ರನ್ಯಾ ರಾವ್ʼಗೆ ಸೇರಿದ್ದ ₹17.29 ಕೋಟಿ ಮೌಲ್ಯದ ಆಸ್ತಿ ವಶಕ್ಕೆ..! ಈ ನಟಿ ಬಂಧನ ಆಗಿದ್ದೇ ರೋಚಕ..!

ಬೆಂಗಳೂರು: ಮಾಣಿಕ್ಯ, ಪಟಾಕಿ ಸಿನಿಮಾದಲ್ಲಿ ಅಭಿನಯಿಸಿದ್ದ ನಟಿ ರನ್ಯಾ ರಾವ್ ಅಕ್ರಮ ಚಿನ್ನ ಸಾಗಾಟ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದಾರೆ. ಕಂದಾಯ ಗುಪ್ತಚರ ನಿರ್ದೇಶನಾಲಯ (DRI) ಅಧಿಕಾರಿಗಳು ಈ ಪ್ರಕರಣದ ಇಂಚಿಂಚು ಮಾಹಿತಿಯನ್ನು ಜಾಲಾಡುತ್ತಿದ್ದಾರೆ. ನಟಿ ರನ್ಯಾ ರಾವ್ ಗೋಲ್ಡ್ ಸುತ್ತಾ ಕೆದಕಿದಷ್ಟು ರಹಸ್ಯಗಳು ಬಯಲಾಗುತ್ತಿದೆ.
ರನ್ಯಾ ರಾವ್ ಅವರನ್ನು ವಶಕ್ಕೆ ಪಡೆದ ಬಳಿಕ ಅವರು ವಾಸವಿದ್ದ ನಗರದ ಲ್ಯಾವೆಲ್ಲೆ ರಸ್ತೆಯಲ್ಲಿರುವ ಫ್ಲ್ಯಾಟ್ನಲ್ಲಿ ಡಿಆರ್ಐ ಅಧಿಕಾರಿಗಳ ತಂಡ ಶೋಧ ನಡೆಸಿದ್ದು, ಈ ವೇಳೆ 2.06 ಕೋಟಿ ರೂ. ಮೌಲ್ಯದ ಚಿನ್ನ ಹಾಗೂ ನಗದು ಸೇರಿ 4.73 ಕೋಟಿ ರೂ. ಮೌಲ್ಯದ ಆಸ್ತಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.
ಚಿನ್ನ ಸೇರಿ ಒಟ್ಟು 17.29 ಕೋಟಿ ಮೌಲ್ಯದ ಆಸ್ತಿ ವಶಕ್ಕೆ: ಈ ಮೂಲಕ ರನ್ಯಾ ಅವರಿಂದ ಒಟ್ಟು 12.56 ಕೋಟಿ ಮೌಲ್ಯದ 14.2 ಕೆ.ಜಿ ವಿದೇಶಿ ಮೂಲದ ಚಿನ್ನ ಮತ್ತು 4.73 ಕೋಟಿ ಮೌಲ್ಯದ ಇತರ ಆಸ್ತಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕಂದಾಯ ಗುಪ್ತಚರ ನಿರ್ದೇಶನಾಲಯ (DRI) ತಿಳಿಸಿದೆ. 1962ರ ಕಸ್ಟಮ್ಸ್ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಡಿಆರ್ಐ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಪ್ರಕರಣದಲ್ಲಿ ಚಿನ್ನ, ನಗದು ಸೇರಿದಂತೆ ಒಟ್ಟು 17.29 ಕೋಟಿ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇತ್ತೀಚಿನ ದಿನಗಳಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶಪಡಿಸಿಕೊಂಡ ಅತಿದೊಡ್ಡ ಪ್ರಮಾಣದ ಚಿನ್ನದಲ್ಲಿ ಇದೂ ಒಂದಾಗಿದೆ ಎಂದು ಡಿಆರ್ಐ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.
ನಟಿ ರನ್ಯಾ ರಾವ್ ಅವರಿಗೆ ಮದುವೆಯಾಗಿ 3 ತಿಂಗಳು ಕಳೆದಿದೆ. ಬೆಂಗಳೂರಲ್ಲಿ ಕಳೆದ 3 ತಿಂಗಳ ಹಿಂದೆ ರನ್ಯಾ ರಾವ್ ಅದ್ದೂರಿ ಮದುವೆ ನಡೆದಿತ್ತು. ರಾಜ್ಯದ ಹೆಸರಾಂತ ರಾಜಕೀಯ ಕುಟುಂಬದ ಸಂಬಂಧಿಕರಲ್ಲೇ ತಾಜ್ ವೆಸ್ಟ್ ಎಂಡ್ನಲ್ಲಿ ರನ್ಯಾ ರಾವ್ ವಿವಾಹವಾಗಿದ್ದರು. ರನ್ಯಾ ರಾವ್ ಪತಿ ಹೆಸರಾಂತ ಅರ್ಕಿಟೆಕ್ಟ್ ಆಗಿದ್ದು, ಮದುವೆಯಾದ ಮೇಲೆ ಲ್ಯಾವೆಲ್ಲಿ ರಸ್ತೆಯ ಫ್ಲಾಟ್ಗೆ ಶಿಪ್ಟ್ ಆಗಿದ್ದರು. ನಟಿ ರನ್ಯಾ ರಾವ್ ಅಕ್ರಮವಾಗಿ ಚಿನ್ನ ಸಾಗಾಟ ಪ್ರಕರಣದ ತನಿಖೆಗೆ ED (ಜಾರಿ ನಿರ್ದೇಶನಾಲಯ) ಕೂಡ ಎಂಟ್ರಿಯಾಗಿದೆ. ಈ ಪ್ರಕರಣದ ಬಗ್ಗೆ ಸಂಪೂರ್ಣ ಮಾಹಿತಿ ಕಲೆ ಹಾಕಲಿರುವ ಇಡಿ, ಹವಾಲ ಹಣದ ವರ್ಗವಣೆಯ ಬಗ್ಗೆಯೂ ಸಾಕಷ್ಟು ಅನುಮಾನಗೊಂಡಿದ್ದಾರೆ.
ನಟಿ ರನ್ಯಾ ರಾವ್ ಅವರು ದುಬೈನಿಂದ ಎಮಿರೈಟ್ಸ್ ಫ್ಲೈಟ್ನಲ್ಲಿ ಬೆಂಗಳೂರಿಗೆ ಬಂದರು. ಕೂಡಲೇ DRI ಟೀಂ ಬೆಂಗಳೂರು ಏರ್ಪೋರ್ಟ್ನಲ್ಲಿ ರನ್ಯಾ ಸುತ್ತುವರೆದಿದೆ. ಈ ವೇಳೆ ಆತ್ಮವಿಶ್ವಾಸದಿಂದ ರನ್ಯಾ ಎಲ್ಲಾ ಅಧಿಕಾರಿಗಳನ್ನು ಮಾತಾಡಿಸಿದ್ದಾರೆ. ತಾನು DGP ಮಗಳು, ಪೊಲೀಸರು ಕೆಲ ಹೊತ್ತಲ್ಲಿ ಬರ್ತಾರೆ ಎಂದಿದ್ದಾರೆ.
ಕೆಲಹೊತ್ತಲ್ಲೇ ರನ್ಯಾ ರಾವ್ ಹೇಳಿದಂತೆ ಏರ್ಪೋರ್ಟ್ಗೆ ಪೊಲೀಸರು ಎಂಟ್ರಿ ಆಗಿದ್ದಾರೆ. ಕೂಡಲೇ ಡಿಆರ್ಐ ತಂಡದಿಂದ ಪೊಲೀಸರು ಹಾಗೂ ರನ್ಯಾಳ ವಿಚಾರಣೆ ನಡೆದಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ಏರ್ಪೋರ್ಟ್ಗೆ ರನ್ಯಾಳನ್ನು ಸ್ವಾಗತ ಮಾಡಲು ಕಾನ್ಸ್ಟೇಬಲ್ ಬಂದಿದ್ದರು. ಆದರೆ ಅಷ್ಟರಲ್ಲಿ ರನ್ಯಾ ಅವರು ಡಿಆರ್ಐ ಅಧಿಕಾರಿಗಳ ಕೈಗೆ ಲಾಕ್ ಆಗಿದ್ದರು.
ನಿಮ್ಮ ಪ್ರತಿಕ್ರಿಯೆ ಏನು?






