ಶನಿವಾರ ಮರೆತೂ ಕೂಡ ಈ ಕೆಲಸ ಮಾಡ್ಬೇಡಿ..! ಯಾಕೆ ಗೊತ್ತಾ?

ಹಿಂದೂ ಧರ್ಮದಲ್ಲಿ ವಾರದಲ್ಲಿ 7 ದಿನಗಳಿವೆ ಮತ್ತು ಎಲ್ಲಾ ಏಳು ದಿನಗಳನ್ನು ಒಂದಲ್ಲ ಒಂದು ದೇವರಿಗೆ ಅರ್ಪಿಸಲಾಗುತ್ತೆ. ಈ ಏಳು ದಿನಗಳಲ್ಲಿ ಶನಿವಾರವೂ ಸೇರಿದೆ, ಇದನ್ನು ಶನಿದೇವರ ದಿನವೆಂದು ಪರಿಗಣಿಸಲಾಗುತ್ತೆ. ಶನಿ ದೇವರನ್ನು ಶನಿವಾರ ಪೂಜಿಸಲಾಗುತ್ತೆ. ಭಕ್ತರು ಶನಿವಾರ ಶನಿ ದೇವಾಲಯದಲ್ಲಿ ದೀಪ, ಧೂಪ, ಎಣ್ಣೆ ಇತ್ಯಾದಿಗಳನ್ನು ಅರ್ಪಿಸುತ್ತಾರೆ. ಶನಿ ದೇವರನ್ನು ನ್ಯಾಯದ ದೇವರು ಎಂದು ಕರೆಯಲಾಗುತ್ತೆ. ಶನಿ ದೇವನು ಒಳ್ಳೆಯದನ್ನು ಒಳ್ಳೆಯದು ಮತ್ತು ಕೆಟ್ಟದ್ದನ್ನು ಕೆಟ್ಟದ್ದರೊಂದಿಗೆ ಪರಿಗಣಿಸುತ್ತಾನೆ ಎಂದು ಹೇಳಲಾಗುತ್ತೆ .
ಈ ವಸ್ತುಗಳನ್ನು ಖರೀದಿಸಬೇಡಿ
ಕಬ್ಬಿಣದಿಂದ ಮಾಡಿದ ವಸ್ತುಗಳನ್ನು ಶನಿವಾರ ಖರೀದಿಸಬಾರದು. ಈ ದಿನ ಖರೀದಿಸಿದರೆ ಶನಿದೇವನ ಕೋಪಕ್ಕೆ ತುತ್ತಾಗಬೇಕಾದೀತು. ಆದರೆ ಕಬ್ಬಿಣದಿಂದ ಮಾಡಿದ ವಸ್ತುಗಳನ್ನು ದಾನ ಮಾಡುವುದಕ್ಕಾಗಿ ಈ ದಿನ ವಿಶೇಷ ಮಹತ್ವ ಪಡೆದಿದೆ. ಇದರಿಂದ ಶನಿದೇವನ ವಿಶೇಷ ಅನುಗ್ರಹವನ್ನೂ ಪಡೆಯಬಹುದು, ಆದರೆ ಈ ವಸ್ತುವನ್ನು ಖರೀದಿಸಿದರೆ ತೊಂದರೆಗಳನ್ನು ಎದುರಿಸಬೇಕಾಗುತ್ತದೆ.
ಉಪ್ಪು ಖರೀದಿ
ನೀವು ಉಪ್ಪು ಖರೀದಿಸಲು ಬಯಸಿದರೆ, ಶನಿವಾರದ ಬದಲು ಇನ್ನೊಂದು ದಿನ ಖರೀದಿಸುವುದು ಉತ್ತಮ. ಶನಿವಾರ ಉಪ್ಪು ಖರೀದಿಸುವುದರಿಂದ ಶನಿದೇವನು ಕೋಪಗೊಳ್ಳುತ್ತಾನೆ. ಮತ್ತು ವ್ಯಕ್ತಿಯ ಮೇಲಿನ ಸಾಲದ ಹೊರೆ ದಿನದಿಂದ ದಿನಕ್ಕೆ ಹೆಚ್ಚಾಗುವುದು ಎಂಬ ನಂಬಿಕೆ ಇದೆ. ಇದಲ್ಲದೇ ಆರೋಗ್ಯ ಸಮಸ್ಯೆಗಳೂ ಬಾಧಿಸಬಹುದು.
ಕತ್ತರಿ ಖರೀದಿ
ಟೈಲರ್ ಅಂಗಡಿಯವರು, ಬುಟೀಕ್ ಅಂಗಡಿಯವರು ಶನಿವಾರದ ದಿನ ಕತ್ತರಿಯನ್ನು ಖರೀದಿಸುವುದಿಲ್ಲ. ಇವರಂತೆಯೇ, ಸಾಮಾನ್ಯ ಜನರೂ ಕೂಡಾ ಶನಿವಾರ ಕತ್ತರಿ ಖರೀದಿಸಬಾರದು. ಇದು ಶನಿದೇವನನ್ನು ಅಸಮಾಧಾನಗೊಳಿಸುತ್ತದೆ. ಪರಸ್ಪರ ಸಂಬಂಧಗಳಲ್ಲಿ ಭಿನ್ನಾಭಿಪ್ರಾಯ ಹಾಗೂ ಅಂತರವು ಹೆಚ್ಚಾಗಲು ಪ್ರಾರಂಭವಾಗುತ್ತದೆ ಎಂದು ನಂಬಲಾಗುತ್ತದೆ. ಆದ್ದರಿಂದ ಮರೆತು ಹೋದರೂ ಶನಿವಾರದಂದು ಕತ್ತರಿ ಮಾತ್ರ ಖರೀದಿಸಲು ಹೋಗಬೇಡಿ.
ನಿಮ್ಮ ಪ್ರತಿಕ್ರಿಯೆ ಏನು?






