Bengaluru: ಸಾಕು ನಾಯಿ ಕದ್ದೊಯ್ದ ಅಪರಿಚಿತರು - ವಾಕಿಂಗ್ ಕರೆದೊಯ್ದಾಗ ಕೃತ್ಯ!

ಎಪ್ರಿಲ್ 1, 2025 - 15:59
 0  10
Bengaluru: ಸಾಕು ನಾಯಿ ಕದ್ದೊಯ್ದ ಅಪರಿಚಿತರು - ವಾಕಿಂಗ್ ಕರೆದೊಯ್ದಾಗ ಕೃತ್ಯ!

ಬೆಂಗಳೂರು:- ಜಯನಗರದ 9ನೇ ಬ್ಲಾಕ್‌ನಲ್ಲಿ ಸಾಕು ನಾಯಿಯನ್ನು ವಾಕಿಂಗ್‌ಗೆ ಕರೆದೊಯ್ದ ವೇಳೆ ಕಳ್ಳರು ನಾಯಿಯನ್ನು ಕಿತ್ತುಕೊಂಡು ಪರಾರಿ ಆಗಿರುವ ಘಟನೆ ಜರುಗಿದೆ. 

ಮಧುರಾ ಎಂಬುವವರು ರೀಚಿ ಎಂಬ ಹೆಸರಿನ ನಾಯಿಯನ್ನು  ವಾಕಿಂಗ್‌ಗೆ ಕರೆದುಕೊಂಡು ಹೋಗಿದ್ದರು. ಈ ವೇಳೆ ಹೆಲ್ಮೆಟ್ ಹಾಕಿ ಬೈಕ್‌ನಲ್ಲಿ ಬಂದ ಅಪರಿಚಿತರು ಕೈಯಲ್ಲಿ ಹಿಡಿದಿದ್ದ ನಾಯಿಯನ್ನು ಕಿತ್ತುಕೊಂಡು ಪರಾರಿಯಾಗಿದ್ದರು. ಈ ಘಟನೆ ಕಳೆದ ತಿಂಗಳು ಮಾ. 12ರ ರಾತ್ರಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. 

ಸಿಸಿಟಿವಿಯಲ್ಲಿ ನಾಯಿ ಕಿತ್ತುಕೊಂಡು ಹೋಗಿರುವ ದೃಶ್ಯ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ನಾಯಿಯ ಮಾಲೀಕರು ತಿಲಕನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow