ಮಧುಮೇಹಿಗಳಿಗೆ ಎಚ್ಚರಿಕೆ! ಸಕ್ಕರೆಯ ಬದಲಿಗೆ ಜೇನುತುಪ್ಪ ಸೇವನೆ ಸುರಕ್ಷಿತವೇ?
ಜೇನುತುಪ್ಪ (Honey) ನೈಸರ್ಗಿಕವಾಗಿ ದೊರಕುವ ಸಿಹಿಯಾದರೂ, ಅದು ಹಲವು ಪೋಷಕಾಂಶಗಳಿಂದ ಕೂಡಿದ್ದು ಆಯುರ್ವೇದದಲ್ಲಿ ಔಷಧೀಯ ಗುಣಗಳನ್ನು ಹೊಂದಿರುವುದಾಗಿ ಪರಿಗಣಿಸಲಾಗಿದೆ. ಆದರೆ, ಮಧುಮೇಹ (ಡಯಾಬಿಟಿಸ್) ಇರುವವರು ಜೇನುತುಪ್ಪ ಸೇವಿಸಬಹುದೇ ಎಂಬ ಪ್ರಶ್ನೆಗೆ ವೈದ್ಯರು ‘ಎಚ್ಚರಿಕೆಯಿಂದ ಇರಬೇಕು’ ಎಂಬ ಉತ್ತರ ನೀಡುತ್ತಿದ್ದಾರೆ.
ಜೇನುತುಪ್ಪದ ಪೋಷಕಾಂಶಗಳು ಮತ್ತು ಸಿಹಿತನ
ಜೇನುತುಪ್ಪದಲ್ಲಿ ವಿಟಮಿನ್ ಸಿ, ಪೊಟ್ಯಾಸಿಯಮ್, ಕ್ಯಾಲ್ಸಿಯಂ ಮತ್ತು ಪೋಷಕಾಂಶಗಳಿರುವುದರಿಂದ ಇದು ಆರೋಗ್ಯದ ದೃಷ್ಟಿಯಿಂದ ಉಪಯುಕ್ತವೆನಿಸುತ್ತದೆ. ಉರಿಯೂತ ನಿವಾರಕ ಗುಣಗಳೂ ಇದರಲ್ಲಿ ಇವೆ. ಆದರೂ ಇದರಲ್ಲಿ ಹೆಚ್ಚು ಕಾರ್ಬೋಹೈಡ್ರೇಟ್ಗಳು ಮತ್ತು ಕ್ಯಾಲೋರಿಗಳು ಇರುವುದರಿಂದ ಇದು ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ವೇಗವಾಗಿ ಹೆಚ್ಚಿಸುವ ಸಾಧ್ಯತೆ ಇರುತ್ತದೆ.
ಮಧುಮೇಹಿಗಳಿಗೂ ಜೇನುತುಪ್ಪ ಒಳ್ಳೆಯದೇ?
ವೈದ್ಯರ ಅಭಿಪ್ರಾಯ ಪ್ರಕಾರ, ಮಧುಮೇಹಿಗಳಿಗೆ ಜೇನುತುಪ್ಪವನ್ನು ಸಕ್ಕರೆಯ ಬದಲಿಗೆ ಬಳಸುವುದು ಸೂಕ್ತವಲ್ಲ. ಒಂದು ಚಮಚ ಜೇನುತುಪ್ಪದಲ್ಲಿ 17 ಗ್ರಾಂ ಕಾರ್ಬೋಹೈಡ್ರೇಟ್ ಮತ್ತು 64 ಕ್ಯಾಲೊರಿ ಇರುತ್ತದೆ. ಇದನ್ನು ಸೇವಿಸಿದರೆ ರಕ್ತದಲ್ಲಿ ಗ್ಲೂಕೋಸ್ ಪ್ರಮಾಣ ತಕ್ಷಣವೇ ಹೆಚ್ಚಾಗಬಹುದು. ಹೀಗಾಗಿ ಮಧುಮೇಹ ಹೊಂದಿರುವವರು ಇದರ ಸೇವನೆಯನ್ನು ಶಿಫಾರಸುಮಾಡಿದ ಪ್ರಮಾಣಕ್ಕಿಂತ ಮೀರಿಸಬಾರದು.
ಸಣ್ಣ ಪ್ರಮಾಣದಲ್ಲಿ ಮಾತ್ರ ಸೇವನೆ
ಆರೋಗ್ಯವಂತ ವ್ಯಕ್ತಿಗಳಿಗೆ ಜೇನುತುಪ್ಪ ಉತ್ತಮವಾದ ಆಯ್ಕೆ ಆಗಬಹುದು. ಆದರೆ ಮಧುಮೇಹ ರೋಗಿಗಳು ಜೇನುತುಪ್ಪ ಸೇವನೆ ಮಾಡುವಾಗ ತಮ್ಮ ರಕ್ತದ ಸಕ್ಕರೆ ಮಟ್ಟವನ್ನು ನಿಯಮಿತವಾಗಿ ಪರಿಶೀಲಿಸಬೇಕು. ತಜ್ಞರು ಎಚ್ಚರಿಕೆಯಿಂದ ಸೇವನೆ ಮಾಡುವುದನ್ನು ಮಾತ್ರ ಶಿಫಾರಸು ಮಾಡುತ್ತಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?