BBK11: ಬಿಗ್ ಮನೆಯಲ್ಲಿ ನಾಮಿನೇಷನ್ ಕಾವು: ಆರೋಪ-ಪ್ರತ್ಯಾರೋಪಗಳ ಸುರಿಮಳೆ!

ಬಿಗ್ ಬಾಸ್ ಕನ್ನಡ 11’ ಕಾರ್ಯಕ್ರಮದಲ್ಲಿ ಈ ವಾರ ‘ಬಿಗ್ ಬಾಸ್’ ಮನೆ ‘ಬಿಗ್ ಬಾಸ್ ಸಾಮ್ರಾಜ್ಯ’ವಾಗಿ ಪರಿವರ್ತನೆ ಆಗಿದೆ. ಕ್ಯಾಪ್ಟನ್ ಮಂಜು ಮಹಾರಾಜ ಆಗಿದ್ದರೆ, ಇತರೆ ಸ್ಪರ್ಧಿಗಳೆಲ್ಲಾ ಪ್ರಜೆಗಳಾಗಿದ್ದಾರೆ.
ಈ ವಾರದ ಬಿಗ್ ಬಾಸ್ ಮನೆ ರಾಜರ ಮನೆ ಆಗಿದ್ದು, ಪ್ರಜೆಗಳಿಗೆಲ್ಲಾ ಕ್ಯಾಪ್ಟನ್ ಮಂಜು ರಾಜರಾಗಿದ್ದಾರೆ. ಅಲ್ಲದೇ ಒಬ್ಬರೋಬ್ಬರು ಸ್ಪರ್ಧಿಗಳು ದೂರುಕೊಳ್ಳುತ್ತಿದ್ದಾರೆ.
ಉಗ್ರಂ ಮಂಜು ಆಡಳಿತದಲ್ಲಿ ಎಲ್ಲವೂ ಅಲ್ಲೋಲ ಕಲ್ಲೋಲ ಆಗುತ್ತಿದೆ. ಆದರೆ, ಉಗ್ರಂ ಮಂಜು ಯಾವುದಕ್ಕೂ ಹೆದರುತ್ತಿಲ್ಲ. ತಮ್ಮ ಆಡಳಿತವನ್ನ ಭಯಂಕರವಾಗಿಯೇ ನಡೆಸುತ್ತಿದ್ದಾರೆ. ಇದರ ಪ್ರಮುಖ ಝಲಕ್ ಈ ದಿನದ ಮೊದಲ ಪ್ರೋಮೋದಲ್ಲಿಯೇ ರಿವೀಲ್ ಆಗಿದೆ. ಇದರ ಕುರಿತು ಇನ್ನಷ್ಟು ವಿವರ ಇಲ್ಲಿದೆ ಓದಿ.
ಬಿಗ್ ಬಾಸ್ ಮನೆಯಲ್ಲಿ ನಾಮಿನೇಷನ್ ಪ್ರಕ್ರಿಯೆ ಇದ್ದೇ ಇರುತ್ತದೆ. ಅದು ಈಗ ಶುರು ಆಗಿದೆ. ರಾಜನ ಮುಂದೇನೆ ಪ್ರಜೆಗಳು ಈ ಪ್ರಕ್ರಿಯೆಯಲ್ಲಿ ಭಾಗಿ ಆಗಿದ್ದಾರೆ. ತಮ್ಮ ಅರೋಪ ಮತ್ತು ಪ್ರತ್ಯಾರೋಪಗಳನ್ನ ಮಾಡಿದ್ದಾರೆ. ಆಯಾ ಸ್ಪರ್ಧಿಯ ಭಾವ ಚಿತ್ರವನ್ನ ಬಾಣದ ಮೂಲಕ ಹೊಡೆದು ನಾಮಿನೇಟ್ ಮಾಡಿದ್ದಾರೆ
ಮೋಕ್ಷಿತಾ ಪೈ ಮತ್ತು ತ್ರಿವಿಕ್ರಮ್ ಮಧ್ಯೆ ಕೋಲ್ಡ್ ವಾರ್ ಇದ್ದೇ ಇದೆ. ಉಗ್ರಂ ಮಂಜು ಮತ್ತು ಗೌತಮಿ ದೋಸ್ತಿ ಬಿಟ್ಟು ಬಂದ ಮೋಕ್ಷಿತಾ ಇದೀಗ ಎಲ್ಲರಿಗೂ ಮಂಜು ಬಗ್ಗೆ ಹೇಳುತ್ತಿದ್ದಾರೆ. ಗೌತಮಿ ಪಾಸಿಟಿವ್ ಅಲ್ವೇ ಅಲ್ಲ ಅಂತಲೂ ಹೇಳುತ್ತಿದ್ದಾರೆ. ಈ ಸತ್ಯ ಈಗ ಹೊರ ಬಂದಿದೆ.
ಆರೋಪ ಪ್ರತ್ಯಾರೋಪದಲ್ಲಿ ತ್ರಿವಿಕ್ರಮ್ ನೇರಾ ನೇರವಾಗಿಯೇ ಮೋಕ್ಷಿತಾ ಬಗ್ಗೆ ಹೇಳಿದ್ದಾರೆ. ಮೋಕ್ಷಿತಾ ನಿಜಕ್ಕೂ ಡೇಂಜರ್ ಆಗಿಯೇ ಇದ್ದಾರೆ. ಗೌತಮಿ ಪಾಸಿಟಿವ್ ಆಗಿಲ್ಲ ಅನ್ನೋದನ್ನ ಹೇಳಿದ್ದಾರೆ. ಇವರು ಎರಡು ತಲೆ ಹಾವು ಅಂತಲೇ ತ್ರಿವಿಕ್ರಮ್ ಹೇಳಿದ್ದಾರೆ. ನಾನು ಗೋಮುಖ ವ್ಯಾಘ್ರ ಅಂತ ಹೇಳಿದ್ದಾರೆ. ಆದರೆ, ಅಸಲಿಗೆ ಅದು ಮೋಕ್ಷಿತಾನೇ ಅಂತಲೇ ತ್ರಿವಿಕ್ರಮ್ ನೇರವಾಗಿಯೇ ದೂರಿದ್ದಾರೆ.
ಮೋಕ್ಷಿತಾ ಪೈ ಬೆನ್ನ ಹಿಂದೆ ಆಡಿದ ಮಾತುಗಳನ್ನ ಕೇಳಿದ ಗೌತಮಿ ಜಾದವ್ ಸಿಟ್ಟಾಗಿದ್ದಾರೆ. ಪಾಸಿಟಿವಿಟಿ ಅನ್ನೋದು ಬೇರೆಯವರಿಗೆ ತೋರಿಸೋಕೆ ಅಲ್ವೇ ಅಲ್ಲ. ಅದು ನನಗಾಗಿಯೇ ಇರೋದು ಅಂತಲೇ ಗೌತಮಿ ಜಾದವ್ ಕೆಂಡಾಮಂಡಲವಾಗಿಯೇ ಹೇಳಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






