BBK11: ಕಣ್ಣೀರಧಾರೆ ಚೈತ್ರಾ ಇದೇಕೆ! ಗೌತಮಿಯಿಂದ ದುಖಿಃತಳಾದ ಹಿಂದೂ ಫೈಯರ್ ಬ್ರ್ಯಾಂಡ್!

ಡಿಸೆಂಬರ್ 12, 2024 - 20:01
 0  10
BBK11: ಕಣ್ಣೀರಧಾರೆ ಚೈತ್ರಾ ಇದೇಕೆ! ಗೌತಮಿಯಿಂದ ದುಖಿಃತಳಾದ ಹಿಂದೂ ಫೈಯರ್ ಬ್ರ್ಯಾಂಡ್!


ಬಿಗ್ ಬಾಸ್ ಸೀಸನ್ 11 ಸಾಕಷ್ಟು ಕುತೂಹಲಕಾರಿಯಾಗಿ ಮೂಡಿ ಬರುತ್ತಿದ್ದು, ಪ್ರೇಕ್ಷಕರನ್ನು ರಂಜಿಸುತ್ತಿದೆ. ಅದರಂತೆ ಈ ವಾರದ ಕ್ಯಾಪ್ಟನ್ಸಿ ಟಾಸ್ಕ್ ಗಳು ನಡೆಯುತ್ತಿದ್ದು, ಎಲ್ಲರಲ್ಲೂ ತಾನು ಕ್ಯಾಪ್ಟನ್ ಆಗಬೇಕೆಂಬ ಆಸೆ ಇದೆ. ಈ ಮಧ್ಯೆ ತನಗೆ ಮೋಸ ಆಗುತ್ತಿದೆ ಎಂದು ಚೈತ್ರಾ ಕುಂದಾಪುರ ಕಣ್ಣೀರು ಹಾಕಿದ್ದಾರೆ. 

ಕ್ಯಾಪ್ಟನ್ ಗೌತಮಿ ತಂಡದಲ್ಲಿರುವ ಚೈತ್ರಾ ಕುಂದಾಪುರಗೆ ಆಡಲು ಅವಕಾಶ ಸಿಗುತ್ತಿಲ್ಲ ಅನ್ನೋದು ಆರೋಪವಾಗಿದೆ. ನಿನ್ನೆ ನಡೆದ ಒಂದು ಪಂದ್ಯದಲ್ಲಿ ಗೌಮಿ ತಂಡದ ಪರ ಚೈತ್ರಾ ಹಾಗೂ ಮಂಜು ಆಡಿದ್ದರು. ಚೈತ್ರಾ ಹಾಗೂ ಮಂಜು ಜೋಡಿ ಸೋಲನ್ನು ಕಂಡಿದೆ. ನಂತರದ ಗೇಮ್​​ಗೆ ಚೈತ್ರಾ ಅವರನ್ನು ಉಸ್ತುವಾರಿಯಾಗಿ ಗೌತಮಿ ನೇಮಕ ಮಾಡಿದ್ದರು.

ಇದಕ್ಕೆ ಬೇಸರಗೊಳ್ಳುವ ಚೈತ್ರಾ, ನನಗೆ ಆಡಕ್ಕೆ ಕೊಡಲ್ಲ. ಉಸ್ತುವಾರಿ ಮಾಡಲ್ಲ ಅಂತಿನಿ, ನನಗೆ ಅದನ್ನೇ ಕೊಡ್ತಾರೆ. ಕಳೆದ ವಾರ ಎಲಿಮಿನೇಟ್ ಆಗಿ ವಾಪಸ್ ಬಂದಿದ್ದೀನಿ. ಇಡೀ ವಾರ ಆಟ ಆಡಿಲ್ಲ. ಆಡ್ತೀನಿ ಅಂದರೆ ಆಡಕ್ಕೆ ಕೊಡಲ್ಲ. ಆಮೇಲೆ ಆಟಕ್ಕೆ ಉಂಟು, ಲೆಕ್ಕಕ್ಕೆ ಇಲ್ಲ ಅಂತಾರೆ ಎನ್ನುತ್ತ ಕಣ್ಣೀರು ಇಟ್ಟಿದ್ದಾರೆ.

ನನಗೆ ಈ ಮನೆಯಲ್ಲಿ ಆಟ ಆಡೋಕೇ ಬಿಡೋದಿಲ್ಲ ಎಂದು ಹೇಳಿದ್ದಾರೆ. ಅದೂ ಅಲ್ಲದೇ ಈ ಬಾರಿ ನಾಮಿನೇಟ್‌ ಆಗಿ ಎಲಿಮಿನೇಷನ್ ಅಂದ್ರೆ ಏನು ಅನ್ನೋದನ್ನು ಸ್ವತಃ ಅನುಭವಿಸಿ ಬಂದಿದ್ದೇನೆ ಎಂದೂ ಸಹ ಹೇಳಿದ್ದಾರೆ. ಹೀಗಿರುವಾಗ ಗೌತಮಿ ಅವರ ಕ್ಯಾಪ್ಟನ್ಸಿಯಲ್ಲಿ ಚೈತ್ರಾ ಅವರಿಗೆ ಆಟ ಆಡಲು ಕೊಟ್ಟಿಲ್ಲ ಎಂದು ಅವರು ಅತ್ತಿದ್ದಾರೆ. ಎಲ್ಲರೂ ಚೈತ್ರಾ ಅವರಿಗೆ ಸಮಾಧಾನ ಮಾಡಿದ್ದಾರೆ.

ಮನೆಯಲ್ಲಿ ಯಾರು ಲೆಕ್ಕಕ್ಕುಂಟು ಆಟಕ್ಕಿಲ್ಲ ಎಂದು ಪ್ರಶ್ನೆ ಕೇಳಿದರೆ ನನ್ನ ಹೆಸರನ್ನೇ ಕೊಡುತ್ತಾರೆ. ಆದರೆ ಆಟ ಆಡಲು ಅವಕಾಶವನ್ನೇ ಕೊಡೋದಿಲ್ಲ ಎಂದು ಹೇಳುತ್ತಾ ಕಣ್ಣೀರು ಹಾಕಿದ್ದಾರೆ. ಬಿಗ್‌ ಬಾಸ್‌ ಮನೆಯಲ್ಲಿ ಈಗ ಈ ವಾರ ಯಾರು ಕ್ಯಾಪ್ಟನ್ ಆಗುತ್ತಾರೆ ಎಂದು ನೋಡಲು ಆಟ ಆಡಿಸಲಾಗುತ್ತಿದೆ. ಆದರೆ ಕ್ಯಾಪ್ಟನ್ಸಿ ಟಾಸ್ಕ್‌ ಆಟದಿಂದ ಯಾರನ್ನಾದರೂ ಹೊರಗಿಡಿ ಎಂದಾಗ ಗೌತಮಿ ಚೈತ್ರಾ ಅವರನ್ನೇ ಹೊರಗಿಟ್ಟಿದ್ದಾರೆ

ನೀವು ಈ ಆಟದ ಉಸ್ತುವಾರಿಯಾಗಿ ಎಂದು ಗೌತಮಿ ಹೇಳಿದ್ದರು. ಆಗ ಇಲ್ಲ ನಾನು ಆಟವನ್ನು ಆಡಬೇಕು ಎಂದು ಚೈತ್ರಾ ಕೇಳಿಕೊಂಡಿದ್ದರು. ಗೌತಮಿ ಅವರು ತಮ್ಮ ಕ್ಯಾಪ್ಟನ್ಸಿಯಲ್ಲಿ ತಮ್ಮ ವಿವೇಚನೆಗೆ ತಕ್ಕ ನಿರ್ಧಾರವನ್ನು ತೆಗೆದುಕೊಳ್ಳುತ್ತಾ ಇದ್ದಾರೆ. ಚೈತ್ರಾ ಕುಂದಾಪುರ ಅಷ್ಟು ಕೇಳಿಕೊಂಡರೂ ಅವರಿಗೆ ಒಂದು ಅವಕಾಶವನ್ನೂ ಮಾಡಿಕೊಟ್ಟಿಲ್ಲ ಎಂದು ಅವರಿಗೆ ಬೇಸರ ಆಗಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow