Bengaluru Crime: ಶೀಲ ಶಂಕಿಸಿ ಹೆಂಡತಿಯನ್ನೇ ಕೊಂದು ಹಾಕಿದ ಪಾಪಿ ಗಂಡ..!

ಬೆಂಗಳೂರು: ಗಂಡ ಹೆಂಡತಿ ಜಗಳ ಉಂಡು ಮಲಗುವತನಕ ಅನ್ನೋ ಮಾತಿದೆ. ಉಂಡು ಮಲಗಿದ ಬಳಿಕವೂ ಜಗಳ ನಡೆದ್ರೆ ಅದು ಸಂಸಾರ ಅಲ್ಲ ರಣರಂಗವಾಗೋದು ಪಕ್ಕ. ಇಲ್ಲೊಬ್ಬ ಗಂಡ ಅನುಮಾನದ ಭೂತಕ್ಕೆ ಪತ್ನಿಯ ಉಸಿರನ್ನೇ ನಿಲ್ಲಿಸಿದ್ದಾನೆ. ಗಂಡ-ಹೆಂಡಿರ ಮಧ್ಯೆ ನಡೆದ ಈ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ ಹೆಗ್ಗಡೆ ನಗರದ 1 ನೇ ಕ್ರಾಸ್ ನಲ್ಲಿ ನಡೆದಿದೆ.
ವೇಲಾರಮಣಿ (35) ಕೊಲೆಯಾದ ದುರ್ದೈವಿ. ಗಂಡ ಚಂದ್ರಶೇಖರ್ ನಿಂದ ಕತ್ತು ಹಿಸುಕಿ ಕೊಲೆ ಮಾಡಲಾಗಿದೆ. ನಿನ್ನೆ ಬೆಳಗ್ಗೆ 10 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಕೊಲೆ ಆರೋಪಿ ಪತಿ ಚಂದ್ರಶೇಖರ್, ಕ್ಯಾಬ್ ಡ್ರೈವರ್ ಆಗಿದ್ದ. ಅಲ್ಲದೇ 11 ವರ್ಷದ ಹಿಂದೆ ವೇಲಾರಮಣಿ ಜೊತೆ ಮದುವೆಯಾಗಿದ್ದ.
ಇವರ ಮದುವೆಗೆ ಸಾಕ್ಷಿ ಎಂಬಂತೆ ಇಬ್ಬರು ಮಕ್ಕಳು ಕೂಡ ಇದ್ದಾರೆ. ಮೃತ ಮೇಲಾರಮಣಿ, ಖಾಸಗಿ ಕಂಪನಿಯಲ್ಲಿ ಅಕೌಂಟೆಂಟ್ ಆಗಿದ್ದಳು ಎನ್ನಲಾಗಿದೆ. ಇನ್ನೂ ಫೋನ್ ನಲ್ಲೇ ಹೆಚ್ಚು ಮಾತನಾಡುತ್ತಿದ್ದ ಪತ್ನಿ ಮೇಲೆ ಗಂಡನಿಗೆ ಅನುಮಾನ ಮೂಡಿದೆ. ಇದೆ ವಿಚಾರಕ್ಕೆ ನಿನ್ನೆ ಇಬ್ಬರು ಮಕ್ಕಳು ಸ್ಕೂಲಿಗೆ ಹೋದ ಮೇಲೆ ದಂಪತಿಗಳಿಬ್ಬರ ನಡುವೆ ಗಲಾಟೆ ಆಗಿದೆ. ಗಲಾಟೆ ವಿಕೋಪಕ್ಕೆ ಹೋಗಿ ಹೆಂಡ್ತಿ ಕತ್ತು ಹಿಸುಕಿ ಪತಿ ಚಂದ್ರಶೇಖರ್ ಕೊಲೆ ಮಾಡಿದ್ದಾನೆ.
ಬಳಿಕ ತಾನೇ ಸಂಪಿಗೆಹಳ್ಳಿ ಠಾಣೆಗೆ ಹೋಗಿ ಆರೋಪಿ ಗಂಡ ಶರಣಾಗಿದ್ದಾನೆ. ನಂತ್ರ ಸ್ಥಳಕ್ಕೆ ತೆರಳಿದ್ದ ಸಂಪಿಗೆಹಳ್ಳಿ ಪೊಲೀಸರು, ಕೊಲೆ ಮಾಡಿದ ಸ್ಥಳ ಪರಿಶೀಲನೆ ನಡೆಸಿ ಮೃತ ದೇಹ ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ಹಸ್ತಾಂತರ ಮಾಡಿದ್ದಾರೆ. ಸಂಪಿಗೆಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ನಿಮ್ಮ ಪ್ರತಿಕ್ರಿಯೆ ಏನು?






