ಮಾಂತ್ರಿಕನ ಮಾತು ಕೇಳಿ ನವಜಾತ ಶಿಶುವನ್ನೇ ಬಲಿಕೊಟ್ಟ ತಾಯಿ! ಅಷ್ಟಕ್ಕೂ ನಡೆದಿದ್ದೇನು!?

ಅಕ್ಟೋಬರ್ 10, 2024 - 22:00
 0  13
ಮಾಂತ್ರಿಕನ ಮಾತು ಕೇಳಿ ನವಜಾತ ಶಿಶುವನ್ನೇ  ಬಲಿಕೊಟ್ಟ ತಾಯಿ! ಅಷ್ಟಕ್ಕೂ ನಡೆದಿದ್ದೇನು!?


ಉತ್ತರ ಪ್ರದೇಶ:- ಇಲ್ಲಿನ ಮುಜಾಫರ್‌ನಗರ ಜಿಲ್ಲೆಯಲ್ಲಿ ಮಹಿಳೆಯೊಬ್ಬಳು ತನ್ನ ಕಾಯಿಲೆಯನ್ನು ಗುಣಪಡಿಸಿಕೊಳ್ಳಲು ಗಂಡನ ಜತೆ ಸೇರಿ ತನ್ನ ನವಜಾತ ಶಿಶುವನ್ನು ಬಲಿಕೊಟ್ಟಿರುವ ಘಟನೆ ಜರುಗಿದೆ. 

ಮಾತ್ರಿಕನ ಮಾತು ಕೇಳಿ ದಂಪತಿ ದುಡುಕಿ ನಿರ್ಧಾರ ತೆಗೆದುಕೊಂಡಿದ್ದಾರೆ. ಭೋಪಾ ಪ್ರದೇಶದ ಬೆಲ್ಡಾ ಗ್ರಾಮದಲ್ಲಿ ಬುಧವಾರ ರಾತ್ರಿ ಈ ಘಟನೆ ನಡೆದಿದ್ದು, ಮಗು ಕಾಣೆಯಾಗಿರುವುದನ್ನು ಕಂಡು ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಆದಿತ್ಯ ಬನ್ಸಾಲ್ ಪಿಟಿಐಗೆ ತಿಳಿಸಿದ್ದಾರೆ.

ವಿಚಾರಣೆ ವೇಳೆ ಮಮತಾ ಮತ್ತು ಆಕೆಯ ಪತಿ ಗೋಪಾಲ್ ಕಶ್ಯಪ್ ಅವರು ತಮ್ಮ ಮಗಳನ್ನು ಕೊಂದು ಆಕೆಯ ಶವವನ್ನು ಕಾಡಿನಲ್ಲಿ ಎಲ್ಲೋ ಬಚ್ಚಿಟ್ಟಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಬನ್ಸಾಲ್ ಹೇಳಿದ್ದಾರೆ

ಮೃತದೇಹವನ್ನು ಹೊರತೆಗೆಯಲು ಮತ್ತು ಮಂತ್ರವಾದಿ ಹರೇಂದ್ರನನ್ನು ಹಿಡಿಯಲು ಪ್ರಯತ್ನಗಳು ನಡೆಯುತ್ತಿವೆ ಎಂದು ಅವರು ಹೇಳಿದರು. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.

ವೆಬ್ ಡೆಸ್ಕ್
ಫೋಕಸ್ ಕರ್ನಾಟಕ

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow