BBK11: ನಿಲ್ಲೇ ನಿಲ್ಲೇ ಕಾವೇರಿ ಟಾಸ್ಕ್ ನಲ್ಲಿ ಗೋಲ್ಡ್ ಕಿರಿಕ್: ಅನುಷಾಗೆ ಕಾಲಿನಲ್ಲಿ ಒದ್ದ ಸುರೇಶ್!

ನವೆಂಬರ್ 7, 2024 - 20:13
 0  35
BBK11: ನಿಲ್ಲೇ ನಿಲ್ಲೇ ಕಾವೇರಿ ಟಾಸ್ಕ್ ನಲ್ಲಿ ಗೋಲ್ಡ್ ಕಿರಿಕ್: ಅನುಷಾಗೆ ಕಾಲಿನಲ್ಲಿ ಒದ್ದ ಸುರೇಶ್!

ಕನ್ನಡದ ಬಿಗ್​ ಶೋನಲ್ಲಿ ಸ್ಪರ್ಧಿಗಳ ಮಧ್ಯೆ ಗಲಾಟೆ ನಡೆದಿದೆ. ಬಿಗ್​ಬಾಸ್​ ಕೊಟ್ಟ ನಿಲ್ಲೆ ನಿಲ್ಲೆ ಕಾವೇರಿ ಟಾಸ್ಕ್​ನಲ್ಲಿ ಸ್ಪರ್ಧಿಗಳ ಮಧ್ಯೆ ಗಲಾಟೆ ನಡೆದಿದೆ. ನೀರಿನ ಟಾಸ್ಕ್‌ ನಲ್ಲಿ ಸ್ಪರ್ಧಿಗಳು ಒಬ್ಬರ ಮೇಲೊಬ್ಬರು ರೇಗಾಡಿಕೊಂಡಿದ್ದಾರೆ. ತಮಗೆ ಬೇಕಾದ ಊಟ, ಬೇಕಾದ ಬೆಡ್, ನಾಮಿನೇಟ್ ‌ನಿಂದ ಪಾರಾಗಲು, ಕ್ಯಾಪ್ಟನ್ಸಿ ಓಟ ಹೀಗೆ ನಾನಾ ರೀತಿಯ ಅಧಿಕಾರವನ್ನು ಪಡೆಯಲು ಬಿಗ್‌ ಬಾಸ್‌ ಈ ವಾರದ ಟಾಸ್ಕ್‌ ನೀಡಿದ್ದಾರೆ.

ಮಂಜು, ಶಿಶಿರ್‌, ಚೈತ್ರಾ ಹಾಗೂ ಗೌತಮಿ ಅವರ ತಂಡಗಳು ನಾನಾ ರೀತಿಯ ಟಾಸ್ಕ್‌ನಲ್ಲಿ ಭಾಗಿಯಾಗಿ ತಮಗೆ ಸಿಗುವ ಅಧಿಕಾರವನ್ನು ಬಳಸಲಿದ್ದಾರೆ.
ʼನಿಲ್ಲೇ ನಿಲ್ಲೇ ಕಾವೇರಿʼ ಎನ್ನುವ ಟಾಸ್ಕ್‌ ನೀಡಲಾಗಿದೆ. ತಂಡದ ಕೆಲ ಸದಸ್ಯರು ಡ್ರಮ್‌ ನಲ್ಲಿರುವ ನೀರು ಹೊರ ಹರಿಯದಂತೆ ಕಾಪಾಡಿಕೊಳ್ಳಬೇಕು. ಎದುರಾಳಿ ತಂಡದ ಸದಸ್ಯರು ನೀರನ್ನು ಹೊರಗೆ ಹರಿಸುವ ಟಾಸ್ಕ್‌ನಲ್ಲಿ ಸ್ಪರ್ಧಿಗಳು ಪರಸ್ಪರ ಕಿತ್ತಾಡಿಕೊಂಡಿದ್ದಾರೆ.

ಎಸ್, ಬಿಗ್​ಬಾಸ್​ ಕೊಟ್ಟ ನಿಲ್ಲೆ ನಿಲ್ಲೆ ಕಾವೇರಿ ಟಾಸ್ಕ್​ನಲ್ಲಿ ಸ್ಪರ್ಧಿಗಳ ಮಧ್ಯೆ ಗಲಾಟೆ ನಡೆದಿದೆ. ರಕ್ಷಕರು ತಮ್ಮ ತಂಡದ ಡ್ರಮ್‍ನಿಂದ ನೀರು ಹೊರಗಡೆ ಹರಿಯದಂತೆ ಕಾಪಾಡಿಕೊಳ್ಳಬೇಕಾಗಿತ್ತು. ಹೀಗಾಗಿ ಮಹಿಳಾ ಸ್ಪರ್ಧಿಗಳು ಬೇರೆ ತಂಡಕ್ಕೆ ಹೋಗಿ ತೊಂದರೆ ಕೊಟ್ಟು ನೀರು ಡ್ರಮ್‍ನಿಂದ ಹೋಗುವಂತೆ ಮಾಡುತ್ತಿದ್ದರು

ಆಗ  ಗೋಲ್ಡ್​ ಸುರೇಶ್​ ತಮ್ಮ ಡ್ರಮ್‍ ಬಳಿ ಬಂದ ಸ್ಪರ್ಧಿಗಳಿಗೆ ಗುದ್ದಿ ತಳ್ಳಿದ್ದಾರೆ. ಅದೇ ಜಾಗದಲ್ಲಿದ್ದ ಅನುಷಾ ಅವರಿಗೆ ಪೆಟ್ಟಾಗಿದೆ. ಆಗ ಕೋಪಗೊಂಡ ಅನುಷಾ, ಒಂದು ಕಾಮನ್​ಸೆನ್ಸ್ ಇಲ್ಲೂ ಹೇಗೆ ವರ್ತನೆ ಮಾಡಬೇಕು ಅಂತ, ಹೀಗೆಂನಾ ನಿಮ್ಮ ಮನೆಯಲ್ಲಿ ಬೇಳ್ಸಿದ್ದು ಅಂತ ಹೇಳಿದ್ದಾರೆ. ಇದಾದ ಬಳಿಕ ಕೈಯಲ್ಲಿ ಎಳೆಯೋದಕ್ಕೆ ಬಂದರೆ ಕಾಲಲ್ಲಿ ಒದೆಯುತ್ತಾರೆ. ನನ್ನನ್ನೂ ಅವರ ಅಪ್ಪ ಸಾಕ್ತಾನಾ ಅಂತ ಕೂಗಾಡಿದ್ದಾರೆ. ಮತ್ತೆ ಇದೇ ವಿಚಾರಕ್ಕೆ ಟಾಸ್ಕ್​ ಮುಗಿದ ಬಳಿಕ ಗಲಾಟೆಯಾಗಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow