BBK11: ದೊಡ್ಮನೆಗೆ ಎಂಟ್ರಿ ಕೊಟ್ಟ ಅಭಿಮಾನಿಗಳ ದಂಡು: ಫ್ಯಾನ್ಸ್ ಪ್ರೀತಿಗೆ ತಲೆ ಬಾಗಿದ ಸ್ಪರ್ಧಿಗಳು!

ದೊಡ್ಮನೆಯಲ್ಲಿ ಮೂರು ತಿಂಗಳು ಇದ್ದು, ಎಲ್ಲ ರೀತಿಯ ಅನುಭವ ಪಡೆದ ಸ್ಪರ್ಧಿಗಳು ಇದೀಗ ಕಟ್ಟಕಡೆಯ ಕ್ಷಣಕ್ಕೆ ಕಾಯುತ್ತಿದ್ದಾರೆ. ನಾಡಿನ ಜನರ ಪ್ರೀತಿಯನ್ನ ಗಳಿಸಿಕೊಂಡು ಫಿನಾಲೆ ಹಂತಕ್ಕೆ ಬಂದ ಈ ಸ್ಪರ್ಧಿಗಳಲ್ಲಿ, ಗೆಲ್ಲುವವರು ಯಾರು ಅನ್ನೋ ಪ್ರಶ್ನೆ ಕೂಡ ಇದೆ.
ಬಿಗ್ ಬಾಸ್ ಟ್ರೋಫಿ ಗೆಲ್ಲೋರು ಯಾರು ಎಂಬ ಪ್ರಶ್ನೆ ಎದ್ದಿರೋ ಹೊತ್ತಲ್ಲಿ ಅತಿ ಹೆಚ್ಚು ಬೇಡಿಕೆ ಹೊಂದಿರುವ ಮನೆಗೆ ಪ್ರೇಕ್ಷಕ ಪ್ರಭುಗಳು ಹೆಜ್ಜೆ ಇಟ್ಟಿದ್ದಾರೆ. ತಮ್ಮ ಮೆಚ್ಚಿನ ಸ್ಪರ್ಧಿಗಳ ಭಾವಚಿತ್ರ, ಕಾರ್ಡ್ ಹಿಡಿದು ಘೋಷಣೆ ಕೂಗಿದ್ದಾರೆ. ಫೈನಲಿಸ್ಟ್ ಸ್ಪರ್ಧಿಗಳೂ ಕೂಡಾ ತಮ್ಮ ಮನದಾಳ ಹಂಚಿಕೊಂಡಿದ್ದಾರೆ. ಸಂಪೂರ್ಣ ಸಂಚಿಕೆ ವೀಕ್ಷಿಸೋ ಅಭಿಮಾನಿಗಳ ಕುತೂಹಲ ಹೆಚ್ಚಾಗಿದೆ.
ಈ ಒಂದು ಪ್ರಶ್ನೆಗೆ ಮೂರು ಹೆಸರು ಹೆಚ್ಚು ಹೆಚ್ಚು ಕೇಳಿ ಬರ್ತಿವೆ. ವಿನ್ನರ್ ವಿಚಾರದಲ್ಲಿ ಹನುಮಂತ್ನ ಹೆಸರು ಜಾಸ್ತಿ ಕೇಳಿ ಬರ್ತಿದೆ. ರನ್ನರ್ ಅಪ್ ಮ್ಯಾಟರ್ ಬಂದ್ರೆ, ಅಲ್ಲಿ ಒಂದು ಕಡೆಗೆ ತ್ರಿವಿಕ್ರಮ್ ಹೆಸರೂ ಇದೆ. ಉಗ್ರಂ ಮಂಜು ಹೆಸರೂ ಇದೆ. ಆದರೆ, ಫಿನಾಲೆಗೆ ಭವ್ಯ ಗೌಡ ಬಂದಿದ್ದಾರೆ. ರಜತ್ ಕಿಶನ್ ಕೂಡ ಇದ್ದಾರೆ. ಆದರೆ, ಇವರಲ್ಲಿ ಯಾರಾದರೂ ರನ್ನರ್ಅಪ್ ಆಗ್ತಾರಾ ಅನ್ನೂ ಕ್ವಶ್ಚನ್ ಕೂಡ ಇದೆ.
ಬಿಗ್ ಬಾಸ್ ಮನೆಯಲ್ಲಿ ಈ ವಾರ ಏನೂ ಆಟಗಳು ಇಲ್ಲ ಬಿಡಿ. ಇರೋದೆಲ್ಲ ನೆನಪುಗಳೇ ಆಗಿವೆ. ಒಂದು ಒಳ್ಳೆ ಊಟ ಮಾಡಿರೋ ಖುಷಿಯಲ್ಲೂ ಸ್ಪರ್ಧಿಗಳಿದ್ದಾರೆ. ತಮ್ಮ ಇಷ್ಟಾರ್ಥಗಳನ್ನ ಈಡೇರಿಸಿದ ಬಿಗ್ ಬಾಸ್ಗೆ ಫಿನಾಲೆ ಸ್ಪರ್ಧಿಗಳು ಥ್ಯಾಂಕ್ಸ್ ಕೂಡ ಹೇಳಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಹನುಮಂತ್ ಹಾಡಿ ಖುಷಿ ಪಟ್ಟಿದ್ದಾರೆ. ಅಷ್ಟೆ ಚೆನ್ನಾಗಿಯೇ ಆಟವನ್ನೂ ಆಡಿ ಗೆಲುವಿನ ಮಟ್ಟಕ್ಕೆ ತಲುಪಿದ್ದಾರೆ. ಜೊತೆಗೆ ಇದ್ದ ದೋಸ್ತ ಧನರಾಜ್ ಕೊನೆಗೆ ಎಡವಟ್ಟು ಮಾಡಿಕೊಂಡು ಮನೆಗೂ ಹೋಗಿದ್ದಾರೆ. ಆದರೆ, ಈ ಒಂದು ರೇಸ್ ಅಲ್ಲಿ ತ್ರಿವಿಕ್ರಮ್, ಉಗ್ರಂ ಮಂಜು, ರಜತ್, ಮೋಕ್ಷಿತಾ, ಭವ್ಯ ಗೌಡ ಎಲ್ಲರೂ ಗಟ್ಟಿಯಾಗಿಯೇ ನಿಂತಿದ್ದಾರೆ.
