲಿ ಮಂಗಳವಾರವನ್ನು ಮಂಗಳಕರ ದಿನವೆಂದು ಪರಿಗಣಿಸಲಾಗಿದೆ. ಆ ದಿನ ಹನುಮಂತನನ್ನು ಪೂಜಿಸುವುದರಿಂದ ಶುಭಫಲಗಳು ಲಭಿಸುತ್ತದೆ ಎಂದು ನಂಬಲಾಗಿದೆ. ನಿಮ್ಮ ಜೀವನದಲ್ಲಿ ಪದೇ ಪದೇ ಸಮಸ್ಯೆಗಳು ಎದುರಾಗುತ್ತಿದ್ದರೆ, ಉದ್ಯೋಗ, ವೈಯಕ್ತಿಕ, ಹಣ ಸಂಪಾದನೆಯಲ್ಲಿ ಸಮಸ್ಯೆಗಳು ಎದುರಾಗುತ್ತಿದ್ದರೆ ಮಂಗಳವಾರದಂದು ಆಂಜನೇಯ ಸ್ವಾಮಿಯ ಆರಾಧನೆಯಿಂದ ಅವುಗಳಿಂದ ಮುಕ್ತಿ ಪಡೆಯಬಹುದು ಎನ್ನುತ್ತಾರೆ ಜ್ಯೋತಿಷ್ಯತಜ್ಞರು.

ಮಂಗಳವಾರದಂದು ಅಂದರೆ ಇಂದು ಹನುಮಂತನನ್ನು ಪೂಜಿಸುವುದರಿಂದ ಭಕ್ತರ ಕಷ್ಟಗಳೆಲ್ಲವೂ ದೂರಾಗುತ್ತದೆ, ಆರೋಗ್ಯದ ಸಮಸ್ಯೆಗಳಿಂದ ಮುಕ್ತಿ ಹೊಂದುವಿರಿ, ನಕಾರಾತ್ಮಕ ಶಕ್ತಿಯಿಂದ ದೂರಿರುವಿರಿ ಮತ್ತು ಆಸೆಗಳೆಲ್ಲವೂ ಈಡೇರುತ್ತದೆ ಎನ್ನುವ ನಂಬಿಕೆಯಿದೆ. ಆದರೆ ಮಂಗಳವಾರದಂದು ಹನುಮಂತನನ್ನು ಪೂಜಿಸುವಾಗ ಕೆಲವೊಂದು ನಿಯಮಗಳನ್ನು ಅನುಸರಿಸಬೇಕು. ಈ ನಿಯಮಗಳನ್ನು ಪಾಲಿಸಿದರೆ ಮಾತ್ರ ಹನುಮನ ಕೃಪೆ ನಿಮಗಿರುತ್ತದೆ. ಆ ನಿಯಮಗಳಾವುವು..?

ರಾಮನ ಶ್ರೇಷ್ಠ ಭಕ್ತನಾದ ಹನುಮನು ಯಾವಾಗಲೂ ಬ್ರಹ್ಮಚರ್ಯವನ್ನು ಅನುಸರಿಸಿದವನು. ಆದ್ದರಿಂದ ಯಾರು ಇಂದು ಹನುಮಂತನನ್ನು ಪೂಜಿಸುತ್ತಾರೋ ಅವರು ಬ್ರಹ್ಮರ್ಯದಿಂದಿರಬೇಕು. ಈ ದಿನದಂದು ವಿವಾಹಿತರೂ ಕೂಡ ತನ್ನ ಪತ್ನಿಯಿಂದ ಅಥವಾ ಪತಿಯಿಂದ ದೂರವಿದ್ದು ಬ್ರಹ್ಮಚರ್ಯವನ್ನು ಪಾಲಿಸಬೇಕು.

