Bigg Boss: ಇದೊಂದು ಬಾರಿ ಗೆಳೆಯನನ್ನು ನೀರಲ್ಲಿ ಮುಳುಗಿಸಬೇಡಿ ಎಂದ ಉಗ್ರಂ ಮಂಜು! ಯಾಕೆ ಗೊತ್ತಾ..?

ಫಿನಾಲೆಗೆ ಇನ್ನು ಕೆಲವೇ ದಿನ ಬಾಕಿ ಇದೆ. ಬಿಗ್ ಬಾಸ್ ಕೊನೆ ಹಂತಕ್ಕೆ ಬಂದ ಹಿನ್ನೆಲೆಯಲ್ಲಿ ದಿನಕ್ಕೊಂದು ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ವಾರದಿಂದ ವಾರಕ್ಕೆ ಸ್ಪರ್ಧಿಗಳ ಸಂಖ್ಯೆಯಲ್ಲಿ ಕಡಿಮೆ ಆಗಿದೆ. ಸದ್ಯ 9 ಸ್ಪರ್ಧಿಗಳಿದ್ದು ಈ ವಾರ ಇದರಲ್ಲಿ ಇನ್ನೊಬ್ಬರು ಅಥವಾ ಇಬ್ಬರು ಜಾಗ ಖಾಲಿ ಮಾಡಬಹುದು. ಇದರ ಬೆನ್ನಲ್ಲೇ ಸ್ಪರ್ಧಿಗಳಲ್ಲೇ ಫಿನಾಲೆಗೆ ಆಯ್ಕೆ ನಡೆಯುತ್ತಿದ್ದು,
ಟಾಸ್ಕ್ಗಳು ಸಹ ಕಠಿಣ ಆಗುತ್ತಲೇ ಸಾಗುತ್ತಿವೆ. ಇದೀಗ ಕಠಿಣವಾದ ಟಾಸ್ಕ್ ಒಂದನ್ನು ಬಿಗ್ಬಾಸ್ ಸ್ಪರ್ಧಿಗಳಿಗೆ ನೀಡಿದ್ದಾರೆ. ಸತತವಾಗಿ ನೀರು ತುಂಬುತ್ತಿರುವ ತೊಟ್ಟಿಯಲ್ಲಿ ಒಬ್ಬ ಸ್ಪರ್ಧಿ ಮಲಗಬೇಕು, ಮತ್ತೊಬ್ಬ ಸ್ಪರ್ಧಿ ಆ ತೊಟ್ಟಿಯಿಂದ ನೀರನ್ನು ತೆಗೆದುಕೊಂಡು ಹೋಗಿ ದೂರದಲ್ಲಿ ಇರಿಸಿರುವ ಟ್ಯಾಂಕ್ಗೆ ಸುರಿಯಬೇಕು,
ಯಾರು ಹೆಚ್ಚು ಸಮಯ ಇನ್ನೊಬ್ಬ ಸ್ಪರ್ಧಿಯನ್ನು ಮುಳುಗಿಸದೆ ನೋಡಿಕೊಳ್ಳುತ್ತಾರೋ ಅವರು ಗೆದ್ದಂತೆ. ಈ ಟಾಸ್ಕ್ನಲ್ಲಿ ಗೌತಮಿ ಮತ್ತು ಉಗ್ರಂ ಮಂಜು ಆಡಿದ್ದಾರೆ. ‘ಇದೊಂದು ಬಾರಿ ಗೆಳೆಯನನ್ನು ನೀರಲ್ಲಿ ಮುಳುಗಿಸಬೇಡಿ’ ಎಂದು ಗೌತಮಿ ಬಳಿ ಮನವಿ ಮಾಡಿದ್ದಾರೆ. ಇದೀಗ ಹೊಸ ಪ್ರೋಮೋ ಔಟ್ ಆಗಿದೆ. ಟಿಕೆಟ್ ಟು ಫಿನಾಲೆಗಾಗಿ ಬಿಗ್ ಬಾಸ್ ಸ್ಪರ್ಧಿಗಳು ಜಿದ್ದಾಜಿದ್ದಿನ ಆಟಕ್ಕಿಳಿದಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