ಗಾರ್ಡನ್ ಏರಿಯಾದಲ್ಲಿ ಬಿಗ್ಬಾಸ್ ಪ್ರತಿಯೊಬ್ಬ ಸ್ಪರ್ಧಿಗಳ ಅಭಿಮಾನಿಗಳು ಆಗಮಿಸಿರುವುದು ವೀಡಿಯೋದಲ್ಲಿ ಕಂಡು ಬಂದಿದೆ. ಮೊದಲಿಗೆ ಮೋಕ್ಷಿತಾ ಪೈ ಅವರು ಅಭಿಮಾನಿಗಳ ಮುಂದೆ 'ನಾವು ಬಿಗ್ಬಾಸ್ ಮನೆಗೆ ಬಂದಿದ್ದು ಒಬ್ಬರೇ, ಆಡಿದ್ದು ಒಬ್ಬರೇ, ಗೆಲ್ಲೋದು ಕೂಡ ಒಬ್ಬರೇ' ಎಂದು ಡೈಲಾಗ್ ಹೊಡೆದಿದ್ದಾರೆ.
ಜೊತೆಗೆ ತ್ರಿವಿಕ್ರಮ್ ಅವರು ಕೂಡ, 'ಅಡೆತಡೆಗಳನ್ನೆಲ್ಲಾ ದಾಟಿಕೊಂಡು ನಿಮ್ಮಲ್ಲಿ ನಿಮ್ಮ ಅಣ್ಣನೋ ತಮ್ಮನೋ ನುಗ್ಗಿಕೊಂಡು ಬಂದು ನಿಂತುಕೊಂಡರೆ ಈ ರೀತಿಯಾಗಿ ಇರುತ್ತಾನೆ ಎಂದು ಅಂದುಕೊಳ್ಳಿ' ಎಂದು ತಮ್ಮ ಅಭಿಮಾನಿಗಳಿಗೆ ಹೇಳುತ್ತಾರೆ. ಇದು ತೀರಾ ಸಿನಿಮಾ ಡೈಲಾಗ್ ತರಹ ಇತ್ತು. ಆದರೂ ಅಭಿಮಾನಿಗಳು ತಮ್ಮ ನೆಚ್ಚಿನ ಸ್ಪರ್ಧಿಯ ಮಾತು ಕೇಳಿ ಶಿಳ್ಳೆ ಹೊಡೆದಿದ್ದಾರೆ.
ಇನ್ನೂ ಹನುಮಂತ ಗಾರ್ಡನ್ ಏರಿಯಾಗೆ ಆಗಮಿಸುತ್ತಿದ್ದಂತೆ ಅವರ ಅಭಿಮಾನಿಗಳು ವಿನ್ನರ್... ವಿನ್ನರ್... ವಿನ್ನರ್... ಎಂದು ಕೂಗಿದ್ದಾರೆ. ಇದರಿಂದಾಗಿ ಹನುಮಂತ ಗಾಬರಿಯಾಗಿದ್ದು ಕಂಡು ಬಂದಿದೆ. ಬಿಗ್ಬಾಸ್ ಮನೆಗೆ ಆಗಮಿಸಿದ ವೀಕ್ಷಕರನ್ನು ಕಂಡು ಹನುಮಂತ ಗಾಬರಿಯಿಂದಲೇ ಮಾತನಾಡಿದ್ದಾರೆ, 'ತಂಡಿ ಹೆಚ್ಚಾಗಿ, ನಿಮ್ಮ ನೋಡಿ ಹೆದರಿಕೆ ಬರ್ಲಿಕತ್ಯಾದಾ' ಎಂದು ಹೇಳಿದ್ದಾರೆ.
ಒಟ್ಟಾರೆ ಆರು ಜನರಲ್ಲಿ ಯಾರಿಗೆ ಕಪ್ ಸಿಗುತ್ತದೆ ಅನ್ನುವ ಕುತೂಹಲ ಜಾಸ್ತಿ ಆಗಿದೆ. ಎಲ್ಲರ ಕಣ್ಣು ಈ ಸ್ಪರ್ಧಿಗಳ ಮೇಲೇನೆ ಇದೆ. ಆದರೆ, ಈ ಸ್ಪರ್ಧಿಗಳ ಕಣ್ಣು ಬಿಗ್ ಬಾಸ್ ಟ್ರೋಫಿ ಮತ್ತು ಗೆದ್ದ ಮೇಲೆ ಬರೋ ದುಡ್ಡಿನ ಮೇಲೆ ಇದೆ ಅಂತಲೇ ಹೇಳಬಹುದು.
ನಿಮ್ಮ ಪ್ರತಿಕ್ರಿಯೆ ಏನು?






