ಯಾರಾದ್ರೂ ನಮ್ಮ ಸಹೋದರಿಯರ ಸಿಂಧೂರವನ್ನು ಅಳಿಸಿದ್ರೆ, ಅವರ ಅಂತ್ಯ ಖಚಿತ: ಪ್ರಧಾನಿ ಮೋದಿ

ನವದೆಹಲಿ: ಯಾರಾದರೂ ನಮ್ಮ ಸಹೋದರಿಯರ ಸಿಂಧೂರವನ್ನು ಅಳಿಸಿದ್ರೆ, ಅವರ ಅಂತ್ಯ ಖಚಿತ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ದಾಹೋದ್ನಲ್ಲಿ ಇಂದು ಸಾರ್ವಜನಿಕ ರ್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ಪಾಕಿಸ್ತಾನದ ಏಕೈಕ ಗುರಿ ಭಾರತಕ್ಕೆ ಹಾನಿ ಮಾಡುವುದಾದರೆ,
ಭಾರತದ ಗುರಿ, ಬಡತನ ನಿರ್ಮೂಲನೆ, ಆರ್ಥಿಕ ಅಭಿವೃದ್ಧಿ ಸಾಧಿಸುವುದು ಮತ್ತು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವುದು" ಎಂದರು. ಇದೇ ವೇಳೆ, ಯಾರಾದರೂ ನಮ್ಮ ಸಹೋದರಿಯರ ಸಿಂಧೂರ ಅಳಿಸುವ ಧೈರ್ಯ ಮಾಡಿದರೆ, ಅವರ ಅಂತ್ಯವೂ ಹತ್ತಿರದಲ್ಲಿರುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಭಾರತದ ಉತ್ಪಾದನಾ ವಲಯ ವೇಗವಾಗಿ ಮುನ್ನಡೆಯುತ್ತಿದೆ. ಅದು ದೇಶೀಯ ಅಗತ್ಯಗಳಿಗಾಗಿ ಸರಕುಗಳನ್ನು ಉತ್ಪಾದಿಸುವುದಿರಲಿ ಅಥವಾ ಭಾರತದಲ್ಲಿ ತಯಾರಿಸಿದ ಉತ್ಪನ್ನಗಳನ್ನು ಪ್ರಪಂಚದಾದ್ಯಂತದ ವಿವಿಧ ದೇಶಗಳಿಗೆ ರಫ್ತು ಮಾಡುತ್ತಿರುವುದಿರಲಿ,
ಈ ಬೆಳವಣಿಗೆ ನಿರಂತರವಾಗಿದೆ. ಇಂದು ಭಾರತ ರೈಲು ಮತ್ತು ಮೆಟ್ರೋಗೆ ಅಗತ್ಯವಾದ ತಂತ್ರಜ್ಞಾನವನ್ನು ದೇಶೀಯವಾಗಿ ತಯಾರಿಸಿಕೊಳ್ಳುವುದಲ್ಲದೆ, ಅದನ್ನು ರಫ್ತು ಕೂಡ ಮಾಡುತ್ತದೆ" ಎಂದು ಮೋದಿ ತಿಳಿಸಿದರು.
ನಿಮ್ಮ ಪ್ರತಿಕ್ರಿಯೆ ಏನು?