ಹನುಮಂತನ ಪೂಜೆಯಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ಹನುಮಂತನನ್ನು ಪೂಜಿಸುವವರು ಪೂಜೆಗೂ ಮುನ್ನ ಸ್ನಾನ ಮಾಡಿ, ಸ್ವಚ್ಛವಾದ ಬಟ್ಟೆಯನ್ನು ಧರಿಸಬೇಕು. ಹನುಮನ ವಿಗ್ರಹವನ್ನೋ ಅಥವಾ ಫೋಟೋವನ್ನೋ ಇಟ್ಟು ಪೂಜಿಸುವ ಸ್ಥಳದಲ್ಲಿ ಶುದ್ಧತೆ ಹಾಗೂ ಸ್ವಚ್ಛತೆಯನ್ನು ಕಾಯ್ದುಕೊಳ್ಳಿ

ಇಂದು ನೀವು ಹನುಮಂತನನ್ನು ಪೂಜಿಸುವುದಾದರೆ ಮೊದಲು ಮಾಂಸಾಹಾರ ಸೇವನೆಯಿಂದ ಮದ್ಯಪಾನ ಸೇವನೆಯಿಂದ ದೂರವಿರಬೇಕು. ಹನುಮಂತನನ್ನು ಪೂಜಿಸುವವರು ಸಸ್ಯಹಾರವನ್ನು ಮಾತ್ರ ಸೇವಿಸಬೇಕು ಮತ್ತು ಸದ್ಗುಣಗಳನ್ನು ರೂಢಿಸಿಕೊಳ್ಳಬೇಕೆಂದು ಧರ್ಮಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ.

ಹನುಮಂತನು ಬಾಲ್ಯದಿಂದಲೇ ಬ್ರಹ್ಮಚರ್ಯವನ್ನು ಅನುಸರಿಸಿಕೊಂಡು ಬಂದವನು ಹಾಗೂ ಆತನನ್ನು ಅವಿವಾಹಿತನೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಮಹಿಳೆಯರು ಎಮದಿಗೂ ಹನುಮಂತನ ಪೂಜೆಯಲ್ಲಿ ತಮ್ಮಿಂದ ಬಟ್ಟೆಯನ್ನು ನೀಡಬಾರದು ಅಥವಾ ವಸ್ತ್ರವನ್ನು ನೀಡಬಾರದು. ಒಂದುವೇಳೆ ನೀವು ಅಂತಹ ಹರಕೆಯನ್ನಾಗಲಿ ಅಥವಾ ನಿಯಮಗಳನ್ನಾಗಲಿ ಅನುಸರಿಸಿಕೊಂಡು ಬಂದಿದ್ದರೆ ನೀವು ನೀಡಬೇಕೆಂದುಕೊಂಡ ವಸ್ತ್ರವನ್ನು ನಿಮ್ಮ ಪತಿ ಅಥವಾ ಪುತ್ರನ ಕೈಯಿಂದ ಅರ್ಪಿಸಬಹುದು

ಮಂಗಳವಾರದಂದು ಮತ್ತು ಶನಿವಾರದಂದು ನೀವು ಹನುಮಂತನನ್ನು ಪೂಜಿಸುವಾಗ ಕಪ್ಪು ಮತ್ತು ಬಿಳಿ ಬಣ್ಣದ ಬಟ್ಟೆಯನ್ನು ಧರಿಸಿ ಪೂಜಿಸಬಾರದು. ಹನುಮಂತನನ್ನು ಪೂಜಿಸುವಾಗ ಯಾವಾಗಲೂ ನೀವು ಕೆಂಪು, ಕೇಸರಿ ಅಥವಾ ಹಳದಿ ಬಣ್ಣದ ಬಟ್ಟೆಯನ್ನು ಧರಿಸಿ ಹನುಮಂತನನ್ನು ಪೂಜಿಸಬೇಕು. ಹನುಮಂತನಿಗೆ ಕೆಂಪು ಮತ್ತು ಕೇಸರಿ ಬಣ್ಣವೆಂದರೆ ಅತ್ಯಂತ ಪ್ರಿಯವಾದ ಬಣ್ಣವಾಗಿದೆ. ಆದ್ದರಿಂದ ಆತನ ಪೂಜೆಯಲ್ಲಿ ಈ ಬಣ್ಣದ ಬಟ್ಟೆಯನ್ನು ಧರಿಸಿ. ಇನ್ನು ನೀವು ಆಂಜನೇಯನಿಗಾಗಿ ಮಂಗಳವಾರ ವ್ರತವನ್ನು ಕೈಗೊಂಡಿದ್ದರೆ ಇಂದು ನೀವು ಉಪ್ಪು ಬೆರೆಸಿದ ಆಹಾರವನ್ನು ಸೇವಿಸಬಾರದು.

