Bharath Bandh: ಇಂದು ಭಾರತ್ ಬಂದ್: ಏನಿರುತ್ತೆ? ಏನಿರಲ್ಲ? ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ
ನವದೆಹಲಿ: ಕೇಂದ್ರ ಸರ್ಕಾರದ ಕಾರ್ಮಿಕ ಮತ್ತು ರೈತ ವಿರೋಧಿ ನೀತಿಗಳಿಗೆ ವಿರೋಧವಾಗಿ, 10 ಪ್ರಮುಖ ಕಾರ್ಮಿಕ ಸಂಘಟನೆಗಳ ಒಕ್ಕೂಟವು ಇಂದು ದೇಶವ್ಯಾಪಿ ಭಾರತ್ ಬಂದ್ ಗೆ ಕರೆ ನೀಡಿದೆ. ಕೃಷಿ ಮತ್ತು ಗ್ರಾಮೀಣ ಕಾರ್ಮಿಕ ಸಂಘಟನೆಗಳ ಸಹಯೋಗದೊಂದಿಗೆ ಈ ಮುಷ್ಕರವನ್ನು ನಡೆಸಲಾಗುತ್ತಿದೆ. ಮೂಲಗಳ ಪ್ರಕಾರ, 25 ಕೋಟಿಗೂ ಅಧಿಕ ಕಾರ್ಮಿಕರು ಈ ಬಂದ್ನಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.
ಭಾರತ್ ಬಂದ್ಗೆ ಕರೆ ನೀಡಿದವರು ಯಾರು?
ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್ (AITUC)
ಭಾರತೀಯ ರಾಷ್ಟ್ರೀಯ ಟ್ರೇಡ್ ಯೂನಿಯನ್ ಕಾಂಗ್ರೆಸ್ (INTUC)
CITU, HMS, SEWA, LPF, UTUC
ಸಂಯುಕ್ತ ಕಿಸಾನ್ ಮೋರ್ಚಾ, ಗ್ರಾಮೀಣ ಕಾರ್ಮಿಕ ಸಂಘಗಳು
ರೈಲ್ವೆ, NMDC ಲಿಮಿಟೆಡ್, ಉಕ್ಕಿನ ಕೈಗಾರಿಕೆಗಳು ಸೇರಿದಂತೆ ಸಾರ್ವಜನಿಕ ವಲಯದ ಸಿಬ್ಬಂದಿ
ಬಂದ್ನ ಹಿನ್ನಲೆ:
ಒಕ್ಕೂಟಗಳ ಪ್ರಕಾರ, ಕೇಂದ್ರ ಸರ್ಕಾರವು ಕಾರ್ಮಿಕರ ಹಕ್ಕುಗಳನ್ನು ನಿರ್ಲಕ್ಷಿಸುತ್ತಿದ್ದು, ವೈಯಕ್ತಿಕ ಕಂಪನಿಗಳಿಗೆ ಅನುಕೂಲಕರ ಮತ್ತು ಕಾರ್ಮಿಕರಿಗೆ ಹಾನಿಕಾರಕ ನೀತಿಗಳನ್ನು ಅನುಸರಿಸುತ್ತಿದೆ. 17 ಅಂಶಗಳ ಬೇಡಿಕೆ ಪಟ್ಟಿ ಕಳೆದ ವರ್ಷ ಕಾರ್ಮಿಕ ಸಚಿವರಿಗೆ ಸಲ್ಲಿಸಿದರೂ, ಈವರೆಗೆ ಯಾವುದೇ ಕ್ರಮ ತೆಗೆದುಕೊಳ್ಳಲಾಗಿಲ್ಲ ಎಂದು ಸಂಘಟನೆಗಳು ದೂರವಿಟ್ಟಿವೆ.
ಪ್ರಮುಖ ಬೇಡಿಕೆಗಳು ಮತ್ತು ಆಕ್ಷೇಪಗಳು:
ಕಾರ್ಮಿಕ ನೀತಿಗಳ ಪುನರ್ವಿಮರ್ಶೆ
ನಿರುದ್ಯೋಗ ಮತ್ತು ಹಣದುಬ್ಬರದ ನಿಯಂತ್ರಣ
ಸಾರ್ವಜನಿಕ ಸೇವೆಗಳ ಖಾಸಗಿಕರಣಕ್ಕೆ ವಿರೋಧ
10 ವರ್ಷಗಳಿಂದ ಕಾರ್ಮಿಕ ಸಮ್ಮೇಳನ ನಡೆಸದ ಸರ್ಕಾರದ ವಿರುದ್ಧ ಆಕ್ರೋಶ
ನಿವೃತ್ತರನ್ನು ನೇಮಕ ಮಾಡುವ ಬದಲು ಯುವಕರಿಗೆ ಉದ್ಯೋಗ ಕಲ್ಪಿಸಬೇಕು
ಯಾರು ಭಾಗವಹಿಸುತ್ತಿದ್ದಾರೆ?
ಸಂಘಟಿತ ಮತ್ತು ಅಸಂಘಟಿತ ವಲಯದ ಕಾರ್ಮಿಕರು
ರೈತರು ಮತ್ತು ಗ್ರಾಮೀಣ ಕಾರ್ಮಿಕರು
ಸಾರ್ವಜನಿಕ ವಲಯದ ಉದ್ಯೋಗಿಗಳು
ಬಂದ್ನ ಪರಿಣಾಮ:
ಶಾಲಾ-ಕಾಲೇಜುಗಳು, ಸರ್ಕಾರಿ ಕಚೇರಿ ಕಾರ್ಯಾಚರಣೆಯಲ್ಲಿ ಅಡೆತಡೆ
ಟ್ರಾಫಿಕ್ ಜಾಮ್, ರಸ್ತೆ ತಡೆ, ಮೆರವಣಿಗೆಗಳು ನಿರೀಕ್ಷಿತ
ನಿಮ್ಮ ಪ್ರತಿಕ್ರಿಯೆ ಏನು?