Actor Vijay's House: ನಟ ವಿಜಯ್ ಐಷಾರಾಮಿ ಮನೆ ಮೇಲೆ ಚಪ್ಪಲಿ ಎಸೆದ ಯುವಕ..! ಯಾಕೆ ಗೊತ್ತಾ..?

ನಟ ವಿಜಯ್ ಅವರು ಸಿನಿಮಾ ರಂಗದಲ್ಲಿ ಕೊನೆಯ ದಿನಗಳನ್ನು ಕಳೆಯುತ್ತಿದ್ದಾರೆ. ರಾಜಕೀಯ, ಸಿನಿಮಾ ರಂಗ ಒಂದಕ್ಕೊಂದು ಬಿಡಿಸಲಾಗದ ನಂಟು ಹೊಂದಿರುವ ತಮಿಳುನಾಡಿನಲ್ಲಿ ಸಿನಿಮಾ ಹಿನ್ನೆಲೆಯ ಮತ್ತೊಬ್ಬ ನಟ ದಳಪತಿ ವಿಜಯ್ ರಾಜಕಾರಣಕ್ಕೆ ಎಂಟ್ರಿ ಕೊಟ್ಟು ಒಂದು ವರ್ಷ.
ಖ್ಯಾತ ನಿರ್ದೇಶಕ ಎಸ್.ಎ. ಚಂದ್ರಶೇಖರ್ ಅವರ ಪುತ್ರ ಹಾಗೂ ಸೂಪರ್ ಸ್ಟಾರ್ ದಳಪತಿ ವಿಜಯ್ ಹೊಸ ರಾಜಕೀಯ ಪಕ್ಷ (ತಮಿಳಗ ವೆಟ್ರಿ ಕಳಗಂ) ಘೋಷಣೆ ಮಾಡುವ ಮೂಲಕ ಪ್ರಾದೇಶಿಕ ಪಕ್ಷಗಳೇ ವಿಜೃಂಭಿಸುತ್ತಿರುವ ತಮಿಳುನಾಡಿನಲ್ಲಿ ಮತ್ತೊಂದು ರಾಜಕೀಯ ಆಖಾಡವನ್ನು ಸಜ್ಜುಗೊಳಿಸಿದ್ದರು.
ಇದೀಗ ಯುವಕನೊಬ್ಬ ವಿಜಯ್ರ ಗೇಟಿನ ಒಳಕ್ಕೆ ಚಪ್ಪಲಿ ಎಸೆದು ಓಡಿಹೋಗಿದ್ದಾನೆ. ಈ ವೇಳೆ ವಿಜಯ್ರ ಭದ್ರತಾ ಸಿಬ್ಬಂದಿ ಆತನನ್ನು ಹಿಡಿದುಕೊಂಡಿದ್ದಾರೆ. ಆದರೆ ಆ ವ್ಯಕ್ತಿ ಮಾನಸಿಕ ಅಸ್ವಸ್ಥನಾಗಿರಬಹುದು ಎಂದು ಭದ್ರತಾ ಸಿಬ್ಬಂದಿಯೇ ಹೇಳಿರುವುದಾಗಿ ವರದಿಯಾಗಿದೆ. ಆತ ವಿಜಯ್ ಮನೆಯ ಒಳಗೆ ಮಕ್ಕಳ ಚಪ್ಪಲಿಯನ್ನು ಎಸೆದಿದ್ದ ಎಂಬುದು ತಿಳಿದು ಬಂದಿದೆ. ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದು ವಿಚಾರಣೆ ನಡೆಸಿದ್ದಾರೆ.
ಅದೇ ಯುವಕ ಮಾಧ್ಯಮವೊಂದರ ಜೊತೆ ಮಾತನಾಡಿ, ‘ನಾನು ಕೇರಳದ ಮಣಪ್ಪುರಂನವನು, ತಮಿಳುನಾಡಿನಲ್ಲಿ ಎಷ್ಟೋ ಜನ ಮಕ್ಕಳು ಚಪ್ಪಲಿ ಇಲ್ಲದೆ ಪ್ರಯಾಣ ಮಾಡುತ್ತಿದ್ದಾರೆ, ಅದನ್ನು ವಿಜಯ್ರ ಗಮನಕ್ಕೆ ತರಲೆಂದು ನಾನು ಅವರ ಮನೆಯ ಗೇಟಿನ ಒಳಕ್ಕೆ ಚಪ್ಪಲಿ ಎಸೆದೆ’ ಎಂದಿದ್ದಾನೆ. ತಾನು, ವಿಜಯ್ರ ಅಭಿಮಾನಿ ಎಂದು ಸಹ ಆ ಯುವಕ ಹೇಳಿಕೊಂಡಿದ್ದಾನೆ.
ನಿಮ್ಮ ಪ್ರತಿಕ್ರಿಯೆ ಏನು?