ಒಂದು ವೇಳೆ ಇಂದು ನಿಮ್ಮ ಮನಸ್ಸು ಸರಿಯಿಲ್ಲದಿದ್ದರೆ, ಯಾವುದೋ ಕಾರಣದಿಂದ ಮನಸ್ಸು ಅಶಾಂತಿಯಲ್ಲಿದ್ದರೆ ನೀವು ಹನುಮಂತನನ್ನು ಪೂಜಿಸಬಾರದು. ಶಾಂತ ಹಾಗೂ ಗೊಂದಲವಿಲ್ಲದ ಮನಸ್ಸಿನಿಂದ ಮಾತ್ರ ಹನುಮಂತನನ್ನು ಆರಾಧಿಸಬೇಕು. ಇಲ್ಲವಾದರೆ ನಿಮ್ಮ ಮನಸ್ಸನ್ನು ಪೂಜೆಯ ಮೇಲೆ ಕೇಂದ್ರೀಕರಿಸಲು ಸಾಧ್ಯವಿಲ್ಲ. ಅಷ್ಟು ಮಾತ್ರವಿಲ್ಲ, ಪೂಜೆಯ ಫಲವೂ ಕೂಡ ದೊರೆಯುವುದಿಲ್ಲ. 

ಹನುಮಂತನ ಪೂಜೆಯಲ್ಲಿ ಚರಣಾಮೃತವನ್ನು ಬಳಸಬಾರದು. ಆದರೆ ಕಡ್ಡಾಯವಾಗಿ ತುಳಸಿಯನ್ನು ಬಳಸಬೇಕು. ರಾಮಾಯಣದ ಸಮಯದಲ್ಲಿ ಸೀತೆಯು ಹನುಮಂತನಿಗೆ ಊಟವನ್ನು ನೀಡುತ್ತಾಳೆ. ಸೀತೆ ಎಷ್ಟೇ ಊಟವನ್ನು ನೀಡಿದರೂ ಕೂಡ ಹನುಂತನಿಗೆ ಹೊಟ್ಟೆ ತುಂಬುವುದಿಲ್ಲ. ಆಗ ಸೀತೆ ಹನುಮಂತನಿಗೆ ತುಳಸಿ ಎಲೆಯನ್ನು ಸೇವಿಸಲು ನೀಡುತ್ತಾಳೆ. ಅದನ್ನು ತಿಂದ ನಂತರ ಹೊಟ್ಟೆ ತುಂಬಿತು. ಆದ್ದರಿಂದ ಹನುಮಂತನ ಪೂಜೆಯಲ್ಲಿ ಕಡ್ಡಾಯವಾಗಿ ತುಳಸಿ ಎಲೆಗಳನ್ನು ಬಳಸಬೇಕು. 

ಹನುಮಂತನನ್ನು ಪೂಜಿಸುವಾಗ ಆತನ ಮುರಿದ ವಿಗ್ರಹವನ್ನು ಪೂಜಿಸಬಾರದು. ಒಂದು ವೇಳೆ ನಿಮ್ಮ ಮನೆಯಲ್ಲಿ ಮುರಿದ ಅಥವಾ ತುಂಡಾದ ಹನುಮನ ವಿಗ್ರಹವಿದ್ದರೆ ತಕ್ಷಣವೇ ಅದನ್ನು ಬದಲಾಯಿಸಿ. ಮುರಿದ ಹನುಮನ ವಿಗ್ರಹವನ್ನು ಪೂಜಿಸುವುದು ಶ್ರೇಯಸ್ಕರವಲ್ಲ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow