ಮಿಡ್ ವೀಕ್ ಎಲಿಮಿನೇಷನ್: ವಿನ್ನರ್ ಅನ್ಕೊಂಡಿದ್ದ ಸ್ಪರ್ಧಿಯೇ ರಾತ್ರೋ ರಾತ್ರಿ ಔಟ್! ಮುಳುವಾಯ್ತಾ ಫ್ರೆಂಡ್ ಶಿಪ್!?

ಬಿಗ್ ಬಾಸ್ ಮನೆಯಲ್ಲಿ ಸಂಕ್ರಾಂತಿ ಆಚರಿಸಿ ಸಂಭ್ರಮಿಸಿದ್ದಾರೆ. ಬಿಗ್ ಬಾಸ್ ಮನೆಗೆ ತಾರಾ ಆಗಮಿಸಿ ಎಲ್ಲ ಸ್ಪರ್ಧಿಗಳನ್ನು ಹುರಿದುಂಬಿಸಿದ್ದಾರೆ. ಇಷ್ಟು ದಿನ ಯಾರೆಲ್ಲ, ಏನೆಲ್ಲ ಮಾತಾಡಿಕೊಂಡು ವೈಮನಸ್ಸು ಮಾಡಿಕೊಂಡಿದ್ದರೋ ಅವರೆಲ್ಲರಿಗೂ ಅದೆಲ್ಲವನ್ನು ಸರಿ ಮಾಡಿಕೊಳ್ಳಲು ಅವಕಾಶ ನೀಡಲಾಗಿತ್ತು. ತಾರಾ ಮನೆಯೊಳಗಡೆ ಬರುತ್ತಿದ್ದಂತೆ ಎಲ್ಲರೂ ಖುಷಿಯಿಂದ ಅವರನ್ನು ಬರ ಮಾಡಿಕೊಂಡರು. ಬಿಗ್ ಬಾಸ್ ಮನೆ ಮಂದಿ ಎಲ್ಲರೂ ದೇವರಿಗೆ ಪೂಜೆ ಮಾಡಿ ಆರತಿ ಬೆಳಗಿದರು.
ಇನ್ನೂ ಬಿಗ್ ಬಾಸ್ ಕನ್ನಡ ಸೀನಸ್ 11 ರಲ್ಲಿ ಮಿಡ್ವೀಕ್ ಎಲಿಮಿನೇಷನ್ ನಡೆಯಲಿದೆ. ಯಾರೂ ಊಹಿಸಿರದ ಸ್ಪರ್ಧಿಗೆ ಅತಿ ಕಡಿಮೆ ವೋಟ್ ಬಂದಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ.
ಬಿಗ್ ಬಾಸ್ ಕನ್ನಡ ಸೀಸನ್ 11 ರ ಮನೆಗೆ ಇಂದಿನ ಎಪಿಸೋಡ್ನಲ್ಲಿ ನಟಿ ತಾರಾ ಮನೆಗೆ ಬಂದಿದ್ದಾರೆ. ಸಂಕ್ರಾಂತಿ ಹಬ್ಬದ ಹಿನ್ನೆಲೆ ತಾರಾ ಬಿಗ್ ಬಾಸ್ ಮನೆಗೆ ಹೋಗಿದ್ದಾರೆ.
ಬುಧವಾರ ಅಂದ್ರೆ ಇಂದು ಬಿಗ್ ಬಾಸ್ ಮನೆಯಲ್ಲಿ ಸಂಕ್ರಾಂತಿ ಸಂಭ್ರಮ ಇರಲಿದ್ದು, ಹೀಗಾಗಿ ಯಾರನ್ನೂ ಹೊರಗೆ ಕಳಿಸುತ್ತಿಲ್ಲ.ಆದರೆ ಮಿಡ್ ವೀಕ್ ಎಲಿಮಿನೇಷನ್ ನಡೆಯೋದು ಕನ್ಫರ್ಮ್ ಆಗಿದೆ.
ಧನರಾಜ್ ಆಚಾರ್ ಟಾಸ್ಕ್ ಆಡುವ ಮೂಲಕ ಅತಿ ಹೆಚ್ಚು ಅಂಕಗಳನ್ನು ಗಳಿಸಿ ಮಿಡ್ ವೀಕ್ ಎಲಿಮಿನೇಷನ್ನಿಂದ ಪಾರಾಗಿದ್ದಾರೆ. ಬಿಗ್ ಬಾಸ್ ಎಲಿಮಿನೇಷನ್ ಬಗ್ಗೆ ಸೋಷಿಯಲ್ ಮೀಡಿಯಾ ಸರ್ವೇ ಅನುಸಾರ ರಜತ್ ಅತಿ ಕಡಿಮೆ ವೋಟ್ ಪಡೆದಿದ್ದಾರೆ.
ರಜತ್ ವೈಲ್ಡ್ ಕಾರ್ಡ್ ಎಂಟ್ರಿಯಾಗಿ ಬಿಗ್ ಬಾಸ್ ಕನ್ನಡ ಸೀಸನ್ 11 ರ ಮನೆ ಪ್ರವೇಶಿಸಿದರು. ರಜತ್ ಅವರ ಆಟದ ವೈಖರಿ ಅನೇಕರಿಗೆ ಇಷ್ಟವಾಗಿತ್ತು.
ರಜತ್ ಕ್ಯಾಪ್ಟನ್ ಆದ ಬಳಿಕ ತೋರಿದ ಫೆವರಿಸಂ ಅವರಿಗೆ ಮುಳುವಾದಂತಿದೆ. ಇದೇ ಕಾರಣಕ್ಕೆ ಜನರ ಅಭಿಪ್ರಾಯ ಸಹ ಅವರ ಮೇಲೆ ಬದಲಾದಂತಿದೆ ಎಂದು ಬಿಗ್ ಬಾಸ್ ವೀಕ್ಷಕರು ಹೇಳುತ್ತಿದ್ದಾರೆ.
ಗೌತಮಿ ಅತಿ ಹೆಚ್ಚು ವೋಟ್ ಪಡೆದಿದ್ದು, ರಜತ್ ಕಡಿಮೆ ವೋಟ್ ಪಡೆದಿದ್ದಾರೆ. ಈ ವಾರದ ಟಾಸ್ಕ್ನಲ್ಲೂ ರಜತ್ ಅವರಿಗೆ ಹೆಚ್ಚು ಅಂಕ ಗಳಿಸಲು ಸಾಧ್ಯವಾಗಿಲ್ಲ. ರಜತ್ ಹೊರಬರಬಹುದು ಎಂಬುದು ನೆಟ್ಟಿಗರ ಅಭಿಪ್ರಾಯವಾಗಿದೆ.
ನಿಮ್ಮ ಪ್ರತಿಕ್ರಿಯೆ ಏನು?






