ಹಿಂದಿನಿಂದಲೂ ರಾಜಮನೆತನವನ್ನು ಸರ್ಕಾರ ಸಾಕಷ್ಟು ಟಾರ್ಗೆಟ್ ಮಾಡಿದೆ: ಯದುವೀರ್ ಆರೋಪ

ಡಿಸೆಂಬರ್ 26, 2024 - 13:56
 0  16
ಹಿಂದಿನಿಂದಲೂ ರಾಜಮನೆತನವನ್ನು ಸರ್ಕಾರ ಸಾಕಷ್ಟು ಟಾರ್ಗೆಟ್ ಮಾಡಿದೆ: ಯದುವೀರ್ ಆರೋಪ

ಮೈಸೂರು: ಹಿಂದಿನಿಂದಲೂ ರಾಜಮನೆತನವನ್ನು ಸರ್ಕಾರ ಸಾಕಷ್ಟು ಟಾರ್ಗೆಟ್ ಮಾಡಿದೆ ಎಂದು ಸಂಸದರಾದ ಯದುವೀರ್ ಒಡೆಯರ್ ಆರೋಪ ಮಾಡಿದ್ದಾರೆ.  ಮೈಸೂರಿನ ಪ್ರಿನ್ಸೆಸ್ ಅಥವಾ ರಾಜಕುಮಾರಿ ರಸ್ತೆಗೆ ಸಿಎಂ ಸಿದ್ದರಾಮಯ್ಯನವರ ಹೆಸರು ಇಡುವ ವಿಚಾರಕ್ಕೆ ಸಂಬಂಧಿಸಿದಂತೆ ನಗರದಲ್ಲಿ ಮಾತನಾಡಿದ ಅವರು,

ಹಿಂದಿನಿಂದಲೂ ರಾಜಮನೆತನವನ್ನು ಸರ್ಕಾರ ಸಾಕಷ್ಟು ಟಾರ್ಗೆಟ್ ಮಾಡಿದೆ ಎಂದು ಯದುವೀರ್ ಆರೋಪ ಮಾಡಿದ್ದಾರೆ. ಚಾಮುಂಡಿ ಬೆಟ್ಟ ಪ್ರಾಧಿಕಾರ, ಕುರುಬಾರಹಳ್ಳಿ ವಿಚಾರಗಳನ್ನು ನಾನು ಹೇಳಲ್ಲ. ರಸ್ತೆಗೆ ಸಿದ್ದರಾಮಯ್ಯ ಅವರ ಹೆಸರಿಡಲು ನನ್ನ ವಿರೋಧವಿಲ್ಲ. ಆದರೆ ಪ್ರಿನ್ಸೆಸ್ ರಸ್ತೆಗೆ ಅವರ ಹೆಸರು ಬೇಡ ಎಂದು ಹೇಳಿದ್ದಾರೆ.

ಇನ್ನೂ ಸಿದ್ದರಾಮಯ್ಯ ಅವರ ಹೆಸರಿಡಲಿ ಎಂದ ಪ್ರತಾಪ್ ಸಿಂಹಗೂ ಯದುವೀರ್ ಒಡೆಯರ್ ಟಾಂಗ್ ಕೊಟ್ಟಿದ್ದು, ಪ್ರತಾಪ್ ಸಿಂಹ ಇತಿಹಾಸ ಮರೆತಿದ್ದಾರೆ ಅನ್ನಿಸುತ್ತೆ. ನಾನು ಇತಿಹಾಸ ಹೇಳಿದ ಮೇಲೆ ಮತ್ತೆ ನೆನಪಾಗಬಹುದು ಎಂದು ಹೇಳಿದರು.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow